ಕರ್ನಾಟಕ

karnataka

ETV Bharat / bharat

ಮದರಸಾಗಳಲ್ಲಿ ಗೀತಾ, ರಾಮಾಯಣ: ಸ್ಪಷ್ಟನೆ ನೀಡಿದ ಕೇಂದ್ರ ಶಿಕ್ಷಣ ಸಚಿವಾಲಯ - Gita, Ramayana in madrassas

ಎನ್​ಐಒಎಸ್​ ಮಾನ್ಯತೆ ಪಡೆದ ಮದರಸಾಗಳಲ್ಲಿ ಗೀತಾ, ರಾಮಾಯಣ ಪಠ್ಯಗಳನ್ನು ಪರಿಚಯಿಸಲಾಗುತ್ತದೆ ಎಂಬ ಮಾಧ್ಯಮ ವರದಿಗಳ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯ ಸ್ಪಷ್ಟನೆ ನೀಡಿದೆ.

Centre on report about NIOS introducing Gita, Ramayana in madrassas
ಮದ್ರಸಗಳಲ್ಲಿ ಗೀತಾ, ರಾಮಾಯಣ ಕುರಿತು ಕೇಂದ್ರ ಸ್ಪಷ್ಟನೆ

By

Published : Mar 4, 2021, 8:38 PM IST

ನವದೆಹಲಿ :ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ (ಎನ್‌ಐಒಎಸ್) ಭಗವದ್ಗೀತೆ ಮತ್ತು ರಾಮಾಯಣವನ್ನು ಮದರಸಾಗಳಲ್ಲಿ ಪರಿಚಯಿಸಲಿದೆ ಎಂಬ ಮಾಧ್ಯಮ ವರದಿ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯ ಅಂಗವಾಗಿ 3, 5 ಮತ್ತು 8 ನೇ ತರಗತಿಗಳಿಗೆ 100 ಮದ್ರಸಗಳಲ್ಲಿ ಪ್ರಾಚೀನ ಭಾರತೀಯ ಜ್ಞಾನ ಮತ್ತು ಪರಂಪರೆಯ ಹೊಸ ಪಠ್ಯಕ್ರಮವನ್ನು ಎನ್‌ಐಒಎಸ್ ಪರಿಚಯಿಸಲಿದೆ ಎಂದು ದಿನ ಪತ್ರಿಕೆಯೊಂದು ವರದಿ ಮಾಡಿತ್ತು. ಇದು ಸತ್ಯಕ್ಕೆ ದೂರವಾದ ದುರುದ್ದೇಶಪೂರಿತ ವರದಿ ಎಂದು ಇದೀಗ ಶಿಕ್ಷಣ ಸಚಿವಾಲಯ ಹೇಳಿದೆ.

ಮಾರ್ಚ್ 3,2021 ರಂದು ರಾಷ್ಟ್ರೀಯ ಆಂಗ್ಲ ಪತ್ರಿಕೆಯಲ್ಲಿ 'ಎನ್​ಐಒಎಸ್​ ಟು ಟೇಕ್ ಗೀತಾ, ರಾಮಾಯಣ ಟು ಮದ್ರಸಾಸ್' (ಮದರಸಾಗಳಲ್ಲಿ ಎನ್​ಐಒಎಸ್​ ಗೀತಾ, ರಾಮಾಯಣವನ್ನು ಪರಿಚಯಿಸಲಿದೆ) ಎಂಬ ವರದಿ ಪ್ರಕಟಗೊಂಡಿತ್ತು.

ಸುಮಾರು 5 ಸಾವಿರ ವಿದ್ಯಾರ್ಥಿಗಳನ್ನೊಳಗೊಂಡ 100 ಮದರಸಾಗಳು ಎನ್​ಐಒಎಸ್​ ಮಾನ್ಯತೆ ಪಡೆದಿವೆ. ಬೇಡಿಕೆಯ ಮೇರೆಗೆ ಶೀಘ್ರದಲ್ಲೇ ಸುಮಾರು 500 ಮದರಸಾಗಳಿಗೆ ಎನ್​ಐಒಎಸ್​ ಮಾನ್ಯತೆ ನೀಡುವ ಯೋಜನೆಯಿದೆ ಎಂದು ಸರ್ಕಾರ ಹೇಳಿದೆ.

ABOUT THE AUTHOR

...view details