ಕರ್ನಾಟಕ

karnataka

ETV Bharat / bharat

ವಿಪಕ್ಷಗಳ ಒಗ್ಗಟ್ಟಿಗೆ' ದೀದಿ' ಪ್ರಯತ್ನ: ಕಾಂಗ್ರೆಸ್​ನಿಂದ ದೊರೆಯದ ಸ್ಪಂದನೆ - ಸೋನಿಯಾ ಗಾಂಧಿ ಮಮತಾ ಬ್ಯಾನರ್ಜಿ ಭೇಟಿ

'ದೀದಿ' ಎಲ್ಲಾ ಪಕ್ಷಗಳನ್ನೊಳಗೊಂಡ ವಿರೋಧ ಪಕ್ಷ ಕಟ್ಟಲು ಪ್ರಯತ್ನಿಸಿದರು, ಆದರೆ, ಕಾಂಗ್ರೆಸ್ ಸ್ಪಂದಿಸಲಿಲ್ಲ ಎಂದು ಟಿಎಂಸಿ ಸಂಸದ ಸುಖೆಂದು ಶೇಖರ್ ರಾಯ್ ಅವರು ತಿಳಿಸಿದ್ದಾರೆ.

TMC MP
ಸುಖೆಂದು ಶೇಖರ್ ರಾಯ್ ಸುದ್ದಿಗೋಷ್ಟಿ

By

Published : Oct 26, 2021, 7:09 PM IST

ನವದೆಹಲಿ:ಕಾಂಗ್ರೆಸ್ ಸ್ಪಂದಿಸದ ಕಾರಣ ಮಮತಾ ಬ್ಯಾನರ್ಜಿ ಅವರು ಎಲ್ಲಾ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಿ ವಿರೋಧ ಪಕ್ಷವನ್ನು ಕಟ್ಟಲು ಮಾಡಿದ ಪ್ರಯತ್ನಗಳು ವಿಫಲವಾದವು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸುಖೆಂದು ಶೇಖರ್ ರಾಯ್ ಅವರು ಹೇಳಿದ್ದಾರೆ.

ಸುಖೆಂದು ಶೇಖರ್ ರಾಯ್ ಸುದ್ದಿಗೋಷ್ಠಿ

ಸಂಸತ್ತಿನ ಕೊನೆಯ ಅಧಿವೇಶನದ ಸಮಯದಲ್ಲಿ ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ನಂತರ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೆಹಲಿಗೆ ತೆರಳಿ, ಸೋನಿಯಾ ಗಾಂಧಿ ಮತ್ತು ವಿವಿಧ ರಾಜಕೀಯ ಪಕ್ಷಗಳ ಇತರ ಕೆಲವು ನಾಯಕರನ್ನು ಭೇಟಿ ಮಾಡಿದರು. ಬಿಜೆಪಿಯ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಲು ಎಲ್ಲರೂ ಒಂದೇ ಒಟ್ಟಾಗಬೇಕು ಎಂದು ಅವರು ಮನವಿ ಮಾಡಿದರು" ಎಂದು ಟಿಎಂಸಿ ಸಂಸದ ರಾಯ್ ಹೇಳಿದ್ರು.

"ಬಿಜೆಪಿ ವಿರುದ್ಧ ರಾಷ್ಟ್ರವ್ಯಾಪಿ ಪ್ರಚಾರ ಕೈಗೊಳ್ಳಲು ಸಾಮಾನ್ಯ ಕ್ರಿಯಾ ಯೋಜನೆ ರೂಪಿಸಲು ಸಮಾನ ಮನಸ್ಕ ಪಕ್ಷಗಳ ಸಭೆಗಳನ್ನು ಕರೆಯಲು ಕ್ರಮ ಕೈಗೊಳ್ಳುವಂತೆ ಅವರು ಸೋನಿಯಾ ಗಾಂಧಿಯವರಲ್ಲಿ ಕೇಳಿಕೊಂಡರು. ಆದರೆ, ಕಾಂಗ್ರೆಸ್ ಪಕ್ಷವು ಬಹುಶಃ ತನ್ನ ಆಂತರಿಕ ಸಮಸ್ಯೆಗಳಲ್ಲಿ ನಿರತವಾಗಿತ್ತು, ಸೂಕ್ತ ಸ್ಪಂದನೆ ನೀಡಲಿಲ್ಲ. ತೃಣಮೂಲ ಕಾಂಗ್ರೆಸ್ ಅನಿರ್ದಿಷ್ಟಾವಧಿಯವರೆಗೆ ಕಾಯಲು ಸಾಧ್ಯವಿಲ್ಲ, ”ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರ, ತೃಣಮೂಲ ಕಾಂಗ್ರೆಸ್ ತ್ರಿಪುರಾ ಮತ್ತು ಗೋವಾದ ಮೇಲೆ ಕಣ್ಣಿಟ್ಟಿದೆ. ಜೊತೆಗೆ ಅಸ್ಸೋಂ ಮತ್ತು ಉತ್ತರ ಪ್ರದೇಶದಲ್ಲೂ ಸಂಘಟನೆಗಳನ್ನು ನಿರ್ಮಿಸಲು ಪ್ರಾರಂಭಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಹೊಸದಾಗಿ ಸೇರ್ಪಡೆಗೊಂಡ ಸುಶ್ಮಿತಾ ದೇವ್ ಅವರು ತ್ರಿಪುರಾದಲ್ಲಿ ಹೆಚ್ಚಾಗಿ ಪ್ರಚಾರ ನಡೆಸುತ್ತಿರುವುದರಿಂದ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಈಶಾನ್ಯದತ್ತ ನಮ್ಮ ಹೆಚ್ಚಿನ ಗಮನವಿದೆ ಎಂದರು.

"ನಾವು ವಿವಿಧ ರಾಜ್ಯಗಳಲ್ಲಿ ನಮ್ಮ ಪಕ್ಷದ ಸಂಘಟನೆಗಳನ್ನು ವಿಸ್ತರಿಸಲು ನಿರ್ಧರಿಸಿದ್ದೇವೆ ಮತ್ತು ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅದರ ಉಸ್ತುವಾರಿ ವಹಿಸಿದ್ದಾರೆ ಎಂದು ತಿಳಿಸಿದರು.

ಇನ್ನು ಟಿಎಂಸಿ ಕಾಂಗ್ರೆಸ್ ನಾಯಕರನ್ನು ಬೇಟೆಯಾಡುತ್ತಿದೆ ಎಂಬ ಆರೋಪವನ್ನು ರಾಯ್ ತಳ್ಳಿಹಾಕಿದರು. "ಭಾರತದ ರಾಜಕೀಯದಲ್ಲಿ ಪಕ್ಷಗಳನ್ನು ಬದಲಾಯಿಸುವುದು ಹೊಸದಲ್ಲ ಮತ್ತು ಇತ್ತೀಚೆಗೆ ಇತರ ಪಕ್ಷಗಳ ಜನರು ಕನ್ಹಯ್ಯಾ ಕುಮಾರ್ ಅವರಂತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಟಿಎಂಸಿ ಅದನ್ನು ನಾಯಕರ ಬೇಟೆ ಎಂದು ಕರೆಯಲಿಲ್ಲ" ಎಂದು ಅವರು ಹೇಳಿದರು.

ABOUT THE AUTHOR

...view details