ಕರ್ನಾಟಕ

karnataka

ETV Bharat / bharat

ಭೀಕರ ಕಾರು ಅಪಘಾತ: ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಸಾವು, ಚಾಲಕನಿಗೆ ಗಂಭೀರ ಗಾಯ

ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯ ಇಕೋನಾ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ.

By

Published : Aug 6, 2023, 12:16 PM IST

Six killed after car falls into ditch in Shravasti
ಭೀಕರ ಕಾರು ಅಪಘಾತ

ಶ್ರಾವಸ್ತಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯ ಇಕೌನಾ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಕಾರು ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇಕೌನಾ ಪೊಲೀಸ್​ ಠಾಣೆಯ ಉಸ್ತುವಾರಿ ಮಹಿಮಾ ನಾಥ್​ ಉಪಾಧ್ಯಾಯ ನೀಡಿರುವ ಮಾಹಿತಿ ಪ್ರಕಾರ, "ಕಾರಿನಲ್ಲಿದ್ದವರು ಬಲರಾಮ್​ಪುರದಿಂದ ನೇಪಾಳದ ನೇಪಾಲ್​ಗಂಜ್​ ಪ್ರದೇಶಕ್ಕೆ ಹೋಗುತ್ತಿದ್ದರು. ಈ ವೇಳೆ ರಸ್ತೆ ಮಧ್ಯ ಬಂದ ದನವನ್ನು ಉಳಿಸಲು ಕಾರು ಚಾಲಕ ಪ್ರಯತ್ನಿಸಿದ್ದಾನೆ. ಆಗ ವಾಹನ ನಿಯಂತ್ರಣ ತಪ್ಪಿ ಬಹ್ರೇಚ್​​ ಬಲರಾಮ್​ಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಈ ದುರ್ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ.

ಸಾವನ್ನಪ್ಪಿದ್ದವರಲ್ಲಿ ನೇಪಾಳದ ನಿವಾಸಿಗಳಾದ 18 ವರ್ಷದ ನೀತಿ, 30 ವರ್ಷದ ನಿಲನ್ಶ್​ ಮತ್ತು ವೈಭವ್​ ಗುಪ್ತಾ ಸೇರಿದ್ದಾರೆ. ಉಳಿದವರ ಗುರುತು ಇನ್ನೂ ಪತ್ತೆಯಾಗಿಲ್ಲ. ಕಾರು ಚಾಲಕನ ಸ್ಥಿತಿ ತೀರಾ ಗಂಭೀರವಾಗಿದೆ. ಸದ್ಯ ಆತನಿಗೆ ಚಿಕಿತ್ಸೆ ನಡೆಯುತ್ತಿದೆ. ಪೊಲೀಸರು ಐಪಿಸಿ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಳಿಕ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂತಹದ್ದೇ ಮತ್ತೊಂದು ಭೀಕರ ಅಪಘಾತ ಶುಕ್ರವಾರ ಸಂಭವಿಸಿತ್ತು. ಉತ್ತರ ಪ್ರದೇಶದ ಸಹಾಪೌ ಕೊಟ್ವಾಲಿ ಪ್ರದೇಶದ ಸದಾಬಾದ್ ರಸ್ತೆಯಲ್ಲಿ ರಾತ್ರಿ ಸುಮಾರು 12 ಗಂಟೆ ಹೊತ್ತಿಗೆ ಟ್ರ್ಯಾಕ್ಟರ್​ ಟ್ರಾಲಿ ಮತ್ತು ಡಂಪರ್ ಮುಖಾಮುಖಿ ಡಿಕ್ಕಿಯಾಗಿ ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವನ್ನಪ್ಪಿದ್ದರು.

ಕಾಸ್ಗಂಜ್‌ನ ಅಮಾಪುರದ ವಿಕ್ರಮ್, ಜಲೇಸರ್‌ನ ಗಧಿಯಾ ಸಕ್ರೌಲಿಯ ಮಾಧುರಿ(22), ವಜೀರ್‌ಪುರ ಕೋಟ್ಲಾ ಫಿರೋಜಾಬಾದ್‌ನ ಹೇಮಲತಾ(12), ಗಧಿಯಾ ಸಕ್ರೌಲಿಯ ಲಕ್ಷ್ಮಿ(18) ಮತ್ತು ಅಭಿಷೇಕ್(20) ಮೃತರು. ಅವಘಡದಲ್ಲಿ ಸುಮಾರು 16 ಮಂದಿ ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ 6 ಮಂದಿಯನ್ನು ಆಗ್ರಾ ವೈದ್ಯಕೀಯ ಕಾಲೇಜಿಗೆ ಮತ್ತು ಒಬ್ಬರನ್ನು ಅಲಿಗಢ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು.

ಘಟನೆ ಸಂಭವಿಸಿದ್ದು ಹೀಗೆ.. ಇಟಾಹ್ ಜಿಲ್ಲೆಯ ಜಲೇಸರ್‌ನಿಂದ ಸುಮಾರು 50 ರಿಂದ 60 ಮಂದಿ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಗೋವರ್ಧನ್ ಪರಿಕ್ರಮಕ್ಕೆ ತೆರಳುತ್ತಿದ್ದರು. ಇವರಲ್ಲಿ ಒಂದೇ ಕುಟುಂಬದವರು ಇದ್ದರು. ಟ್ರ್ಯಾಕ್ಟರ್ ಸಹಾಪೌ ಕೊಟ್ವಾಲಿ ಪ್ರದೇಶದ ಸದಾಬಾದ್ ರಸ್ತೆಯಲ್ಲಿದ್ದಾಗ, ಮುಂಭಾಗದಿಂದ ಬರುತ್ತಿದ್ದ ಡಂಪರ್‌ಗೆ ಡಿಕ್ಕಿ ಹೊಡೆದಿದೆ.

ರಸ್ತೆ ಅಪಘಾತದ ಮಾಹಿತಿ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ದೇವೇಶ್ ಕುಮಾರ್ ಪಾಂಡೆ, ಸಿಒ ಗೋಪಾಲ್ ಸಿಂಗ್, ಉಪ ಜಿಲ್ಲಾಧಿಕಾರಿ ಸದಾಬಾದ್ ಸಂಜಯ್ ಕುಮಾರ್, ತಹಶೀಲ್ದಾರ್ ಅನಿಲ್ ಕುಮಾರ್, ನಾಯಬ್ ತಹಶೀಲ್ದಾರ್ ಸತ್ಯೇಂದ್ರ ಚೌಧರಿ ಮತ್ತು ಇತರ ಅಧಿಕಾರಿಗಳು ಸದಾಬಾದ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು.

ಇದನ್ನೂ ಓದಿ:ಮೆಕ್ಸಿಕೋದಲ್ಲಿ ಕಂದಕಕ್ಕೆ ಉರಳಿದ ಬಸ್​ ಆರು ಭಾರತೀಯರು ಸೇರಿ 17 ಮಂದಿ ಸಾವು : 23 ಜನರಿಗೆ ಗಾಯ

ABOUT THE AUTHOR

...view details