ನವದೆಹಲಿ: ರಾಜ್ಯಸಭೆಯಲ್ಲಿ ಸರ್ಕಾರ ಹಾಗೂ ವಿಪಕ್ಷಗಳ ನಡುವಿನ ಕಿತ್ತಾಟ ವಿಚಾರವಾಗಿ ಮಾರ್ಷಲ್ಗಳು, ರಾಜ್ಯಸಭಾ ಕಾರ್ಯಾಲಯ ಹಾಗೂ ಭದ್ರತಾ ಸೇವೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಮಾರ್ಷಲ್ ರಾಕೇಶ್ ನೇಗಿ ಈ ಪತ್ರ ಬರೆದಿದ್ದು, ವಿಪಕ್ಷದ ಸದಸ್ಯರು ಸದನದ ಬಾವಿಯಲ್ಲಿದ್ದಾಗ ರಾಜ್ಯಸಭಾಧ್ಯಕ್ಷರ ಸುತ್ತಲೂ ನಾವು ಭದ್ರಕೋಟೆ ರಚಿಸಿದೆವು. ಈ ವೇಳೆ ಸಂಸದರಾದ ಎಲಮಾರನ್ ಕರೀಂ ಮತ್ತು ಅನಿಲ್ ದೇಸಾಯಿ ಭದ್ರತಾ ಸಿಬ್ಬಂದಿ ಪಕ್ಕಕ್ಕೆ ಸರಿಸಲು ಯತ್ನಿಸಿದ್ದರು ಎಂದು ಉಲ್ಲೇಖಿಸಿದ್ದಾರೆ.
ಇದೇ ವೇಳೆ, ಎಲಾಮರನ್ ಕರೀಂ ನನ್ನನ್ನು ಸೆಕ್ಯೂರಿಟಿ ಕಾರ್ಡನ್ ಸರಪಳಿಯಿಂದ ಹೊರಗೆಳೆಯಲು ಯತ್ನಿಸಿದ್ದು, ನನ್ನ ಕುತ್ತಿಗೆಗೆ ಕೈ ಹಾಕಿದ್ರು. ಕ್ಷಣಕಾಲ ನನ್ನ ಉಸಿರು ನಿಂತಂತಾಯಿತು ಎಂದು ವಿವರಿಸಿದ್ದಾರೆ.
ಮತ್ತೊಬ್ಬ ಮಹಿಳಾ ಮಾರ್ಷಲ್ ಅಕ್ಷಿತಾ ಭಟ್ ಪತ್ರದಲ್ಲಿ ಗಲಭೆಯ ಸಮಯದಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ವಿವರಿಸಿದ್ದಾರೆ. ರಾಜ್ಯಸಭಾಧ್ಯಕ್ಷರ ಬಳಿ ಬಾರದಂತೆ ನಾನು ತಡೆದಾಗ ಸಂಸದೆಯರಾದ ಛಾಯಾ ವರ್ಮಾ ಮತ್ತು ಫುಲೋದೇವಿ ನೇತಮ್ ನನ್ನನ್ನು ಪಕ್ಕಕ್ಕೆ ಸರಿಸಿದರು. ಇತರ ಸಂಸದರು ಭದ್ರತಾ ವಲಯ ಭೇದಿಸಿ ಟೇಬಲ್ ಬಳಿ ತೆರಳಲು ಅವಕಾಶ ಮಾಡಿಕೊಟ್ಟರು ಎಂದು ಬರೆದಿದ್ದಾರೆ.