ಕರ್ನಾಟಕ

karnataka

ಔರಂಗಾಬಾದ್​ನಲ್ಲಿ ಮೊಬೈಲ್​ ಟವರ್​ ಕಳ್ಳತನ: ಪೊಲೀಸ್​ ಠಾಣೆಯಲ್ಲಿ ದೂರು

By

Published : Nov 11, 2022, 6:13 PM IST

ಔರಂಗಾಬಾದ್‌ನ ವಾಲಾಜ್ ಪ್ರದೇಶದಲ್ಲಿ ಮೊಬೈಲ್ ಟವರ್ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದರಿಂದ, ದೂರುದಾರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ನ್ಯಾಯಾಲಯದ ಆದೇಶದಂತೆ ವಾಲಾಜ್ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mobile tower stolen in Aurangabad
ಔರಂಗಾಬಾದ್​ನಲ್ಲಿ ಮೊಬೈಲ್​ ಟವರ್​ ಕಳ್ಳತನ

ಔರಂಗಾಬಾದ್ (ಮಹಾರಾಷ್ಟ್ರ):ಇದುವರೆಗೆ ಮನೆಯಲ್ಲಿದ್ದ ಬೆಲೆಬಾಳುವ ಸಾಮಗ್ರಿ, ಹಣ, ಚಿನ್ನಾಭರಣ, ವಾಹನ ಕಳ್ಳತನವಾಗಿರುವ ಪ್ರಕರಣಗಳ ಬಗ್ಗೆ ನಾವು ನೀವೆಲ್ಲಾ ಕೇಳಿದ್ದೇವೆ. ಆದರೆ, ಔರಂಗಾಬಾದ್‌ನ ವಾಲಾಜ್ ಪ್ರದೇಶದಲ್ಲಿ ಮೊಬೈಲ್ ಟವರ್ ಕಳ್ಳತನವಾಗಿದೆ. ಈ ವಿಚಾರವಾಗಿ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದರಿಂದ, ದೂರುದಾರ ನೇರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಬಳಿಕ ವಾಲಾಜ್ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಎಂಬ ಕಂಪನಿ ಮೊಬೈಲ್ ಟವರ್‌ಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುತ್ತದೆ. 2009 ರಲ್ಲಿ ನ್ಯಾಯಾಧೀಶರಾದ ವಾಲಾಜೆಯ ಅರವಿಂದ್ ಕೆ ಸೆಕ್ಟರ್‌ನಲ್ಲಿ ನಿವೇಶನವನ್ನು ಹತ್ತು ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿದ್ದರು. ಇದಕ್ಕಾಗಿ ಕಂಪನಿಯು ತಿಂಗಳಿಗೆ 9,500 ರೂ. ನೀಡುತ್ತಿತ್ತು.

2018 ರಲ್ಲಿ ಟವರ್​ನನ್ನು ಮುಚ್ಚಲಾಯಿತು. ಆದರೆ, ಕಂಪನಿ ಈ ಬಗ್ಗೆ ಗಮನ ಹರಿಸಿಲ್ಲ, ಬಳಿಕ ಕೆಲವು ದಿನಗಳ ನಂತರ ಅಮರ್ ಲಾಹೋತ್ ಎಂಬುವರು ಸ್ಥಳಕ್ಕೆ ಬಂದಾಗ ಟವರ್​ ಕಾಣೆಯಾಗಿತ್ತು. ನಂತರ ಪೊಲೀಸ್​ ಠಾಣೆಗೆ ಧಾವಿಸಿ ಟವರ್ ಕಾಣೆಯಾಗಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ:ಅಥಣಿ: ಮೊಬೈಲ್​​ ಟವರ್​​ ಬ್ಯಾಟರಿ ಎಗರಿಸುತ್ತಿದ್ದ ಖದೀಮರ ತಂಡ ಅರೆಸ್ಟ್​

ಟವರ್ ನಿರ್ಮಿಸುವಾಗ ಜನರೇಟರ್‌ಗಳು ಮತ್ತು ಇತರ ವಸ್ತುಗಳನ್ನು ಅಳವಡಿಸಲಾಗಿತ್ತು. ಒಪ್ಪಂದವು 2019 ರಲ್ಲಿ ಕೊನೆಗೊಂಡಿತ್ತು. ಆಗ ಕಂಪನಿಯ ಪ್ರತಿನಿಧಿ ಇಲ್ಲದ ಕಾರಣ ಮುಂದಿನ ಕ್ರಮ ಕೈಗೊಳ್ಳಲಾಗಲಿಲ್ಲ. ಆದರೆ, ನಂತರ ಕಂಪನಿಯು ಅಮರ್ ಲಾಹೋಟ್ ಅವರನ್ನು ನೇಮಿಸಿತು. ಲಾಹೋತ್ ಸ್ಥಳಕ್ಕೆ ಹೋಗಿ ನೋಡಿದ್ರೆ, ಟವರ್ ಪತ್ತೆಯಾಗಿಲ್ಲ.

ಇಷ್ಟು ಮಾತ್ರವಲ್ಲದೇ ಎಲ್ಲ ಸಾಮಗ್ರಿಗಳು ನಾಪತ್ತೆಯಾಗಿರುವುದು ಕಂಡುಬಂದಿದೆ. 34 ಲಕ್ಷದ 50 ಸಾವಿರದ 676 ಮೌಲ್ಯದ ಸಾಮಗ್ರಿ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದರಿಂದ ಕಂಪನಿ ಪ್ರತಿನಿಧಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದಾದ ಬಳಿಕ ನ್ಯಾಯಾಲಯದ ಆದೇಶದಂತೆ ವಾಲಾಜೆ ಎಂಐಡಿಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details