ಕರ್ನಾಟಕ

karnataka

ತಂದೆಗಾಗಿ ಸರ್ಕಾರಿ ಕೆಲಸ ಬಿಟ್ಟು ಆಸ್ಪತ್ರೆಯಲ್ಲಿ ಸ್ವೀಪರ್​​ ಆದ ಮಗ... ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಹಿರಿಯ ಜೀವ ಬಲಿ!

ಯುವಕನೊಬ್ಬ ತನ್ನ ತಂದೆಗಾಗಿ ಸ್ವೀಪರ್​ ಕೆಲಸಕ್ಕೆ ಸೇರಿದ್ರೂ ಸಹ ಪ್ರಯೋಜವಾಗಿಲ್ಲ. ಕೆಲಸಕ್ಕೆ ಹಾಜರಾಗಿ ಕೆಲ ಗಂಟೆಗಳಲ್ಲೇ ಆ ಯುವಕ ತನ್ನ ತಂದೆಯನ್ನು ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.

By

Published : May 13, 2021, 2:28 PM IST

Published : May 13, 2021, 2:28 PM IST

man turned as sweeper, man turned as sweeper for his father, man turned as sweeper for his father at visakhapatnam, visakhapatnam news, ತಂದೆಗಾಗಿ ಸ್ವೀಪರ್​ ಆದ ಮಗ, ವಿಶಾಖಪಟ್ಟಣಂನಲ್ಲಿ ತಂದೆಗಾಗಿ ಸ್ವೀಪರ್ ಆದ ಮಗ, ವಿಶಾಖಪಟ್ಟಣಂ ಸುದ್ದಿ,
ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಬಲಿಯಾದ ಹಿರಿಯ ಜೀವ

ವಿಶಾಖಪಟ್ಟಣಂ:ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ತನ್ನ ತಂದೆಗಾಗಿ ಯುವಕನೊಬ್ಬ ಅದೇ ಆಸ್ಪತ್ರೆಯಲ್ಲಿ ಸ್ವೀಪರ್​ ಕೆಲಸಕ್ಕೆ ಸೇರಿಕೊಂಡ್ರೂ ಪ್ರಯೋಜನವಾಗಲಿಲ್ಲ. ಕೆಲಸಕ್ಕೆ ಹಾಜರಾಗಿ ಕೆಲವೇ ಗಂಟೆಯಲ್ಲಿ ಆ ಯುವಕ ತನ್ನ ತಂದೆಯನ್ನೇ ಕಳೆದುಕೊಂಡಿದ್ದಾನೆ.

ಅಕ್ಕಯ್ಯಪಾಲೇ ಗ್ರಾಮದ ನಿವಾಸಿ ಮಧುಕಿಶನ್​ ಎಂಬಿಎ ಪದವಿ ಪಡೆದಿದ್ದಾರೆ. ರಾಜ್ಯ ಸರ್ಕಾರಕ್ಕೆ ಸೇರಿದ 1902 ಸ್ಪಂದನಾ ಕಾಲ್​ ಸೆಂಟರ್​ನಲ್ಲಿ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು. ಮಧುಕಿಶನ್​ ತಂದೆ ಸುದರ್ಶನ್​ ರಾವ್​ (67) ವಿಶ್ರಾಂತ್​​ ಶಿಪ್​ ಯಾರ್ಡ್ ಉದ್ಯೋಗಿ. ಸುದರ್ಶನ್​ಗೆ ಕೊರೊನಾ ಸೋಂಕು ತಗುಲಿದ್ದು, ಮೇ 2ರಂದು ಇಲ್ಲಿನ ಕೆಜಿಎಚ್​ ಆಸ್ಪತ್ರೆಗೆ ದಾಖಲಿಸಿದ್ದರು. ಸುದರ್ಶನ್​ಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಎರಡು ದಿನಗಳ ಬಳಿಕ ಸ್ನಾನದ ಗೃಹದಲ್ಲಿ ಸುದರ್ಶನ್​ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಅವರಿಗೆ ಪೆಟ್ಟಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ಹೇಳಿದ್ರೂ ಸಹ ಪ್ರಯೋಜನವಾಗಿಲ್ಲ. ಬಳಿಕ ಸುದರ್ಶನ್​ ತನ್ನ ಮಗನಿಗೆ ಫೋನ್​ ಮಾಡಿ ತಿಳಿಸಿದ್ದಾರೆ. ಮಧುಕಿಶನ್​ ಆಸ್ಪತ್ರೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಸುದರ್ಶನ್​ರಿಗೆ ಚಿಕಿತ್ಸೆ ಸಿಕ್ಕಿದೆ.

ಆಸ್ಪತ್ರೆಯವರ ನಿರ್ಲಕ್ಷ್ಯದಿಂದಾಗಿ ಮಧುಕಿಶನ್​ ತನ್ನ ತಂದೆಯ ಜೊತೆ ಇರಲು ಇಚ್ಛಿಸಿದ್ದರು. ಆದ್ರೆ ಕೋವಿಡ್ ಆಸ್ಪತ್ರೆಯಾಗಿದ್ದರಿಂದ ಮುಧುಕಿಶನ್​ಗೆ ಒಳಗಡೆ ಹೋಗಲು ಅನುಮತಿ ಇರಲಿಲ್ಲ. ತನ್ನ ತಂದೆಯ ಆರೋಗ್ಯಕ್ಕಾಗಿ ಸರ್ಕಾರಿ ಸ್ವಾಮ್ಯತ್ವದ ಕೆಲಸ ಬಿಟ್ಟು ಅದೇ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ಸ್ವೀಪರ್​ ಕೆಲಸಕ್ಕೆ ಸೇರಿಕೊಂಡರು.

ಸೋಮವಾರ ರಾತ್ರಿ 9.30ಕ್ಕೆ ಮಧುಕಿಶನ್​ ಕಾರ್ಯ ನಿಮಿತ್ತ ಹೊರಗಡೆ ತೆರಳಿ ಆಸ್ಪತ್ರೆಗೆ ವಾಪಸಾಗಿದ್ದಾರೆ. ತನ್ನ ತಂದೆ ಇರುವ ರೂಂಗೆ ತೆರಳಿದ್ದಾರೆ. ಅಲ್ಲಿ ಅವರ ತಂದೆ ಕಾಣಲಿಲ್ಲ. ಶೌಚಾಲಯದ ಆವರಣದಲ್ಲಿ ಅವರ ತಂದೆ ಬಿದ್ದಿದ್ದರು. ಆ ಸ್ಥಿತಿಯಲ್ಲಿ ತನ್ನ ತಂದೆಯನ್ನು ನೋಡಿದ ಮಧುಕಿಶನ್​ ದಿಗ್ಭ್ರಮೆಗೊಂಡರು. ಅದೇ ವಾರ್ಡ್​ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಬಂದು ನಿಮ್ಮ ತಂದೆ ಸಾವನ್ನಪ್ಪಿ ಬಹಳ ಗಂಟೆಗಳೇ ಕಳೆದಿವೆ ಎಂದಿದ್ದಾರೆ. ಈ ವಿಷಯ ಕೇಳಿದ ಮಧುಕಿಶನ್​ಗೆ ಹೃದಯ ಒಡೆದಂತಾಗಿದೆ.

ಆಸ್ಪತ್ರೆ ಸಿಬ್ಬಂದಿಯರ ನಿರ್ಲಕ್ಷ್ಯದಿಂದಾಗಿ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ ಮಧುಕಿಶನ್,​ ಆಸ್ಪತ್ರೆಯ ಸೂಪರಿಂಟೆಂಡೆಂಟ್​, ಸಿಎಸ್​ಆರ್​ ಬ್ಲಾಕ್​ ಇನ್​ಚಾರ್ಜ್​, ಪೊಲೀಸ್​ ಕಮಿಷನರ್​ಗೆ ದೂರು ಸಲ್ಲಿಸಿದ್ದಾರೆ. ಸೋಮವಾರ ರಾತ್ರಿ 8.30ಕ್ಕೆ ನನ್ನ ತಂದೆ ಶೌಚಾಲಯದಲ್ಲಿ ಕುಸಿದು ಬಿದ್ರೂ ಸಹ ಯಾರು ಸಹಕರಿಸಿಲ್ಲ ಎಂದು ಮಧುಕಿಶನ್​ ದೂರಿದ್ದಾರೆ.

ABOUT THE AUTHOR

...view details