ಜೈಪುರ(ರಾಜಸ್ಥಾನ):ದೇಶಾದ್ಯಂತ ಎರಡನೇ ಹಂತದ ಕೋವಿಡ್ ಅಲೆ ಸೃಷ್ಟಿ ಮಾಡಿರುವ ಆತಂಕಕ್ಕೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಎಲ್ಲ ರಾಜ್ಯಗಳಲ್ಲೂ ಆಕ್ಸಿಜನ್, ಔಷಧ, ಬೆಡ್ ಸೇರಿದಂತೆ ಅನೇಕ ರೀತಿಯ ವೈದ್ಯಕೀಯ ಸೌಲಭ್ಯಗಳ ಕೊರತೆ ಕಂಡು ಬರುತ್ತಿದೆ.
ಇದರ ಮಧ್ಯೆ ಮಹಾಮಾರಿ ವಿರುದ್ಧದ ಹೋರಾಟ ಮುಂದುವರೆದಿದ್ದು, ಅನೇಕರು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಇದೀಗ ಶಾಸಕನೊಬ್ಬ ತಾವು ಬಳಕೆ ಮಾಡ್ತಿದ್ದ ಫಾರ್ಚೂರನ್ ಕಾರು ಆ್ಯಂಬುಲೆನ್ಸ್ ಆಗಿ ಬಳಕೆ ಮಾಡಿಕೊಳ್ಳಲು ದೇಣಿಗೆ ನೀಡಿದ್ದಾರೆ.
ರಾಜಸ್ಥಾನದ ಜೈಪುರ ಶಾಸಕ ಲಕ್ಷ್ಮಣ ಸಿಂಗ್ ಈ ನಿರ್ಧಾರ ಕೈಗೊಂಡಿದ್ದು, ತಾವು ಬಳಕೆ ಮಾಡ್ತಿದ್ದ 40 ಲಕ್ಷ ರೂ. ಮೌಲ್ಯದ ಫಾರ್ಚೂನರ್ ಕಾರು ಕೋವಿಡ್ ಸೋಂಕಿತರು ಆ್ಯಂಬುಲೆನ್ಸ್ ರೀತಿ ಬಳಕೆ ಮಾಡಿಕೊಳ್ಳಲು ದೇಣಿಗೆ ಕೊಟ್ಟಿದ್ದಾರೆ. ರಾಜಸ್ಥಾನದ ಚಂಚೌಡಾ ಕ್ಷೇತ್ರದ ಕಾಂಗ್ರೆಸ್ ಶಾಸಕನಾಗಿರುವ ಇವರು ಟೊಯೋಟಾ ಫಾರ್ಚೂನರ್ ಬಳಕೆ ಮಾಡ್ತಿದ್ದರು. ಇದೀಗ ಬಿನಗಂಜ್ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರ ಮಾಡಿದ್ದು, ಕಳೆದ ಕೆಲ ದಿನಗಳಿಂದ ಅದರ ಬಳಕೆ ಸಹ ಆಗುತ್ತಿದೆ.
ಇದನ್ನೂ ಓದಿ: ಕೋವಿಡ್ಗೆ ಬಲಿಯಾದ ಸಹಾಯಕ ಪ್ರಾಧ್ಯಾಪಕಿ ನಬಿಲಾ