ಗ್ರೇಟರ್ ನೋಯ್ಡಾ(ಉತ್ತರ ಪ್ರದೇಶ): ಕಾರಿನ ದಾಖಲಾತಿ ತೋರಿಸಲು ಕೇಳಿದ ಟ್ರಾಫಿಕ್ ಪೊಲೀಸನನ್ನೇ ವ್ಯಕ್ತಿಯೊಬ್ಬ ಕಿಡ್ನಾಪ್ ಮಾಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ ಒಬ್ಬರ ವಾಹನಗಳ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ, ಆರೋಪಿ ಸಚಿನ್ ರಾವತ್ ಎಂಬಾತನ ಕಾರು ತಡೆದಿರುವ ಟ್ರಾಫಿಕ್ ಪೊಲೀಸ್ ವಿರೇಂದ್ರ ಸಿಂಗ್ ದಾಖಲಾತಿ ಕೇಳಿದ್ದಾರೆ. ಈ ವೇಳೆ, ಕಾರಿನೊಳಗೆ ಕುಳಿತುಕೊಳ್ಳಿ ಎಂದಿರುವ ಆತ, ದಿಢೀರ್ನೇ ಕಾರ್ ಡೋರ್ ಲಾಕ್ ಮಾಡಿಕೊಂಡು ಸುಮಾರು 10 ಕಿಲೋ ಮೀಟರ್ ದೂರ ಕರೆದೊಯ್ದಿದ್ದಾನೆ. ಇದಾದ ಬಳಿಕ ಅಜಯ್ಪುರ್ ಪೊಲೀಸ್ ಚೌಕಿ ಬಳಿ ಬಲವಂತವಾಗಿ ಕೆಳಗಿಳಿಸಿ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ.