ಕರ್ನಾಟಕ

karnataka

ETV Bharat / bharat

ಮದುವೆ ಭರವಸೆ.. ಯುವತಿಗೆ ನಂಬಿಸಿ ತಂದೆ ಮಗನಿಂದ ಅತ್ಯಾಚಾರ - ವಕೀಲರೊಬ್ಬರ ಸಮ್ಮುಖದಲ್ಲಿ ನಕಲಿ ಮದುವೆ

ಮದುವೆಯ ನೆಪದಲ್ಲಿ ಇಬ್ಬರೂ ಪ್ರತ್ಯೇಕ ಸ್ಥಳಗಳಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಕುರಿತು ನಿಶಾತ್ಪುರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.

A casual picture
ಸಾಂದರ್ಭಿಕ ಚಿತ್ರ

By

Published : Nov 27, 2022, 11:07 PM IST

ಭೋಪಾಲ್(ಮಧ್ಯಪ್ರದೇಶ):ಮದುವೆಯ ನೆಪದಲ್ಲಿ ಇಬ್ಬರೂ ಬೇರೆ ಬೇರೆ ಸಂದರ್ಭಗಳಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಕುರಿತು ನಿಶಾತ್‌ಪುರ ಠಾಣೆಯಲ್ಲಿ ತಂದೆ ಮತ್ತು ಮಗನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮದುವೆಯ ಭರವಸೆ ನೀಡಿ ತನ್ನನ್ನು ದೈಹಿಕ ಶೋಷಣೆ ಮಾಡಿದ್ದಾರೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸಂತ್ರಸ್ತೆಯ ದೂರಿನ ಮೇರೆಗೆ ತಂದೆ ಮತ್ತು ಮಗನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಛೋಲಾ ಮಂದಿರ ಪ್ರದೇಶದ ನಿವಾಸಿಯಾಗಿದ್ದು, ಆಕೆ 2019 ರಿಂದ ಕಾಸ್ಮೆಟಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿ ಇಬ್ರಾಹಿಂ ಅಲಿಯಾಸ್ ಸಮೀರ್ ಕೂಡ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಇಬ್ಬರಲ್ಲಿ ಸ್ನೇಹ ಬೆಳೆದು ಮುಂದೆ ಪ್ರೀತಿಗೆ ತಿರುಗಿದೆ. ಪ್ರೀತಿಗೆ ಮರುಳಾಗಿದ್ದ ಯುವತಿಯನ್ನು ಇಬ್ರಾಹಿಂ ಮದುವೆಯಾಗುವುದಾಗಿ ನಂಬಿಸಿ, ಅಂಗಡಿಯ ಗೋದಾಮಿಗೆ ಕರೆದು ದೈಹಿಕ ಹಿಂಸೆ ನೀಡುತ್ತಿದ್ದನು ಹಾಗೂ ಮಾರ್ಕೆಟ್ ಬಳಿಯ ಹೋಟೆಲ್‌ಗೆ ಭೇಟಿಯಾಗುವ ನೆಪದಲ್ಲಿ ತನಗೆ ಕರೆ ಮಾಡಿ ಹಲವು ಬಾರಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಯುವತಿ ಮದುವೆಗೆ ಒತ್ತಾಯಿಸಿದಾಗ, ಇಬ್ರಾಹಿಂ ತನ್ನಿಂದ ದೂರಾಗಲು ಯತ್ನಿಸಿದನು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ಇಬ್ರಾಹಿಂ ಅತ್ಯಾಚಾರ ಎಸಗಿರುವ ಕುರಿತು ಯುವತಿಯು ಇಬ್ರಾಹಿಂ ತಂದೆ ಬಳಿ ದೂರು ಹೇಳಿಕೊಂಡಿದ್ದಾಳೆ. ಆರೋಪಿ ತಂದೆ ಸಾಜಿದ್ ಅವರು, ಇಬ್ಬರ ಮದುವೆ ಮಾಡುವುದಾಗಿ ಭರವಸೆ ನೀಡಿ, ಬ್ರಿಕ್ಖೇಡಿ ಪ್ರದೇಶಕ್ಕೆ ಕರೆದೊಯ್ದ ಅತ್ಯಾಚಾರ ಎಸಗಿದ್ದಾರಂತೆ. ಇಷ್ಟೆಲ್ಲಾ ಆದ ನಂತರವೂ ಸಾಜಿದ್ ನು ಮಗನ ಮದುವೆ ಮಾಡಲು ಇನ್ನೂ ಸಿದ್ಧವಾಗಿಲ್ಲವಂತೆ. ಮದುವೆಗೆ ನಿರಾಕರಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಪೊಲೀಸರಿಗೆ ದೂರು ನೀಡುವುದಾಗಿ ಯುವತಿ ತಿಳಿಸಿದ್ದಾಳೆ. ಇದಕ್ಕೆ ಹೆದರಿದ ಆರೋಪಿಗಳು ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಕೀಲರೊಬ್ಬರ ಸಮ್ಮುಖದಲ್ಲಿ ನಕಲಿ ಮದುವೆ ಮಾಡಿಸಿರುವುದು ಬೆಳಕಿಗೆ ಬಂದಿದೆ. ಇದಾದ ನಂತರ ಇಬ್ರಾಹಿಂ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆದೊಯ್ದರು. ಕೆಲವು ದಿನಗಳ ಕಾಲ ಒಟ್ಟಿಗೆ ಇಟ್ಟುಕೊಂಡು, ನಂತರ ಅವಳನ್ನು ಮನೆಯಿಂದ ಓಡಿಸಿದ್ದಾರೆ. ಶನಿವಾರ ನಿಶಾತ್‌ಪುರ ಪೊಲೀಸ್ ಠಾಣೆಗೆ ತೆರಳಿ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ:ರೈಲು ನಿಲ್ದಾಣದಲ್ಲಿ ಏಕಾಏಕಿ ಕುಸಿದು ಬಿದ್ದ ಪಾದಚಾರಿ ಸೇತುವೆ.. 20 ಮಂದಿಗೆ ಗಾಯ, 8 ಜನರ ಸ್ಥಿತಿ ಗಂಭೀರ

ABOUT THE AUTHOR

...view details