ಕರ್ನಾಟಕ

karnataka

ETV Bharat / bharat

ಜಲಿಯನ್​ ವಾಲಾಬಾಗ್​ ಹತ್ಯಾಕಾಂಡದ ಸ್ಥಳವಲ್ಲ, ಈ ಸ್ಮಾರಕ ಇಡೀ ವಿಶ್ವಕ್ಕೆ ಸ್ಫೂರ್ತಿ: ನಮೋ - ಪ್ರಧಾನಿ ನರೇಂದ್ರ ಮೋದಿ

ಪಂಜಾಬ್​ನ ಅಮೃತಸರದಲ್ಲಿ ಜಲಿಯನ್​ ವಾಲಾಬಾಗ್ ನವೀಕರಿಸಿದ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಈ ವೇಳೆ ಆ ಸ್ಥಳದ ಗುಣಗಾನ ಮಾಡಿದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

By

Published : Aug 28, 2021, 8:44 PM IST

ಅಮೃತಸರ(ಪಂಜಾಬ್):ವಿಡಿಯೋ ಕಾನ್ಫರೆನ್ಸ್ ಮೂಲಕ ಜಲಿಯನ್ ವಾಲಾಬಾಗ್​ ನವೀಕರಿಸಿದ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ, ಜಲಿಯನ್​ ವಾಲಾಬಾಗ್​​ ಹತ್ಯಾಕಾಂಡದ ಸ್ಥಳವಲ್ಲ, ಬದಲಿಗೆ ಇಡೀ ವಿಶ್ವಕ್ಕೆ ಸ್ಫೂರ್ತಿಯ ಸ್ಮಾರಕ ಎಂದು ಹೇಳಿದರು.

ಪಂಜಾಬ್ ಯುವಜನರ ಗುಣಗಾನ ಮಾಡಿದ ನಮೋ

ಪಂಜಾಬ್​​ನಲ್ಲಿ ಧೈರ್ಯ, ಶೌರ್ಯ ಹೊಂದಿರುವ ಜನರು ಹೆಚ್ಚು. ಹಿರಿಯರು ಹಾಕಿಕೊಟ್ಟ ಮಾರ್ಗ ಅನುಸರಿಸುವ ಪಂಜಾಬಿನ ಯುವ ಜನತೆ, ಭಾರತ ಮಾತೆಯ ಮೇಲೆ ವಕ್ರದೃಷ್ಟಿ ಬೀರುವವರ ಎದುರಿಗೆ ಬಂಡೆಗಲ್ಲಿನಂತೆ ನಿಲ್ಲುತ್ತಾರೆಂದು ಪಂಜಾಬ್ ಯುವಜನತೆಯ ಗುಣಗಾನ ಮಾಡಿದ್ದಾರೆ.

ಚಂದ್ರಶೇಖರ್ ಅಜಾದ್​ಗೆ ಸ್ಮಾರಕ ಸಮರ್ಪಣೆ

ಜಲಿಯನ್​ ವಾಲಾಬಾಗ್​ ಸ್ಮಾರಕವನ್ನು ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಅಜಾದ್​​​ಗೆ ಸಮರ್ಪಿಸಲಾಗಿದೆ. ಇನ್ನೂ ಹಲವಾರು ಸ್ಮಾರಕಗಳ ನವೀಕರಣ ಪ್ರಗತಿಯಲ್ಲಿದ್ದು, ಭಾರತದ ಮೊದಲ ಸಂವಾದಾತ್ಮಕ ಗ್ಯಾಲರಿಯನ್ನು ಉತ್ತರಪ್ರದೇಶದ ಅಲಹಾಬಾದ್​ನಲ್ಲಿ ನಿರ್ಮಿಸಲಾಗುತ್ತಿದೆ ಎಂದರು.

ಇದೇ ವೇಳೆ ಭಾರತದ ಇತಿಹಾಸವನ್ನ ಬರುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ನಮ್ಮ ಪರಂಪರೆಯನ್ನ ಉಳಿಸಬೇಕಾಗಿದೆ ಎಂದರು. ಜಲಿಯನ್​ ವಾಲಾಬಾಗ್​ ಹತ್ಯಾಕಾಂಡದಲ್ಲಿ ಅನೇಕರು ಬಲಿಯಾಗಿದ್ದು, ಮುಗ್ಧ ಬಾಲಕರು, ಸಹೋದರರು, ಸಹೋದರಿಯರ ಕನಸು ಈಗಲೂ ಇಲ್ಲಿನ ಗೋಡೆಗಳಲ್ಲಿ ನಾಟಿರುವ ಬುಲೆಟ್​ಗಳ ಮೇಲೆ ಕಾಣುತ್ತೇವೆ ಎಂದರು.

9 ರಾಜ್ಯಗಳಲ್ಲಿ ವಸ್ತು ಸಂಗ್ರಹಾಲಯ

ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಬುಡಕಟ್ಟು ಸಮುದಾಯ ಪ್ರಮುಖ ಪಾತ್ರ ವಹಿಸಿದೆ. ಆದರೆ, ಅವರ ತ್ಯಾಗ, ಹೋರಾಟಗಳನ್ನು ಇತಿಹಾಸದಲ್ಲಿ ಉಲ್ಲೇಖಿಸಿಲ್ಲ. ಆದಿವಾಸಿ ಸ್ವಾತಂತ್ರ್ಯ ಹೋರಾಟಗಾರರ ಹೋರಾಟವನ್ನು ಪ್ರದರ್ಶಿಸಲು ದೇಶದ 9 ರಾಜ್ಯಗಳಲ್ಲಿ ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಆಗಸ್ಟ್ 14 ನ್ನು ವಿಭಜನೆಯ ಭಯಾನಕ ಸ್ಮರಣೆ ದಿನ

ದೇಶ ವಿಭಜನೆಯ ಸಮಯದಲ್ಲಿ ಭಾರತೀಯರು ಅನುಭವಿಸಿದ ನೋವು ಸಂಕಟಗಳನ್ನು ನೆನಪಿನಲ್ಲಿಟ್ಟುಕೊಂಡು ಆಗಸ್ಟ್ 14 ನ್ನು ವಿಭಜನೆಯ ಭಯಾನಕ ಸ್ಮರಣೆ ದಿನವೆಂದು ಆಚರಿಸಲಾಗುತ್ತಿದೆ. ಜಲಿಯನ್ ವಾಲಾಬಾಗ್ ಸರ್ದಾರ್ ಉದಮ್ ಸಿಂಗ್ ಮತ್ತು ಭಗತ್ ಸಿಂಗ್​ರಂತಹ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ದೇಶಧ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಲು ಧೈರ್ಯ ನೀಡಿದ ಸ್ಥಳವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ತ್ರಿಪುರಾ ಅಭಿವೃದ್ಧಿಗೆ ₹1,300 ಕೋಟಿ ರೂ. ಪ್ಯಾಕೇಜ್: ನಿರ್ಮಲಾ ಸೀತಾರಾಮನ್ ಘೋಷಣೆ

ಬಳಿಕ ಮಾತನಾಡಿದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್​, ಈ ಹತ್ಯಾಕಾಂಡದ ಅನ್ಯಾಯಕ್ಕೆ ಸೇಡು ತೀರಿಸಿಕೊಂಡ ಶಹೀದ್ ಉಧಮ್​ ಸಿಂಗ್ ಬಳಸಿಕ ಪಿಸ್ತೂಲು ಹಾಗೂ ಅವರ ವಸ್ತುಗಳನ್ನು ಇಂಗ್ಲೆಂಡ್​ನಿಂದ ಮರಳಿ ಭಾರತಕ್ಕೆ ತರಿಸಬೇಕಿದೆ. ಈ ನಿಟ್ಟಿನಲ್ಲಿ ನಾನು ಈಗಾಗಲೇ ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದರು.

ABOUT THE AUTHOR

...view details