ಕರ್ನಾಟಕ

karnataka

ETV Bharat / bharat

ಲವ್​ ಇನ್​ ಹಾಸ್ಪಿಟಲ್​: ಪ್ರೀತಿಯ ಬಲೆಗೆ ಸಿಲುಕಿದ ಮಾನಸಿಕ ರೋಗಿಗಳು.. ನಾಳೆ ಅದ್ಧೂರಿ ಪ್ರೇಮ ವಿವಾಹ!

ಚಿಕಿತ್ಸೆಗಾಗಿ ಸರ್ಕಾರಿ ಮಾನಸಿಕ ಆಸ್ಪತ್ರೆಗೆ ಬಂದ ಇಬ್ಬರು ರೋಗಿಗಳ ಮಧ್ಯೆ ಪ್ರೀತಿ ಬೆಳೆದು ಗೃಹಸ್ತಾಶ್ರಮಕ್ಕೆ ಕಾಲಿಡಲಿರುವ ಘಟನೆ ತಮಿಳುನಾಡಿನಲ್ಲಿ ಕಂಡು ಬಂದಿದೆ. ಈ ಪ್ರಣಯ ಜೋಡಿಯ ಬಗ್ಗೆ ನೀವು ವಿಶೇಷ ಲೇಖನವನ್ನು ಓದಲೇಬೇಕು..

By

Published : Oct 28, 2022, 12:02 PM IST

Updated : Oct 28, 2022, 12:57 PM IST

Marriage of two patients  Marriage of two patients of Chennai mental asylum  Marriage of two patients of mental asylum  ಪ್ರೀತಿಯ ಬಲೆಗೆ ಸಿಲುಕಿದ ಮಾನಸಿಕ ರೋಗಿಗಳು  ಲವ್​ ಇನ್​ ಮೆಂಟಲ್​ ಆಸ್ಪತ್ರೆ  ನಾಳೆ ಅದ್ಧೂರಿ ಪ್ರೇಮ ವಿವಾಹ  Love is in the air  ಮಾನಸಿಕ ಆಸ್ಪತ್ರೆಗೆ ಬಂದ ಇಬ್ಬರು ರೋಗಿಗಳ ಮಧ್ಯೆ ಪ್ರೀತಿ  ಮಾನಸಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ  ಕೌಟುಂಬಿಕ ಕಲಹದಿಂದ ಉಂಟಾದ ಉದ್ವಿಗ್ನತೆ  ತಂದೆಯ ಸಾವಿನ ದುರಂತದಿಂದ ದೀಪಾ ಖಿನ್ನತೆ  ಚೆನ್ನೈನ ಕಿಲ್ಪಾಕ್​ ಸರ್ಕಾರಿ  ಮಾನಸಿಕ ಸಂಸ್ಥೆಯೊಂದರಲ್ಲಿ ಅರಳಿದ ಪ್ರೇಮಕಥೆ  ಪ್ರೀತಿ ಬೆಳೆದು ಗೃಹಸ್ತಾಶ್ರಮಕ್ಕೆ ಕಾಲಿಡಲಿರುವ ಘಟನೆ
ಪ್ರೇಮ ವಿವಾಹವಾಗಲಿರುವ ಜೋಡಿ

ಚೆನ್ನೈ, ತಮಿಳುನಾಡು: ಪ್ರೀತಿಗೆ ಈ ಜಗತ್ತು ಹಲವು ತತ್ತ್ವ ಗಳನ್ನು ರೂಪಿಸಿದ್ದರೂ, ಕಾಲಕಾಲಕ್ಕೆ ಪ್ರೀತಿ ಅದನ್ನು ಮುರಿದು ಪ್ರೀತಿಸುವ ಹೃದಯವಿದ್ದರೆ ಸಾಕು ಎಂದು ಮರುಗುತ್ತದೆ. ಚಿಕಿತ್ಸೆಗಾಗಿ ಮಾನಸಿಕ ಸಂಸ್ಥೆಗೆ ಬಂದು ತಮ್ಮ ಜೀವನದ ಪ್ರೀತಿಯನ್ನು ಆರಿಸಿಕೊಳ್ಳುವ ಇಬ್ಬರ ಪ್ರೇಮಕಥೆ ಇದು. ಎರಡು ವರ್ಷಗಳ ಹಿಂದೆ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬಂದಿದ್ದ ಚೆನ್ನೈನ 42 ವರ್ಷದ ಮಹೇಂದ್ರನ್ ಮತ್ತು ವೆಲ್ಲೂರಿನ 36 ವರ್ಷದ ದೀಪಾ ಮಧ್ಯೆ ಪ್ರೀತಿ ಹುಟ್ಟಿದ್ದು, ನಾಳೆ ಮದುವೆಯಾಗಲಿದ್ದಾರೆ.

ಕೌಟುಂಬಿಕ ಕಲಹದಿಂದ ಉಂಟಾದ ಉದ್ವಿಗ್ನತೆಯಿಂದಾಗಿ ಮಹೇಂದ್ರನ್ ‘ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್’ನಿಂದ ಬಳಲುತ್ತಿದ್ದರು. ತಂದೆಯ ಸಾವಿನ ದುರಂತದಿಂದ ದೀಪಾ ಖಿನ್ನತೆಗೆ ಒಳಗಾಗಿದ್ದರು. ಇಬ್ಬರನ್ನೂ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಿಸಲಾಗಿತ್ತು. ಅಲ್ಲಿ ಇಬ್ಬರ ಮಧ್ಯೆ ಭೇಟಿಯಾಗಿದೆ. ಬಳಿಕ ಪರಿಚಯ ಸ್ನೇಹಕ್ಕೆ ತಿರುಗಿದ್ದು, ಸ್ನೇಹ ಪ್ರೀತಿಯಾಗಿ ಬದಲಾಗಿದೆ.

ಈ ಕುರಿತು ಮಹೇಂದ್ರನ್ ಮಾತನಾಡಿ, ‘ಕುಟುಂಬದ ಆಸ್ತಿ ಸಮಸ್ಯೆಯಿಂದ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದು, ಮೊದಲು ಚಿಕಿತ್ಸೆಗೆ ಬಂದಿದ್ದೆ. ಆ ಸಮಯದಲ್ಲಿ, ನಾನು ವೈದ್ಯರು ಹೇಳುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ. ಮತ್ತೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದೆ. ಅದಾದ ನಂತರ ಕಿಲ್ಪಾಕ್ ಮೆಂಟಲ್ ಅಸ್ಸಿಲಮ್​ನ ‘ಡೇ ಕೇರ್ ಸೆಂಟರ್’ನಲ್ಲಿ ಕೆಲಸ ಮಾಡುತ್ತಿದ್ದೆ ಎಂದರು.

ಪ್ರೇಮ ವಿವಾಹವಾಗಲಿರುವ ಜೋಡಿ

ಆಗ ದೀಪಾ ಅಲ್ಲಿಗೆ ಚಿಕಿತ್ಸೆಗಾಗಿ ಬಂದಿದ್ದರು. ನಾನು ಅವರನ್ನು ಚೆನ್ನಾಗಿ ನೋಡಿಕೊಂಡೆ. ಬಳಿಕ ಆಕೆಯ ಪ್ರೀತಿಯ ಬಲೆಗೆ ಸಿಕ್ಕಿಬಿದ್ದೆ. ಒಂದು ದಿನ ನೀವು ನನ್ನನ್ನು ಅವನಿಗೆ ಮದುವೆಯಾಗುತ್ತೀರಾ ಅಂತ ನಾನು ಪ್ರಪೋಸ್​ ಮಾಡಿದೆ. ಅವರು ಸ್ವಲ್ಪ ಸಮಯ ಕೇಳಿದರು. ನಂತರ ಬಂದು ಮದುವೆ ಮಾಡಿಕೊಳ್ಳಬಹುದು ಎಂದರು ಅಂತಾ ಹೇಳಿದರು.

ದೀಪಾಳನ್ನು ಮೊದಲ ಸಲ ನೋಡಿದಾಗ ಅಮ್ಮನಂತಿದ್ದಳು. ನನ್ನ ತಾಯಿ ಶಿಕ್ಷಕಿ, ದೀಪಾ ಶಿಕ್ಷಕಿ ಎಂದು ತಿಳಿದ ನಂತರವೇ. ಹೀಗೆ ನನ್ನ ಬದುಕಿನ ಎಲ್ಲ ಸಂಬಂಧಗಳೂ ದೀಪಾಳ ಆಕಾರದಲ್ಲಿಯೇ ಇದ್ದಂತಿವೆ. ಆಸ್ಪತ್ರೆ ನೀಡುವ ಸಂಬಳದಲ್ಲಿ ಜೀವನ ನಡೆಸಲು ಮುಂದಾಗಿದ್ದೇವೆ ಎಂದರು.

ನಂತರ ನಮ್ಮೊಂದಿಗೆ ಮಾತನಾಡಿದ ದೀಪಾ, ನನ್ನ ತಂದೆ 2016ರಲ್ಲಿ ನಿಧನರಾದರು. ಅವರ ಸಾವಿನ ದುಃಖವನ್ನು ಸಹಿಸಲಾಗದೇ ನಾನು ಮಾನಸಿಕ ಅಸ್ವಸ್ಥನಾದೆ. ಅದರ ನಂತರ ನಾನು ಮಾನಸಿಕ ಚಿಕಿತ್ಸೆಗೆ ಬಂದೆ. ಹಾಗಾದರೆ ಮಹೇಂದ್ರನ್ ನನ್ನನ್ನು ಮದುವೆಯಾಗಬಹುದೇ? ಅಂತ ಕೇಳಿದರು. ನಾನು ಸಮಯ ಕೇಳಿದೆ. ಬಳಿಕ ಮದುವೆಗೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.

ಮಾನಸಿಕ ಸಂಸ್ಥೆಯೊಂದರಲ್ಲಿ ಅರಳಿದ ಪ್ರೇಮಕಥೆ: ಈಗ ನಾವು ಮದುವೆಯಾಗಲಿದ್ದೇವೆ. ನನ್ನ ಜೀವನದಲ್ಲಿ ಮದುವೆ ಆಗುತ್ತೆ ಅಂತ ಕನಸು ಕಂಡಿರಲಿಲ್ಲ. ಇದು ಪವಾಡದಂತೆ ತೋರುತ್ತದೆ. ನನಗೆ ನನ್ನ ತಂದೆಯಂದ್ರೆ ಜೀವ. ಹಾಗಾಗಿ ಅವರ ಸಾವನ್ನು ಸಹಿಸಲಾಗದೇ ಮಾನಸಿಕ ಅಸ್ವಸ್ಥನಾದೆ ಎಂದರು.

ಚೆನ್ನೈನ ಕಿಲ್ಪಾಕ್​ ಸರ್ಕಾರಿ ಮನೋವೈದ್ಯಕೀಯ ಆಸ್ಪತ್ರೆಯ ಇಂಟರ್ನಿಸ್ಟ್ ಸಂಗೀತಾ ಮಾತನಾಡಿ, ಮಹೇಂದ್ರನ್ ಮತ್ತು ದೀಪಾ ಇಬ್ಬರೂ ಮದುವೆಯಾಗುವುದಾಗಿ ಹೇಳಿದ್ದಾರೆ. ಅವರ ಇಚ್ಛೆಯಂತೆ ಮಾಡಲು ನಾವು ಅನುಮತಿ ನೀಡಿದ್ದೇವೆ. ಅವರು ಚೇತರಿಸಿಕೊಂಡಿದ್ದಾರೆ. ವೈದ್ಯರ ಸಲಹೆಯಂತೆ ಚಿಕಿತ್ಸೆ ಮುಂದುವರಿಸಲು ಸೂಚಿಸಲಾಗಿದೆ.

ಪ್ರೇಮ ವಿವಾಹವಾಗಲಿರುವ ಜೋಡಿ

ಅವರು ತಮ್ಮ ಜೀವನವನ್ನು ಪ್ರಾರಂಭಿಸಲು ಹೊಸ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಆ ಮನೆಗೆ ಬೇಕಾದ ಸಾಮಗ್ರಿಗಳನ್ನು ಸ್ನೇಹಿತರು ಖರೀದಿಸಿದ್ದಾರೆ. ನಮ್ಮ ಮನೆಯ ಮದುವೆಯ ಹಾಗೆ ಮಾಡಲಿದ್ದೇವೆ. ದೀಪಾ ಶಿಕ್ಷಕರ ಬಳಿ ಓದುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಬಲ್ಲಳು ಎಂದರು.

ಮಾನಸಿಕ ಸಂಸ್ಥೆಗೆ ಹೋಗುವುದು ಇನ್ನೊಬ್ಬರ ಜೀವನವನ್ನು ಶಾಶ್ವತವಾಗಿ ಬದಲಾಯಿಸಬಹುದು ಎಂದು ನಾವು ಕೇಳಿದ್ದೇವೆ. ಆದರೆ ಬೆಳಕಿಲ್ಲದೇ ನರಳುತ್ತಿದ್ದವರ ಬದುಕಿಗೆ ಸೂರ್ಯ ಬಂದು ಬೆಳಕು ನೀಡಿದ ಹಾಗೆ ಪ್ರಕೃತಿ ಪ್ರೀತಿಯಂತಹ ಪವಾಡವನ್ನೇ ನೀಡಿದೆ. ನಾಳೆ ಆಸ್ಪತ್ರೆಯಲ್ಲಿ ವಿಧಾನಪರಿಷತ್ ಸದಸ್ಯ ವೆಟ್ರಿ ಅಳಗನ್ ನೇತೃತ್ವದಲ್ಲಿ ಇಬ್ಬರೂ ವಿವಾಹವಾಗಲಿದ್ದು, ಅವರ ಮುಂದಿನ ಜೀವನ ಸುಖವಾಗಿ ಸಾಗಲಿಯೆಂದು ಹಾರೈಸೋಣ..

ಓದಿ:ಮಾಲ್ಡೀವ್ಸ್‌ನಿಂದ ವಾಪಸಾದ ರೂಮರ್​ ಲವ್​ ಬರ್ಡ್ಸ್

Last Updated : Oct 28, 2022, 12:57 PM IST

ABOUT THE AUTHOR

...view details