ಕರ್ನಾಟಕ

karnataka

By

Published : May 2, 2021, 6:26 PM IST

ETV Bharat / bharat

ಬೇರೆ ಮದುವೆಯಾಗಿದ್ದಕ್ಕೆ ಗಂಡ-ಅಣ್ಣನ ಸಹಾಯದಿಂದ ಲವರ್​ ಕೊಲೆಗೈದ ವಿವಾಹಿತೆ!

ತಾನು ಪ್ರೀತಿಸುತ್ತಿದ್ದ ಯುವಕನೋರ್ವ ಬೇರೆ ಮದುವೆಯಾಗುತ್ತಿದ್ದಂತೆ ಆಕ್ರೋಶಗೊಂಡ ನವವಿವಾಹಿತ ಮಹಿಳೆಯೋರ್ವಳು ಆತನ ಕೊಲೆ ಮಾಡಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

Lover murder
Lover murder

ಪುಣೆ​(ಮಹಾರಾಷ್ಟ್ರ):ತನ್ನೊಂದಿಗೆ ಸಂಪರ್ಕ ಹೊಂದಿದ್ದ ಯುವಕನೋರ್ವ ಬೇರೆ ಮದುವೆಯಾಗಿದ್ದಕ್ಕೆ ವಿವಾಹಿತ ಮಹಿಳೆ ಗಂಡ-ಅಣ್ಣನ ಸಹಾಯದಿಂದ ಆತನ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಪುಣೆಯ ಆಹಾಟ್​​ದಲ್ಲಿ ಈ ಘಟನೆ ನಡೆದಿದ್ದು, 26 ದಿನಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಮಹೇಶ್​ ವಸಂತ್ ಲೋಹ್ಕರೆ (26) ಕೊಲೆಯಾಗಿರುವ ವ್ಯಕ್ತಿ. ಈತ ಕಾಣೆಯಾಗಿದ್ದಾನೆಂದು ಏಪ್ರಿಲ್​​ 6ರಂದು ಖೇಡ್ ಪೊಲೀಸ್​ ಠಾಣೆಯಲ್ಲಿ ಯುವಕನ ತಾಯಿ ದೂರು ದಾಖಲು ಮಾಡಿದ್ದರು.

ಮಹೇಶ್​ ಕಳೆದ ನಾಲ್ಕು ವರ್ಷಗಳಿಂದ ಮಹಿಳೆ ಜೊತೆ ಸಂಪರ್ಕದಲ್ಲಿದ್ದನು. ಕೆಲ ದಿನಗಳ ಹಿಂದೆ ಮಹಿಳೆ ಆತನನ್ನು ಒಂದು ಕೋಣೆಯಲ್ಲಿ ಸೆರೆಹಿಡಿದು, ತನ್ನ ಪತಿ ಭರತ್​ ಹಾಗೂ ಸಹೋದರ ಭಗವಾನ್​ಗೆ ಮಾಹಿತಿ ನೀಡಿದ್ದಾಳೆ. ಈ ವೇಳೆ ಆತನ ಮೇಲೆ ಹಲ್ಲೆ ನಡೆಸಿರುವ ಇಬ್ಬರು, ದ್ವಿಚಕ್ರ ವಾಹನದಲ್ಲಿ ಕಾರ್ಕುಡಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಇಲ್ಲಿ ಮಹಿಳೆ ಕೂಡ ಆತನ ಮೇಲೆ ಹಲ್ಲೆ ನಡೆಸಿದ್ದು, ಗಲ್ಲಿಗೇರಿಸಿದ್ದಾರೆ. ಇದಾದ ಬಳಿಕ ಆತನ ದೇಹ ಸುಟ್ಟು ಹಾಕಿ ಸಮಾಧಿ ಮಾಡಿದ್ದಾರೆ.

ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಈಗಾಗಲೇ ಮೂವರು ಆರೋಪಿಗಳ ಬಂಧನ ಮಾಡಿದ್ದಾರೆ.

ABOUT THE AUTHOR

...view details