ಕರ್ನಾಟಕ

karnataka

By

Published : Dec 30, 2022, 8:42 AM IST

Updated : Dec 30, 2022, 5:34 PM IST

ETV Bharat / bharat

ಅಮ್ಮನ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ಪ್ರಧಾನಿ ಮೋದಿ: ಪಂಚಭೂತಗಳಲ್ಲಿ ಹೀರಾಬೆನ್​ ಲೀನ

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಅವರ ಅಂತ್ಯಕ್ರಿಯೆ ಇಂದು ಬೆಳಗ್ಗೆ ನೆರವೇರಿತು. ಕುಟುಂಬ ಸದಸ್ಯರು ಹಾಗು ಎಲ್ಲ ಸಹೋದರ ಸಮ್ಮುಖದಲ್ಲಿ ಮೋದಿ ತಾಯಿಯ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.

narendra-modi-carries-the-mortal-remains
ತಾಯಿಯ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಲಿರುವ ಮೋದಿ.

ಪಂಚಭೂತಗಳಲ್ಲಿ ಹೀರಾಬೆನ್​ ಲೀನ

ಅಹಮದಾಬಾದ್(ಗುಜರಾತ್​): ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್​ ಮೋದಿ ಅವರು ಪಂಚಭೂತಗಳಲ್ಲಿ ಲೀನವಾದರು. ಗುಜರಾತ್​ನ ಅಹಮದಾಬಾದ್​ನಲ್ಲಿ ಇಂದು ಬೆಳಗ್ಗೆ ಅವರ ಅಂತ್ಯಸಂಸ್ಕಾರ ನೆರವೇರಿತು. ಪ್ರಧಾನಿ ಮೋದಿ ಮತ್ತು ಅವರ ಹಿರಿಯ ಸಹೋದರ ಸೋಮಾಭಾಯಿ ಅವರು ಹೀರಾಬೆನ್ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ನೀಡಿದರು.

ಅನಾರೋಗ್ಯದ ಕಾರಣದಿಂದ ಹೀರಾಬೆನ್​ ಅವರನ್ನು ಡಿ.28ರಂದು ಅಹಮದಾಬಾದ್​ನ ಯುಎನ್​ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ದಿನವೇ ನರೇಂದ್ರ ಮೋದಿ ಅಹಮದಾಬಾದ್​ಗೆ ಬಂದು ಆರೋಗ್ಯ ವಿಚಾರಿಸಿದ್ದರು. ಆದರೆ, ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಹೀರಾಬೆನ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ವಿಷಯ ತಿಳಿದ ಮೋದಿ ದೆಹಲಿಯಿಂದ ಮುಂಜಾನೆಯೇ ವಿಮಾನದಲ್ಲಿ ಬಂದು ತಾಯಿಯ ಅಂತಿಮ ದರ್ಶನ ಪಡೆದರು. ಪುಷ್ಪ ನಮನ ಸಲ್ಲಿಸಿ, ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.

ತಾಯಿಯ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಪಾರ್ಥಿವ ಶರೀರಕ್ಕೆ ಪ್ರಧಾನಿ ಮೋದಿ ಹೆಗಲುಕೊಟ್ಟರು. ಬಳಿಕ ಅಹಮದಾಬಾದ್​​ನ ಶವಾಗಾರದಲ್ಲಿ ಅಂತಿಮ ಕ್ರಿಯೆಗಳನ್ನು ಪೂರೈಸಲಾಯಿತು. ಎಲ್ಲ ಸಹೋದರರ ಜೊತೆ ಸೇರಿ ತಾಯಿ ಹೀರಾಬೆನ್​ ಅವರ ಪಾರ್ಥಿವ ಶರೀರಕ್ಕೆ ಮೋದಿ ಅಗ್ನಿಸ್ಪರ್ಶ ಮಾಡಿದರು. ಹಿಂದೂ ಸನಾತನ ಪದ್ಧತಿಯಂತೆ ಹೀರಾಬೆನ್ ಅವರ ಅಂತಿಮ ವಿಧಿವಿಧಾನಗಳು ನಡೆದವು.

ಗಣ್ಯರಿಂದ ಸಂತಾಪ:ಹೀರಾಬೆನ್​ ನಿಧನದ ಹಿನ್ನೆಲೆಯಲ್ಲಿ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್​ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಎಲ್ಲ ಕೇಂದ್ರ ಸಚಿವರು, ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ವಿವಿಧ ರಾಜಕೀಯ ಪಕ್ಷದ ಹಿರಿಯರು, ವಿವಿಧ ಕ್ಷೇತ್ರಗಳ ಪ್ರಮುಖರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

"ಹೀರಾಬೆನ್ ಮೋದಿಯವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಪ್ರೀತಿಯ ತಾಯಿಯನ್ನು ಕಳೆದುಕೊಂಡಿರುವ ನರೇಂದ್ರ ಮೋದಿ ಅವರಿಗೆ ನನ್ನ ಹೃದಯಪೂರ್ವಕ ಸಂತಾಪಗಳು. ಈ ಘಳಿಗೆಯಲ್ಲಿ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಇಡೀ ಕುಟುಂಬದೊಂದಿಗೆ ಇರುತ್ತವೆ" ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿ ತಾಯಿ ಅಗಲಿಕೆಗೆ ರಾಜ್ಯ ನಾಯಕರ ಕಂಬನಿ

ಸಂತಾಪ ಸೂಚಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇಡೀ ಜಗತ್ತಿನಲ್ಲಿ ಯಾವುದೇ ಮಗನಿಗೆ ತಾಯಿಯ ನಿಧನ ಅಸಹನೀಯವಾದದ್ದು, ಸುದ್ದಿ ಕೇಳಿ ನನಗೆ ದುಃಖವಾಗಿದೆ ಎಂದು ಹೇಳಿದ್ದಾರೆ. ಅದೇ ರೀತಿಯಾಗಿ ಹೀರಾಬೆನ್ ಅಗಲಿಕೆಯ ದುಃಖ ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.

ದೇಶದ ಜನತೆಗೆ ಧನ್ಯವಾದ ಸಲ್ಲಿಸಿದ ಮೋದಿ ಕುಟುಂಬ:ಹೀರಾಬೆನ್ ಅಗಲಿಕೆಯಿಂದ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ ಗಣ್ಯರು, ದೇಶವಾಸಿಗಳು, ಅಭಿಮಾನಿಗಳಿಗೆ ಕುಟುಂಬ ಸದಸ್ಯರು ಧನ್ಯವಾದ ತಿಳಿಸಿದ್ದಾರೆ. ಜನರು ಎಂದಿನಂತೆ ತಮ್ಮ ದೈನಂದಿನ ಕೆಲಸ ನಿರ್ವಹಿಸುವುದೇ ಹೀರಾಬೆನ್​ ಅವರಿಗೆ ನೀಡುವ ಸೂಕ್ತವಾದ ಗೌರವವಾಗಿದೆ ಎಂದು ಮೋದಿ ಕುಟುಂಬ ಹೇಳಿದೆ.

ಈ ಕಷ್ಟದ ಸಮಯದಲ್ಲಿ ಅವರ ಪ್ರಾರ್ಥನೆಗಳಿಗಾಗಿ ನಾವು ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇವೆ. ಅಗಲಿದ ಆತ್ಮವನ್ನು ಅವರ ಆಲೋಚನೆಗಳಲ್ಲಿ ಇರಿಸಿಕೊಳ್ಳಲು ಮತ್ತು ಅವರ ಪೂರ್ವನಿರ್ಧರಿತ ವೇಳಾಪಟ್ಟಿ ಮತ್ತು ಬದ್ಧತೆಗಳೊಂದಿಗೆ ಮುಂದುವರಿಯಲು ನಮ್ಮ ವಿನಮ್ರ ವಿನಂತಿಯಾಗಿದೆ. ಅದು ಹೀರಾಬಾಗೆ ಸೂಕ್ತವಾದ ಗೌರವವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನು ಓದಿ:ಹೀರಾಬೆನ್​ ಇನ್ನಿಲ್ಲ.. ಶತಾಯುಷಿ ತಾಯಿಯ ಜೀವನ ಹೀಗಿತ್ತು!

Last Updated : Dec 30, 2022, 5:34 PM IST

ABOUT THE AUTHOR

...view details