ಜೈ ಶ್ರೀರಾಮ್ ಘೋಷಣೆಯ ಸಿಟ್ಟು; ಭಾಷಣ ನಿರಾಕರಿಸಿದ ಸಿಎಂ ಮಮತಾ ಬ್ಯಾನರ್ಜಿ! - ನಾನು ಭಾಷಣ ಮಾಡಲ್ಲ ಎಂದ ಸಿಎಂ ಮಮತಾ ಬ್ಯಾನರ್ಜಿ
![ಜೈ ಶ್ರೀರಾಮ್ ಘೋಷಣೆಯ ಸಿಟ್ಟು; ಭಾಷಣ ನಿರಾಕರಿಸಿದ ಸಿಎಂ ಮಮತಾ ಬ್ಯಾನರ್ಜಿ! Mamata greeted with 'Jai Shri Ram' chants, refuses to deliver speech](https://etvbharatimages.akamaized.net/etvbharat/prod-images/768-512-10353009-thumbnail-3x2-didiii.jpg)
17:17 January 23
ಸುಭಾಷ್ ಚಂದ್ರ ಬೋಸ್ ಜನ್ಮದಿನ ಕಾರ್ಯಕ್ರಮದಲ್ಲಿ ಕೆಲ ಕಾರ್ಯಕರ್ತರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭಾಷಣ ಮಾಡಲು ನಿರಾಕರಿಸಿದ್ದಾರೆ.
ಕೋಲ್ಕತ್ತಾ (ಪಶ್ಚಿಮ ಬಂಗಾಳ):ಸುಭಾಷ್ ಚಂದ್ರ ಬೋಸ್ 125ನೇ ಜನ್ಮದಿನ ಹಿನ್ನೆಲೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆಲ ಕಾರ್ಯಕರ್ತರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಸಿಟ್ಟಿಗೆದ್ದ ಸಿಎಂ ಮಮತಾ ಬ್ಯಾನರ್ಜಿ ಭಾಷಣ ಮಾಡಲು ನಿರಾಕರಿಸಿದ್ದಾರೆ.
ಇದೊಂದು ಸರ್ಕಾರಿ ಕಾರ್ಯಕ್ರಮ. ಇದು ರಾಜಕೀಯ ಕಾರ್ಯಕ್ರಮವಲ್ಲ. ನಾನು ಏನೂ ಹೇಳುವುದಿಲ್ಲ ಘೋಷಣೆಯಿಂದ ನನಗೆ ಬೇಸರವಾಗಿದೆ ಎಂದು ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಪ್ರಧಾನಿ ಮೋದಿ ಭಾಷಣಕ್ಕೂ ಮುನ್ನ ಸಿಎಂ ಮಮತಾ ಬ್ಯಾನರ್ಜಿ ಭಾಷಣ ಮಾಡುವಂತೆ ಅಧಿಕಾರಿಗಳು ಆಹ್ವಾನಿಸಿದರು.
ದೀದಿ ವೇದಿಕೆಗೆ ಬರುತ್ತಿದ್ದಂತೆ ಮುಂಭಾಗ ಕುಳಿತಿದ್ದ ಕೆಲವರು ಜೈ ಶ್ರೀರಾಮ್ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಆಗ ಈ ಮೇಲಿನಂತೆ ಹೇಳಿದ ಮಮತಾ ಬ್ಯಾನರ್ಜಿ ನಾನು ಭಾಷಣ ಮಾಡುವುದಿಲ್ಲ ಜೈ ಭಾರತ್, ಜೈ ಬೆಂಗಾಲ್ ಎಂದು ಹೇಳಿ ಅಲ್ಲಿಂದ ತೆರಳಿದರು. ಕೋಲ್ಕತ್ತದ ವಿಕ್ಟೋರಿಯಾ ಮೆಮೋರಿಯಲ್ ಹಾಲ್ನಲ್ಲಿ ನಡೆದ ಈ ಘಟನೆಗೆ ಪ್ರಧಾನಿ ಮೋದಿ ಕೂಡ ಸಾಕ್ಷಿಯಾದರು.