ಕರ್ನಾಟಕ

karnataka

ETV Bharat / bharat

ಮುಂಬೈ- ಪುಣೆ ಎಕ್ಸ್‌ಪ್ರೆಸ್‌ ವೇನಲ್ಲಿ ಉರುಳಿಬಿದ್ದ ಕಂಟೈನರ್, ಐದು ಕಾರುಗಳು ಜಖಂ: ಇಬ್ಬರ ಸಾವು, ನಾಲ್ವರಿಗೆ ಗಾಯ - ಇಬ್ಬರು ಸಾವು

Container overturned on Mumbai-Pune Expressway: ಮುಂಬೈ- ಪುಣೆ ಎಕ್ಸ್‌ಪ್ರೆಸ್‌ ವೇನಲ್ಲಿ ಕಂಟೈನರ್ ಉರುಳಿಬಿದ್ದರಿಂದ ಐದು ಕಾರುಗಳು ಜಖಂಗೊಂಡಿವೆ. ಈ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.

Container overturned on Mumbai-Pune Expressway
ಮುಂಬೈ- ಪುಣೆ ಎಕ್ಸ್‌ಪ್ರೆಸ್‌ ವೇನಲ್ಲಿ ಉರುಳಿಬಿದ್ದ ಕಂಟೈನರ್, ಐದು ಕಾರುಗಳು ಜಖಂ: ಇಬ್ಬರು ಸಾವು, ನಾಲ್ವರಿಗೆ ಗಾಯ

By

Published : Aug 21, 2023, 12:05 PM IST

Updated : Aug 21, 2023, 12:51 PM IST

ಪುಣೆ, ಮಹಾರಾಷ್ಟ್ರ:ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇನಲ್ಲಿ (Mumbai-Pune Expressway) ಕಂಟೈನರ್ ಪಲ್ಟಿಯಾದ ಪರಿಣಾಮ ಐದು ಕಾರುಗಳು ಜಖಂಗೊಂಡಿದ್ದು, ಅಪಘಾತ ನಡೆದ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಯಗಡ ಎಸ್ಪಿ ಸೋಮನಾಥ್ ಘರ್ಗೆ ತಿಳಿಸಿದರು.

ಮುಂಬೈ - ಪುಣೆ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತ ನಡೆದಿದೆ. ಪುಣೆ - ಮುಂಬೈ ಎಕ್ಸ್​ಪ್ರೆಸ್ ವೇಯಲ್ಲಿ ಮುಂಬೈಗೆ ತೆರಳುತ್ತಿದ್ದ ಕಂಟೈನರ್ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಕಂಟೈನರ್ ಐದು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ, ಕಾರಿನಲ್ಲಿದ್ದ ಚಾಲಕ ಹಾಗೂ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ವೇಳೆ, ಈ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಕಂಟೈನರ್ ಪುಣೆಯಿಂದ ಮುಂಬೈಗೆ ಹೋಗುತ್ತಿದ್ದಾಗ ಲೋನಾವಾಲಾ ಪ್ರದೇಶದಲ್ಲಿ ಕಂಟೇನರ್ ಚಾಲಕನ ನಿಯಂತ್ರಣ ತಪ್ಪಿದೆ. ನಂತರ ಕಂಟೇನರ್ ಇನ್ನೊಂದು ಮಾರ್ಗದಲ್ಲಿ (ಲೈನ್‌) ಹೋಗಿ ಪಲ್ಟಿಯಾಗಿದೆ. ಪರಿಣಾಮ ಕಂಟೈನರ್ ಐದು ಕಾರುಗಳಿಗೆ ಡಿಕ್ಕಿ ಹೊಡೆದಿದೆ.

ನಿಧಾನವಾಗಿ ಹೆದ್ದಾರಿಯಲ್ಲಿ ಸಂಚಾರ ಆರಂಭ:ಘಟನೆಯ ಬಗ್ಗೆ ಹೆದ್ದಾರಿ ಪೊಲೀಸರಿಗೆ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ತಲುಪಿತು. ಕೂಡಲೇ ಗಾಯಾಳುಗಳನ್ನು ಎಂಜಿಎಂ ಆಸ್ಪತ್ರೆ ಕಥೋಕೆಗೆ ದಾಖಲಿಸಿದ್ದಾರೆ. ಇತರ ಐದು ವಾಹನಗಳು ಜಖಂಗೊಂಡಿವೆ. ಆದರೆ, ಅದರಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಅಪಘಾತದ ನಂತರ ಮುಂಬೈ ಮತ್ತು ಪುಣೆಗೆ ತೆರಳುವ ವಾಹನ ಸಂಚಾರಕ್ಕೆ ಕೆಲಕಾಲ ತೊಂದರೆಯಾಯಿತು. ಪ್ರಸ್ತುತ, ಪುಣೆ ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ನಿಧಾನಗತಿಯಲ್ಲಿ ಸಂಚಾರ ಆರಂಭವಾಗಿದೆ.

ಇತ್ತೀಚಿನ ಪ್ರಕರಣ, ನಾಗ್ಪುರದಲ್ಲಿ ರಸ್ತೆ ಅಪಘಾತ:ಇತ್ತೀಚೆಗೆ ನಾಗ್ಪುರದಲ್ಲಿ, ರಾಜೀವ ನಗರ ಪ್ರದೇಶದಲ್ಲಿ ವೇಗವಾಗಿ ಬಂದ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಬೈಕ್ ಅನ್ನು 3 ಕಿಲೋ ಮೀಟರ್ ಕೊಂಡೊಯ್ದಿದ್ದ ಘಟನೆ ನಡೆದಿತ್ತು. ಅಪಘಾತದ ನಂತರ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಮಾಹಿತಿ ಪ್ರಕಾರ, ವಾರ್ಧಾ ರಸ್ತೆಯಲ್ಲಿ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಹೋಟೆಲ್‌ಗೆ ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ಅವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಅದೃಷ್ಟವಶಾತ್ ಬೈಕ್​ನಲ್ಲಿದ್ದ ಯುವಕರಿಬ್ಬರೂ ಸುರಕ್ಷಿತವಾಗಿದ್ದಾರೆ.

ಹೈವೇ ಹಿಪ್ನಾಸಿಸ್‌ನಿಂದ ಹೆಚ್ಚಿದ ಅಪಘಾತಗಳು:ಅಪಘಾತಗಳಿಗೆ 'ಹೆದ್ದಾರಿ ಹಿಪ್ನಾಸಿಸ್' ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಹೆದ್ದಾರಿಯು ಸರಳ ರೇಖೆಯಲ್ಲಿರುವುದರಿಂದ ಅದಕ್ಕೆ ಹೆಚ್ಚಿನ ತಿರುವುಗಳಿಲ್ಲ. ಹಲವಾರು ಗಂಟೆಗಳ ಕಾಲ ಅದೇ ವೇಗದಲ್ಲಿ ವಾಹನವು ನೇರವಾಗಿ ಆ ಹೆದ್ದಾರಿಯಲ್ಲಿ ಚಲಿಸಿದಾಗ ಮೆದುಳು ಸಕ್ರಿಯವಾಗಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೇಹದ ಚಲನೆಯು ಸ್ಥಿರವಾಗಿರುತ್ತದೆ. ಆ ಸ್ಥಿತಿಯನ್ನು 'ಹೈವೇ ಹಿಪ್ನಾಸಿಸ್' ಎಂದು ಕರೆಯಲಾಗುತ್ತದೆ. ಈ ರೀತಿಯ ಅಪಘಾತಗಳು ಸಾಮಾನ್ಯವಾಗಿ ಹೆದ್ದಾರಿಯಲ್ಲಿ ಚಾಲಕರಿಗೆ ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:ರಾಮನಗರ ಗೂಡ್ಸ್ ವಾಹನ ಅಪಘಾತ: ಸಾವಿನ ಸಂಖ್ಯೆ 4ಕ್ಕೆ ಏರಿಕೆ... ಮೃತ ಬಾಲಕಿ ಶವವಿಟ್ಟು ಪ್ರತಿಭಟನೆ

Last Updated : Aug 21, 2023, 12:51 PM IST

ABOUT THE AUTHOR

...view details