ಕರ್ನಾಟಕ

karnataka

ETV Bharat / bharat

ಆಗಸ್ಟ್ ಕ್ರಾಂತಿ ದಿನ: ತುಷಾರ್​ ಗಾಂಧಿ ವಶಕ್ಕೆ ಪಡೆದ ಪೊಲೀಸರು! - ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನನ್ನನ್ನು ವಶ

ಒಂದೆಡೆ ದೇಶಾದ್ಯಂತ ಆಗಸ್ಟ್ ಕ್ರಾಂತಿ ದಿನವನ್ನು ಆಚರಿಸಲಾಗುತ್ತಿದ್ದರೆ, ಮತ್ತೊಂದೆಡೆ ತುಷಾರ್ ಗಾಂಧಿ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಏನಿದು ಪ್ರಕರಣ ಎಂಬುದು ನೋಡೋಣ ಬನ್ನಿ..

MH Tushar Gandhi detain by Santacruz police  August Kranti Din  August Kranti Din in Mumbai  ತುಷಾರ್​ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು  ದೇಶಾದ್ಯಂತ ಆಗಸ್ಟ್ ಕ್ರಾಂತಿ ದಿನ  ತುಷಾರ್ ಗಾಂಧಿ ವಿರುದ್ಧ ಪೊಲೀಸರು ಕ್ರಮ  ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವ  ಮಹಾತ್ಮಾ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ  ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನನ್ನನ್ನು ವಶ  ಆಗಸ್ಟ್ ಕ್ರಾಂತಿ ಮೈದಾನಕ್ಕೆ ಮೆರವಣಿಗೆ
ಆಗಸ್ಟ್ ಕ್ರಾಂತಿ ದಿನ: ತುಷಾರ್​ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು

By

Published : Aug 9, 2023, 11:08 AM IST

ಮುಂಬೈ, ಮಹಾರಾಷ್ಟ್ರ:ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಮಹಾತ್ಮಾ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರನ್ನು ಮುಂಬೈನ ಸಾಂತಾಕ್ರೂಜ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅವರೇ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವವನ್ನು ಆಚರಿಸಲು ನಾನು ಹೊರಗೆ ಹೋಗಿದ್ದೆ. ಈ ವೇಳೆ ನನ್ನನ್ನುಸಾಂತಾಕ್ರೂಜ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನನ್ನನ್ನು ವಶಕ್ಕೆ ಪಡೆಯಲಾಗಿದೆ. ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವವನ್ನು ಆಚರಿಸಲು ನಾನು ಆಗಸ್ಟ್ 9 ರಂದು ಮನೆಯಿಂದ ಹೊರಟಿದ್ದೆ. ನನ್ನನ್ನು ಸಾಂತಾಕ್ರೂಜ್ ಪೊಲೀಸರು ವಶಕ್ಕೆ ಪಡೆದರು. ಈ ಐತಿಹಾಸಿಕ ದಿನಾಂಕದಂದು ನನ್ನ ಮುತ್ತಜ್ಜ ಬಾಪು ಮತ್ತು ಬಾ ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿರುವುದು ನನಗೆ ಹೆಮ್ಮೆ ತಂದಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಈ ಬಗ್ಗೆ ಪೊಲೀಸರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟ್ವಿಟರ್‌ನಲ್ಲಿ ಬಳಕೆದಾರರಿಗೆ ಉತ್ತರಿಸಿದ ತುಷಾರ್, ಆಗಸ್ಟ್ ಕ್ರಾಂತಿ ಮೈದಾನಕ್ಕೆ ಶಾಂತಿಯುತ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಆದರೆ, ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ನನ್ನನ್ನು ನನ್ನ ಬೆಂಬಲಿಗರೊಂದಿಗೆ ವಶಕ್ಕೆ ಪಡೆಯಲಾಗಿದೆ. ವೈರಲ್​ ಆಗ್ತಿರುವ ಫೋಟೋಗಳಲ್ಲಿ ತುಷಾರ್ ಗಾಂಧಿ ಜೊತೆ ಇತರರು ಬಸ್ಸಿನಲ್ಲಿ ಕುಳಿತುಕೊಂಡಿರುವುದು ಕಂಡು ಬಂದಿದೆ.

ಬಿಡುಗಡೆಯಾದ ತಕ್ಷಣ ಆಗಸ್ಟ್ ಕ್ರಾಂತಿ ಮೈದಾನಕ್ಕೆ ಮೆರವಣಿಗೆ ನಡೆಸುವುದಾಗಿ ಪೊಲೀಸ್ ಠಾಣೆಯಿಂದಲೇ ತುಷಾರ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದು ಹುತಾತ್ಮರನ್ನು ಸ್ಮರಿಸುವ ದಿನವಾಗಿದ್ದು, ಆಗಸ್ಟ್ ಕ್ರಾಂತಿ ದಿವಸ್ ಅನ್ನು ಖಂಡಿತಾ ಆಚರಿಸಲಾಗುವುದು ಎಂದು ಹೇಳಿದ್ದಾರೆ.

ಠಾಕ್ರೆ ಗುಂಪಿನ ಸಂಸದ ಸಂಜಯ್ ರಾವುತ್ ಅವರು ಇದನ್ನು ಖಂಡಿಸಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್​ ರಾವುತ್​, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗದವರನ್ನು ಸ್ಮರಿಸುವ ದಿನ. ಈ ಕ್ರಾಂತಿ ದಿನದಂದು ಅವರು ಶಾಂತಿ ಹಂಚುತ್ತಿದ್ದಾರೆ. ಇದೊಂದು ದೊಡ್ಡ ಜೋಕ್. ತುಷಾರ್ ಗಾಂಧಿಯನ್ನು ಪೊಲೀಸರು ತಡೆದಿರುವುದು ಹೆಚ್ಚು ಗಂಭೀರವಾಗಿದೆ ಎಂದು ರಾವುತ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಬುಲ್ಧಾನಾದಲ್ಲಿ ರಾಹುಲ್ ಗಾಂಧಿಯೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ತುಷಾರ್ ಗಾಂಧಿ ಕೂಡ ಕಾಣಿಸಿಕೊಂಡಿದ್ದರು. ತುಷಾರ್ ಅವರ ಪೂರ್ಣ ಹೆಸರು ತುಷಾರ್ ಅರುಣ್ ಗಾಂಧಿ. ಅವರ ತಂದೆ ಪತ್ರಕರ್ತ ಅರುಣ್ ಮಣಿಲಾಲ್ ಗಾಂಧಿ. ಅವರು ಗಾಂಧೀಜಿ ಅವರ ಮಗ ಮಣಿಲಾಲ್ ಗಾಂಧಿಯವರ ಮೊಮ್ಮಗ. ಅವರು ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಕಸ್ತೂರಬಾ ಗಾಂಧಿ ಎಂಬ ಹೆಸರಿನಿಂದ ಪ್ರೇರಿತರಾಗಿ ತಮ್ಮ ಮಗಳಿಗೆ ಕಸ್ತೂರಿ ಎಂದು ಹೆಸರಿಟ್ಟಿದ್ದಾರೆ.

ಓದಿ:ಭಾರತದಲ್ಲಿ ನಡೆಯುವ ಜಿ-20 ಶೃಂಗಸಭೆಯಲ್ಲಿ ಉಕ್ರೇನ್​ ಯುದ್ಧ ಕುರಿತು ಚರ್ಚೆ: ಅಮೆರಿಕ

ABOUT THE AUTHOR

...view details