ಕರ್ನಾಟಕ

karnataka

ETV Bharat / bharat

ಡೆಂಟಲ್​ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದು ಯುವಕ ಆತ್ಮಹತ್ಯೆಗೆ ಶರಣು..!

ಡೆಂಟಲ್​ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆಗೆ ಪ್ರೇಮ ಪುರಣಾವೇ ಕಾರಣ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

By

Published : Jul 31, 2021, 9:55 AM IST

Man shoot woman to death  Kerala crime news  Kochi crime  house surgeon shot to death  ಡೆಂಟಲ್​ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದು ಯುವಕ ಆತ್ಮಹತ್ಯೆಗೆ ಶರಣು  ಎರ್ನಾಕುಲಂನಲ್ಲಿ ಡೆಂಟಲ್​ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದು ಯುವಕ ಆತ್ಮಹತ್ಯೆಗೆ ಶರಣು  ಎರ್ನಾಕುಲಂ ಅಪರಾಧ ಸುದ್ದಿ,
ಡೆಂಟಲ್​ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದು ಯುವಕ ಆತ್ಮಹತ್ಯೆಗೆ ಶರಣು

ಎರ್ನಾಕುಲಂ(ಕೇರಳ):ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ಯುವತಿಯನ್ನು ಪಕ್ಕದ ರೂಂಗೆ ಎಳೆದೊಯ್ದು ಗುಂಡಿಕ್ಕಿ ಕೊಲೆ ಮಾಡಿದ ಯುವಕ, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋತಮಂಗಲದ ನೆಲ್ಲಿಕುಳಿಯಲ್ಲಿ ನಡೆದಿದೆ.

ಏನಿದು ಪ್ರಕರಣ:ಇಂದಿರಾ ಗಾಂಧಿ ಡೆಂಟಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮಾನಸಾ (24) ವ್ಯಾಸಂಗ ಮಾಡುತ್ತಿದ್ದರು. ಮಾನಸ ಕಣ್ಣೂರಿನ ಎರಡನೇ ಮೈಲ್ ನಿವಾಸಿ. ಯುವಕ ರಾಹಿಲ್​ ಸಹ ಕಣ್ಣೂರಿನ ನಿವಾಸಿ. ರಾಹಿಲ್​ ಮತ್ತು ಮಾನಸಾಗೆ ಈ ಹಿಂದೆ ಪರಿಚಯವಿತ್ತು.

ಲವ್​ ಪ್ರಪೋಸ್​: ಇಬ್ಬರ ಮಧ್ಯೆ ಸ್ನೇಹ ಇದ್ದ ಕಾರಣ ರಾಹಿಲ್​ ಮಾನಸಾಳಿಗೆ ತನ್ನ ಪ್ರೇಮದ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ಇದಕ್ಕೆ ಮಾನಸಾ ನಿರಾಕರಿಸಿದ್ದಾಳೆ. ಈ ವಿಷಯದ ಸಂಬಂಧ ಇಬ್ಬರಲ್ಲಿ ಬಿರುಕು ಮೂಡಿದೆ. ಆದ್ರೂ ಸಹ ರಾಹಿಲ್​ ತನ್ನನ್ನು ಪ್ರೀತಿಸುವಂತೆ ಮಾನಸಾಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಮಾನಸಾ ರಾಹಿಲ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು. ನಂತರ ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗಿತ್ತು.

ಕೊಲೆ...ಶುಕ್ರವಾರ ಏಕಾಏಕಿ ಡೆಂಟಲ್ ಕಾಲೇಜಿನ ಬಳಿ ಮಾನಸಾ ವಾಸಿಸುತ್ತಿದ್ದ ಬಾಡಿಗೆ ಮನೆಗೆ ರಾಹಿಲ್​ ನುಗ್ಗಿದ್ದಾನೆ. ತನ್ನ ಸ್ನೇಹಿತರೊಂದಿಗೆ ನಿವಾಸದಲ್ಲಿ ಮಾತನಾಡುತ್ತಿದ್ದ ಮಾನಸಾಳನ್ನು ಪಕ್ಕದ ಕೋಣೆಗೆ ಎಳೆದೊಯ್ದು ಗುಂಡಿಕ್ಕಿ ಕೊಂದಿದ್ದಾನೆ. ಸ್ವಲ್ಪ ಸಮಯದ ನಂತರ ರಾಹಿಲ್​ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಇಬ್ಬರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಘಟನೆ ಕುರಿತು ಪೊಲೀಸ್​ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details