ಜಾರ್ಖಂಡ್(ಧನ್ಬಾದ್):ಸಮಾರಂಭದಲ್ಲಿ ಬ್ಯಾಂಡ್ ಬಾರಿಸಿದರೆ, ಡಿಜೆ ಹಾಕಿದರೆ, ಪಟಾಕಿ ಸಿಡಿಸಿದರೆ ಮದುವೆ ಆಗುವುದಿಲ್ಲ ಎಂದು ಇಲ್ಲಿನ ಮೌಲಾನಾ ಮಸೂದ್ ಅಖ್ತರ್ ಖಾದ್ರಿ ಹೇಳಿದ್ದಾರೆ. ನಿರ್ಸಾದಲ್ಲಿರುವ ಶಿವಲಿಬಾರಿ ಜಾಮಾ ಮಸೀದಿಯಲ್ಲಿ ಭಾನುವಾರ ನಡೆದ ಸಮಿತಿಯ ಸಭೆಯಲ್ಲಿ ಮೌಲಾನಾ ಈ ವಿಷಯಗಳನ್ನು ಪ್ರಸ್ತಾಪಿಸಿದರು. ಈ ಸಭೆಯಲ್ಲಿ ಪ್ರದೇಶದ ಎಲ್ಲಾ ಇಮಾಮ್ಗಳು ಮತ್ತು ಅವಾಮ್ಗಳು ಭಾಗವಹಿಸಿದ್ದರು.
ಇಸ್ಲಾಂ ಧರ್ಮದಲ್ಲಿ ನಿಕಾಹ್ ವೇಳೆ ಬ್ಯಾಂಡ್ ಬಾರಿಸುವುದು ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ನಿಕಾಹ್ ಮತ್ತು ನಿಕಾಹ್ ರಾತ್ರಿ 11 ಗಂಟೆಯೊಳಗೆ ಮಾಡಬೇಕು. ಈ ಕಾನೂನನ್ನು ಪಾಲಿಸದಿದ್ದಲ್ಲಿ ತಪ್ಪಿತಸ್ಥರು ಎಂದು ಕಂಡುಬಂದರೆ ಸಮಿತಿಯಿಂದ 5100 ರೂಪಾಯಿ ದಂಡ ವಿಧಿಸಲಾಗುವುದು ಮತ್ತು ಸಮಿತಿಯೊಂದಿಗೆ ಕ್ಷಮೆಯಾಚಿಸಬೇಕು ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ.