ಕರ್ನಾಟಕ

karnataka

ETV Bharat / bharat

ಅಸನಿ ಚಂಡಮಾರುತ: ಆಂಧ್ರದ ಸಮುದ್ರ ತೀರಕ್ಕೆ ತೇಲಿ ಬಂತು ನಿಗೂಢ ಚಿನ್ನದ ಬಣ್ಣದ ರಥ! - ಸಮುದ್ರ ತೀರಕ್ಕೆ ತೇಲಿಬಂದ ನಿಗೂಢ ಚಿನ್ನದ ರಥ

ಅಸನಿ ಚಂಡಮಾರುತದ ಪ್ರಭಾವದಿಂದ ಆಂಧ್ರಪ್ರದೇಶದ ಶ್ರೀಕಾಕುಳಂ ಸುನ್ನಪಲ್ಲಿ ಬಂದರಿನ ದಡಕ್ಕೆ ನಿಗೂಢ ಚಿನ್ನದ ಬಣ್ಣದ ರಥವೊಂದು ತೇಲಿ ಬಂದಿದೆ.

ಚಿನ್ನದ ಬಣ್ಣದ ರಥ
ತೇಲಿ ಬಂತು ಚಿನ್ನದ ಬಣ್ಣದ ರಥ

By

Published : May 11, 2022, 3:02 PM IST

Updated : May 11, 2022, 5:59 PM IST

ಶ್ರೀಕಾಕುಳಂ(ಆಂಧ್ರಪ್ರದೇಶ):ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಸನಿ ಚಂಡಮಾರುತ ಈಗಾಗಲೇ ಆಂಧ್ರಪ್ರದೇಶಕ್ಕೆ ಲಗ್ಗೆ ಹಾಕಿದ್ದು, ತನ್ನ ಆರ್ಭಟ ಶುರು ಮಾಡಿದೆ. ಇದರ ಮಧ್ಯೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಚಿನ್ನದ ಬಣ್ಣ ಹೋಲಿಕೆಯ ರಥವೊಂದು ಸಮುದ್ರದಲ್ಲಿ ತೇಲಿ ಬಂದಿದೆ. ಆಂಧ್ರಪ್ರದೇಶದ ಸಂತಬೊಮ್ಮಲಿ ಮಂಡಲದ ಸುನ್ನಪಲ್ಲಿಯ ಕರಾವಳಿ ತೀರದಲ್ಲಿ ಈ ಘಟನೆ ನಡೆದಿದೆ.

ಆಂಧ್ರದ ಸಮುದ್ರ ತೀರಕ್ಕೆ ತೇಲಿ ಬಂತು ನಿಗೂಢ ಚಿನ್ನದ ರಥ!

ಅಸನಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಈ ಚಿನ್ನದ ಬಣ್ಣ ಹೋಲಿಕೆಯ ರಥ ತೇಲಿ ಬರುತ್ತಿರುವುದನ್ನ ನೋಡಿರುವ ಕೆಲವರು ಅದನ್ನ ಎಳೆದು ದಡಕ್ಕೆ ತಂದು ನಿಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶ್ರೀಕಾಕುಳಂ ಜಿಲ್ಲೆಯ ಸಬ್​​ ಇನ್ಸ್​​ಪೆಕ್ಟರ್​​, ಬೇರೆ ದೇಶದಿಂದ ತೇಲಿ ಬಂದಿರುವ ಸಾಧ್ಯತೆ ಇದ್ದು, ಇದಕ್ಕೆ ಸಂಬಂಧಿಸಿದಂತೆ ಗುಪ್ತಚರ ಮತ್ತು ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.

ಆಂಧ್ರದ ಸಮುದ್ರ ತೀರಕ್ಕೆ ತೇಲಿ ಬಂತು ನಿಗೂಢ ಚಿನ್ನದ ರಥ!

ಮಲೇಶಿಯಾ, ಥಾಯ್ಲೆಂಡ್​​ ಅಥವಾ ಜಪಾನ್​​ನಿಂದ ತೇಲಿ ಬಂದಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ರಥವನ್ನ ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಅಸನಿ ಚಂಡಮಾರುತ ಅಬ್ಬರ ಜೋರಾಗಿರುವ ಕಾರಣ ಈಗಾಗಲೇ ಆಂಧ್ರಪ್ರದೇಶದಲ್ಲಿ ರೆಡ್​ ಅಲರ್ಟ್​​ ಘೋಷಣೆ ಮಾಡಲಾಗಿದ್ದು, ಎಸ್​​ಡಿಆರ್​ಎಫ್​ ಮತ್ತು ಎನ್​​ಡಿಆರ್​​ಎಫ್​​​ ತಂಡ ವಿವಿಧ ಸ್ಥಳಗಳಲ್ಲಿ ನಿಯೋಜನೆಗೊಂಡಿವೆ.

ನಿಗೂಢ ಚಿನ್ನದ ಬಣ್ಣದ ರಥ
Last Updated : May 11, 2022, 5:59 PM IST

ABOUT THE AUTHOR

...view details