ಕೋನಸೀಮಾ (ಆಂಧ್ರಪ್ರದೇಶ): ಇಂದು ನಂದ್ಯಾಲ ಜಿಲ್ಲೆಯಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಮಾಜಿ ಸಚಿವ ಗಂಟಾ ಶ್ರೀನಿವಾಸ ಅವರನ್ನು ಸಹ ಬಂಧಿಸಲಾಗಿದೆ. ಆದ್ರೆ ತಂದೆ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ಬಂಧನದ ಸುದ್ದಿ ತಿಳಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಪ್ರತಿಭಟನೆ ಕೈಗೊಂಡಿದ್ದಾರೆ.
ಚಂದ್ರಬಾಬು ಬಂಧನವಾಗುತ್ತಿರುವ ಮಾಹಿತಿಯೊಂದಿಗೆ ಕೋನಸೀಮಾ ಜಿಲ್ಲೆಯ ರಾಜೋಲು ತಾಲೂಕಿನಿಂದ ನಾರಾ ಲೋಕೆಶ್ ವಿಜಯವಾಡಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಈ ವೇಳೆ ಪೊಲೀಸರು ನಾರಾ ಲೋಕೇಶ್ರನ್ನು ತಡೆದ ಪ್ರಸಂಗ ನಡೆಯಿತು. ಈ ಕ್ರಮದಲ್ಲಿ ಲೋಕೇಶ್ ರಾಜು ಸಿಐ ಗೋವಿಂದರಾಜು ಅವರೊಂದಿಗೆ ವಾಗ್ವಾದಕ್ಕಿಳಿದರು. ಯಾವುದೇ ರೀತಿಯ ನೋಟಿಸ್ ನೀಡದಂತೆ ತಡೆಯುವುದು ಹೇಗೆ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ನಾಯಕರು ನನ್ನೊಂದಿಗೆ ಬರುತ್ತಿಲ್ಲ. ಕುಟುಂಬದ ಸದಸ್ಯನಾಗಿ ಒಬ್ಬನೇ ಹೋಗುತ್ತಿದ್ದೇನೆ. ನಿಮಗೆ ತಡೆಯುವ ಹಕ್ಕು ಕೊಟ್ಟವರು ಯಾರು ಎಂದು ಪೊಲೀಸರಿಗೆ ನಾರಾ ಲೋಕೇಶ್ ಪ್ರತಿಭಟಿಸಿದರು. ತಂದೆ ಚಂದ್ರಬಾಬು ಅವರ ಬಂಧನವನ್ನು ಖಂಡಿಸಿದ ಮಗ ನಾರಾ ಲೋಕೇಶ್ ಕ್ಯಾಂಪ್ ಸೈಟ್ ಮುಂಭಾಗ ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಲೋಕೇಶ್ ತಂಗಿದ್ದ ಸ್ಥಳಕ್ಕೆ ಮಾಧ್ಯಮದವರು ಭೇಟಿ ನೀಡದಂತೆ ಪೊಲೀಸರು ನಿರ್ಬಂಧಿಸಿದ್ದಾರೆ.