ಕರ್ನಾಟಕ

karnataka

ETV Bharat / bharat

ಇದೆಂಥಾ ಅಚ್ಚರಿ..!!  ಸತ್ತಿದ್ದಾನೆ ಎಂದು ತಿಳಿದು ಅಂತ್ಯಸಂಸ್ಕಾರವನ್ನೂ ಮಾಡಿದ್ದ ವ್ಯಕ್ತಿ ದಿಢೀರ್​ ಪ್ರತ್ಯಕ್ಷ! - ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆ

ಕಳೆದ ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಈತ ನಮ್ಮವನೇ ಎಂದು ತಿಳಿದು ಕುಟುಂಬಸ್ಥರು ಅಂತ್ಯಕ್ರಿಯೆಯನ್ನೂ ಮಾಡಿದ್ದರು. ಆದರೆ, ಈಗ ಅದೇ ವ್ಯಕ್ತಿ ದಿಢೀರ್​ ಪ್ರತ್ಯಕ್ಷವಾಗಿದ್ದಾನೆ...

man-who-was-supposed-to-be-dead-is-back-in-prakasam-district-ap
ಸತ್ತಿದ್ದಾನೆ ಎಂದು ತಿಳಿದು ಅಂತ್ಯಸಂಸ್ಕಾರವನ್ನೂ ಮಾಡಿದ್ದ ವ್ಯಕ್ತಿ ದಿಢೀರ್​ ಪ್ರತ್ಯಕ್ಷ

By

Published : Jul 29, 2022, 8:18 PM IST

ಪ್ರಕಾಶಂ (ಆಂಧ್ರಪ್ರದೇಶ): ತಿಂಗಳ ಹಿಂದೆಯೇ ಸತ್ತಿದ್ದಾನೆ ಎಂದು ಭಾವಿಸಿ, ಅಂತ್ಯಕ್ರಿಯೆಯನ್ನೂ ಮಾಡಿದ್ದ ವ್ಯಕ್ತಿಯೊಬ್ಬರು ಮನೆಗೆ ಹಿಂದಿರುಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಇಲ್ಲಿನ ಗಿಡ್ಡಲೂರು ಮಂಡಲದ ಮುಂಡ್ಲಪಾಡು ಗ್ರಾಮದ ನಿವಾಸಿ ಸೈದುಮಿಯ್ಯ ಎಂಬ ವ್ಯಕ್ತಿಯೇ ದಿಢೀರ್​ ಆಗಿ ಪ್ರತ್ಯಕ್ಷವಾಗಿ ಕುಟುಂಬಸ್ಥರನ್ನೇ ತಬ್ಬಿಬ್ಬಾಗಿಸಿದ್ದಾರೆ. 35 ದಿನಗಳ ಹಿಂದೆ ಮಾರ್ಕಪುರಂ ರೈಲು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಮೃತ ವ್ಯಕ್ತಿ ಹಾಗೂ ಸೈದುಮಿಯ್ಯ ನಡುವೆ ಸಾಮ್ಯತೆ ಇತ್ತು. ಇದನ್ನೇ ತಪ್ಪಾಗಿ ಭಾವಿಸಿದ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಶವವನ್ನು ತಂದು ಅಂತಿಮ ಸಂಸ್ಕಾರ ನಡೆಸಿದ್ದರು.

ಆದರೆ, ಇದೇ ಬುಧವಾರ ಸೈದುಮಿಯ್ಯ ಏಕಾಏಕಿ ಮನೆಗೆ ಬಂದಿದ್ದಾರೆ. ಇದರಿಂದ ಕುಟುಂಬ ಸದಸ್ಯರೇ ನಂಬಲಾಗದಂತಹ ಸ್ಥಿತಿಗೆ ತಲುಪಿದ್ದಾರೆ. ಇದೇ ವೇಳೆ ಸತ್ತಿದ್ದಾನೆ ಎಂದು ಭಾವಿಸಿದ ವ್ಯಕ್ತಿ ಮನೆಗೆ ಮರಳಿ ಬಂದಿರುವುದು ಸಂತಸವನ್ನೂ ಉಂಟು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೈದುಮಿಯಾ, ನಾನು ಇಷ್ಟು ದಿನ ತೆಲಂಗಾಣದ ಆರ್ಮರ್​ನಲ್ಲಿ ಇದ್ದೆ ಎಂದಷ್ಟೇ ಹೇಳಿದ್ದಾರೆ.

ಇದನ್ನೂ ಓದಿ:ಸಪ್ತ ಸಾಗರದಾಚೆಯೆಲ್ಲೋ.. ಪ್ರೇಮಿ ಹುಡುಕಿಕೊಂಡು ಬಂದ ಪ್ಯಾರಿಸ್‌ ಯುವತಿ!

ABOUT THE AUTHOR

...view details