ಕರ್ನಾಟಕ

karnataka

ವುಡ್​ ಕಾಂಪ್ಲೆಕ್ಸ್​​ ಬಳಿ ನಿಲ್ಲಿಸಿದ್ದ ಖಾಸಗಿ ಬಸ್​​​ಗಳಿಗೆ ಬೆಂಕಿ.. ಧಗಧಗನೇ ಹೊತ್ತಿ ಉರಿದ 8 ವಾಹನಗಳು​​!

By

Published : Mar 1, 2022, 3:21 PM IST

ಕೋವಿಡ್​ನಿಂದಾಗಿ ಬಸ್​ಗಳನ್ನ ವುಡ್​ ಕಾಂಪ್ಲೆಕ್ಸ್​​​ನಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಬಸ್​ಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿದಿವೆ. ಇದರಿಂದ ಸುಮಾರು 8 ಕೋಟಿ ರೂ. ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ. ಹೊತ್ತಿ ಉರಿದಿರುವ ಬಸ್​​ಗಳು ಕಾವೇರಿ ಟ್ರಾವೆಲ್ಸ್​ಗೆ ಸೇರಿದ್ದವು ಎಂದು ಹೇಳಲಾಗುತ್ತಿದೆ..

Massive fire accident
Massive fire accident

ಪ್ರಕಾಶಂ ಜಿಲ್ಲೆ(ಆಂಧ್ರಪ್ರದೇಶ):ಪ್ರಕಾಶಂ ಜಿಲ್ಲೆಯ ಒಂಗೋಲೆಯಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್​ಗಳಿಗೆ ದಿಢೀರ್ ಬೆಂಕಿ ಹೊತ್ತಿಕೊಂಡಿರುವ ಪರಿಣಾಮ ಅವು ಸಂಪೂರ್ಣ ಹೊತ್ತಿ ಉರಿದಿವೆ.

ಆಂಧ್ರಪ್ರದೇಶದಲ್ಲಿ ಎಂಟು ಖಾಸಗಿ ಬಸ್​ಗಳಿಗೆ ಬೆಂಕಿ..

ಕೋವಿಡ್​ನಿಂದಾಗಿ ಬಸ್​ಗಳನ್ನ ವುಡ್​ ಕಾಂಪ್ಲೆಕ್ಸ್​​​ನಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಬಸ್​ಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿದಿವೆ. ಇದರಿಂದ ಸುಮಾರು 8 ಕೋಟಿ ರೂ. ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ. ಹೊತ್ತಿ ಉರಿದಿರುವ ಬಸ್​​ಗಳು ಕಾವೇರಿ ಟ್ರಾವೆಲ್ಸ್​ಗೆ ಸೇರಿದ್ದವು ಎಂದು ಹೇಳಲಾಗುತ್ತಿದೆ.

ಬೆಂಕಿಗಾಹುತಿಯಾಗಿರುವ ಎಲ್ಲ ಬಸ್​ಗಳು ಎಸಿಯಿಂದ ಕೂಡಿದ್ದು, ಸ್ಥಳದಲ್ಲಿ ಒಟ್ಟು 20 ಬಸ್​ಗಳನ್ನ ನಿಲ್ಲಿಸಲಾಗುತ್ತು ಎಂದು ತಿಳಿದು ಬಂದಿದೆ. ಬಸ್​ಗಳಿಗೆ ಬೆಂಕಿ ತಗುಲುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಈಗಾಗಲೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ ಎಂದು ತಿಳಿದು ಬಂದಿದೆ.

ABOUT THE AUTHOR

...view details