ಕರ್ನಾಟಕ

karnataka

ETV Bharat / bharat

Watch-ದಾರಿಯಲ್ಲಿ ಕಂಡ ಕಂಡವರ ಮೇಲೆ ಹಸು ದಾಳಿ.. - cow attack on woman

ದಾರಿಯುದ್ದಕ್ಕೂ ಕಂಡ ಕಂಡವರನ್ನು ಹಸು ತಿವಿಯುತ್ತಾ ಸಾಗಿದೆ. ಸುಮಾರು 20 ಜನರ ಮೇಲೆ ದಾಳಿ ನಡೆಸಿದೆ. ರಾಜಾರಾಂಪುರಿ ಪ್ರದೇಶದಲ್ಲಿ ದೇವರಿಗೆ ಹರಕೆ ಕಟ್ಟಿಕೊಂಡು ಬಿಟ್ಟ ಗೂಳಿ-ಹಸುಗಳ ಕಾಟ ಹೆಚ್ಚಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಪಾಲಿಕೆಯು ಕೂಡಲೇ ಇವುಗಳನ್ನು ಹಿಡಿದು ನೋಡಿಕೊಳ್ಳಬೇಕು..

many injured by cow attack in Kolhapur
many injured by cow attack in Kolhapur

By

Published : Oct 1, 2021, 3:46 PM IST

ಕೊಲ್ಲಾಪುರ (ಮಹಾರಾಷ್ಟ್ರ) :ರೊಚ್ಚಿಗೆದ್ದ ಹಸುವೊಂದು ದಾರಿಯಲ್ಲಿ ಕಂಡ ಕಂಡವರ ಮೇಲೆ ದಾಳಿ ನಡೆಸಿದ ಪರಿಣಾಮ ಹಲವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿನ್ನೆ ನಡೆದಿದೆ.

ಕೊಲ್ಲಾಪುರದ ರಾಜಾರಾಂಪುರಿ ಪ್ರದೇಶದ ಶಾಹುನಗರದಲ್ಲಿ ಮಹಿಳೆಯೊಬ್ಬರು ಮನೆ ಬಾಗಿಲಿನ ಮುಂದೆ (ರಸ್ತೆ ಬದಿ) ಪಾತ್ರೆಗಳನ್ನು ತೊಳೆಯುತ್ತಿದ್ದ ವೇಳೆ ಹಸು ಬಂದು ಗುದ್ದಿದೆ. ಈಕೆಯನ್ನು ಬಿಡಿಸಲು ಬಂದ ಇನ್ನೊಬ್ಬ ಮಹಿಳೆ ಮೇಲೂ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:Watch: ಹಠಾತ್ U-Turn ತೆಗೆದುಕೊಂಡ ಕಾರು: ಬೈಕ್​ ಸವಾರ ಸಾವು

ಅಷ್ಟೇ ಅಲ್ಲ, ದಾರಿಯುದ್ದಕ್ಕೂ ಕಂಡ ಕಂಡವರನ್ನು ಹಸು ತಿವಿಯುತ್ತಾ ಸಾಗಿದೆ. ಸುಮಾರು 20 ಜನರ ಮೇಲೆ ದಾಳಿ ನಡೆಸಿದೆ. ರಾಜಾರಾಂಪುರಿ ಪ್ರದೇಶದಲ್ಲಿ ದೇವರಿಗೆ ಹರಕೆ ಕಟ್ಟಿಕೊಂಡು ಬಿಟ್ಟ ಗೂಳಿ-ಹಸುಗಳ ಕಾಟ ಹೆಚ್ಚಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಪಾಲಿಕೆಯು ಕೂಡಲೇ ಇವುಗಳನ್ನು ಹಿಡಿದು ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details