ಕರ್ನಾಟಕ

karnataka

By

Published : Oct 15, 2021, 4:45 PM IST

ETV Bharat / bharat

ಕುಖ್ಯಾತ ನಕ್ಸಲ್ ಮುಖಂಡ ಅಕ್ಕಿರಾಜು ಸಾವು..

ಛತ್ತೀಸ್‌ಗಢದ ಬಸ್ತಾರ್ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದ ಕುಖ್ಯಾತ ನಕ್ಸಲ್ ಮುಖಂಡ ಅಕ್ಕಿರಾಜು ದೀರ್ಘಕಾಲದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಆತ ಸಾವನ್ನಪ್ಪಿರುವುದಾಗಿ ಮಾವೋವಾದಿ ಸಂಘಟನೆ ದೃಢಪಡಿಸಿದೆ.

ಕುಖ್ಯಾತ ನಕ್ಸಲ್ ಮುಖಂಡ ಅಕ್ಕಿರಾಜು ಸಾವು
ಕುಖ್ಯಾತ ನಕ್ಸಲ್ ಮುಖಂಡ ಅಕ್ಕಿರಾಜು ಸಾವು

ರಾಯ್‌ಪುರ (ಛತ್ತೀಸ್‌ಗಢ): ಅನಾರೋಗ್ಯದಿಂದಾಗಿ ಕುಖ್ಯಾತ ನಕ್ಸಲ್ ಮುಖಂಡ ಅಕ್ಕಿರಾಜು ಹರಗೋಪಾಲ್ ಅಲಿಯಾಸ್ ರಾಮಕೃಷ್ಣ (58) ಸಾವನ್ನಪ್ಪಿರುವುದಾಗಿ ಮಾವೋವಾದಿ ಸಂಘಟನೆ ದೃಢಪಡಿಸಿದೆ.

ಛತ್ತೀಸ್‌ಗಢದ ಬಸ್ತಾರ್ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದ ಅಕ್ಕಿರಾಜು ದೀರ್ಘಕಾಲದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಡಯಾಲಿಸಿಸ್‌ಗೆ ಒಳಗಾಗುವ ವೇಳೆ ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಓರ್ವ ಸೇನಾಧಿಕಾರಿ ಸೇರಿ ಇಬ್ಬರು ಹುತಾತ್ಮ

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವನಾದ ಅಕ್ಕಿರಾಜು, ವೈಎಸ್ ರಾಜಶೇಖರ್ ರೆಡ್ಡಿ ನೇತೃತ್ವದ ಅಂದಿನ ಆಂಧ್ರ ಸರ್ಕಾರದೊಂದಿಗೆ ಶಾಂತಿ ಮಾತುಕತೆಗಳನ್ನು ಆರಂಭಿಸಲು ಮಾವೋವಾದಿ ಸಂಘಟನೆಯನ್ನು ಮುನ್ನಡೆಸಿದ್ದರು. ಕಳೆದ 4 ದಶಕಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ.

ಕಮ್ಯುನಿಷ್ಟ್‌ ಪಾರ್ಟಿ‌ ಆಫ್‌ ಇಂಡಿಯಾ ಹಾಗೂ ಮಾವೋವಾದಿ ಕೇಂದ್ರ ಸಮಿತಿಯ ಸದಸ್ಯನಾಗಿದ್ದ ಈತ, ನಿಷೇಧಿತ ಸಂಘಟನೆಯೊಂದರ ಆಂಧ್ರ - ಒಡಿಶಾ ಗಡಿ ವಿಶೇಷ ವಲಯ ಸಮಿತಿಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ಆತನ ವಿರುದ್ಧ ವಿವಿಧ ರಾಜ್ಯಗಳಲ್ಲಿ ಹಲವಾರು ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿದ್ದವು.

ABOUT THE AUTHOR

...view details