ಕರ್ನಾಟಕ

karnataka

By

Published : Mar 17, 2023, 7:42 PM IST

ETV Bharat / bharat

ನಿಶಿಕಾಂತ್ ದುಬೆ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಗಂಭೀರ ಆರೋಪ..!

ಈ ಹಿಂದೆ, ಮಹುವಾ ಮೊಯಿತ್ರಾ ಅವರು ನಿಶಿಕಾಂತ್ ದುಬೆಯನ್ನು ರಾಕ್ಷಸ ಎಂದು ಕರೆದಿದ್ದರು. ಸದ್ಯ ಅವರು ಜಾರ್ಖಂಡ್‌ನ ಬಿಜೆಪಿ ಸಂಸದರ ವಿದ್ಯಾರ್ಹತೆ ಪ್ರಶ್ನಿಸಿದ್ದಾರೆ. ಮೊಯಿತ್ರಾ ತಮ್ಮ ಟ್ವೀಟ್‌ಗಳಲ್ಲಿ, ದುಬೆ ಅವರು ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿರುವ ಪದವಿಗಳನ್ನು ಪ್ರಶ್ನೆ ಮಾಡಿದ್ದಾರೆ.

Mahua Moitra tweet
ನಿಶಿಕಾಂತ್ ದುಬೆ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರೋಪ

ನವದೆಹಲಿ:ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಅಫಿಡವಿಟ್‌ನಲ್ಲಿ ಸುಳ್ಳು ಶೈಕ್ಷಣಿಕ ದಾಖಲೆಗಳನ್ನು ಒದಗಿಸಿದ್ದಾರೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಗಂಭೀರ ಆರೋಪ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ಮಾಡಿದ ಆರೋಪ ಏನು?:ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಲೋಕಸಭೆಯ ಸದಸ್ಯತ್ವವನ್ನು ವಜಾಗೊಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿಶೇಷ ಹಕ್ಕು ನೋಟಿಸ್ ಸಲ್ಲಿಸಿದ್ದರು. ಈ ಹಕ್ಕುಚ್ಯುತಿ ನೋಟಿಸ್ ನೀಡಿದ ಕೆಲವೇ ದಿನಗಳಲ್ಲಿ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೂಡ ಟ್ವಿಟರ್‌ನಲ್ಲಿ ಅವರ ಗಂಭೀರ ಆರೋಪ ಮಾಡಿದ್ದಾರೆ. ಹೌದು, ದುಬೆ ಅವರು ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ದುಬೆ ಅವರ ಅಫಿಡವಿಟ್ ಅನ್ನು ಪೋಸ್ಟ್​ ಮಾಡಿದ್ದಾರೆ.

ಸಂಸದೆ ಮೊಯಿತ್ರಾ ಟ್ವೀಟಾಸ್ತ್ರ:ಮೊದಲ ಟ್ವೀಟ್‌ನಲ್ಲಿ ಮೊಯಿತ್ರಾ ಅವರು, 2009ರಿಂದ ದುಬೆ ಅವರ ನಾಮನಿರ್ದೇಶನ ಪತ್ರದ ಅಫಿಡವಿಟ್‌ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲಿ ಅವರು 1993ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ತಮ್ಮ ಎಂಬಿಎ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ದುಬೆ 2019ರ ಮೊದಲು ಅವರ ಶೈಕ್ಷಣಿಕ ಅರ್ಹತೆಗಳ ಸಂಪೂರ್ಣ ಪಟ್ಟಿಯನ್ನು ನೀಡಿಲ್ಲ ಎಂದು ಮೊಯಿತ್ರಾ ಗಮನಸೆಳೆದಿದ್ದಾರೆ.

ಆರ್‌ಟಿಐ ಮಾಹಿತಿಯಲ್ಲೇನಿದೆ?:ಮೊಯಿತ್ರಾ ಅವರ ಎರಡನೇ ಟ್ವೀಟ್‌ನಲ್ಲಿ, ದೆಹಲಿ ವಿಶ್ವವಿದ್ಯಾನಿಲಯದ ಡೀನ್ , ಜಾರ್ಖಂಡ್‌ನ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಬರೆದ ಪತ್ರವನ್ನು ಉಲ್ಲೇಖಿಸಿದ್ದಾರೆ. 1993ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ಕಾರ್ಯಕ್ರಮಕ್ಕೆ ನಿಶಿಕಾಂತ್ ದುಬೆ ಎಂಬ ಹೆಸರಿನ ಯಾರೂ ಪ್ರವೇಶ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಈ ಮಾಹಿತಿಯನ್ನು ಆರ್‌ಟಿಐ ಪ್ರಶ್ನೆಯ ಮೂಲಕ ಪಡೆಯಲಾಗಿದೆ. ವಿಶ್ವವಿದ್ಯಾನಿಲಯವು 2020ರಲ್ಲಿ ಲಿಖಿತ ಪ್ರತಿಕ್ರಿಯೆಯನ್ನು ನೀಡಿದೆ ಎಂಬ ಅಂಶವನ್ನು ಮೊಯಿತ್ರಾ ಎತ್ತಿ ತೋರಿಸಿದ್ದಾರೆ. ದುಬೆ ಅವರು 1993ರಲ್ಲಿ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದಿಂದ ಉತ್ತೀರ್ಣರಾಗಿಲ್ಲ ಎಂದು ಅವರು ಹೇಳಿದ್ದಾರೆ.

ದುಬೆ ಅಫಿಡವಿಟ್​ನಲ್ಲೇನಿದೆ?:ಮೊಯಿತ್ರಾ ಮೂರನೇ ಟ್ವೀಟ್‌ನಲ್ಲಿ, ಜಾರ್ಖಂಡ್ ಸರ್ಕಾರದಿಂದ ಸ್ಟ್ಯಾಂಪ್ ಮಾಡಿದ ಎರಡು ಪುಟಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ 2019ರಿಂದ ದುಬೆ ಅವರ ಅಫಿಡವಿಟ್ ಇದೆ. ಈ ಅಫಿಡವಿಟ್‌ನಲ್ಲಿ, ದುಬೆ ತಮ್ಮ ಅತ್ಯುನ್ನತ ಶೈಕ್ಷಣಿಕ ಅರ್ಹತೆ ರಾಜಸ್ಥಾನದ ಪ್ರತಾಪ್ ವಿಶ್ವವಿದ್ಯಾಲಯದಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಎಂದು ಹೇಳಿಕೊಂಡಿದ್ದಾರೆ. 2018ರಲ್ಲಿ ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಹಂತದ ಅಧ್ಯಯನವನ್ನು ಪೂರ್ಣಗೊಳಿಸದೇ ಪಿಎಚ್‌ಡಿ ಮಾಡಲು ಸಾಧ್ಯವಿಲ್ಲ ಎಂದು ಮೊಯಿತ್ರಾ ತಿಳಿಸಿದ್ದಾರೆ.

ಮೊಯಿತ್ರಾ ಅವರಿಂದ ಮತ್ತೆ ಮೂರು ಟ್ವೀಟ್‌:ಮೊಯಿತ್ರಾ ನಂತರ, ದುಬೆ ಅವರ ಶೈಕ್ಷಣಿಕ ಅರ್ಹತೆಗಳ ಕುರಿತು ಇನ್ನೂ ಮೂರು ಟ್ವೀಟ್‌ಗಳನ್ನು ಮಾಡಿದ್ದಾರೆ. ಅಲ್ಲಿ ಅವರು ಪ್ರತಾಪ್ ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದು ದುಬೆ 2013-15ರಲ್ಲಿ ಎಂಬಿಎ ಪದವಿಯನ್ನು ಪಡೆದಿದೆ ಎಂದು ತೋರಿಸುತ್ತದೆ. ಮೊಯಿತ್ರಾ ಅವರು ತಮ್ಮ ಪಿಎಚ್‌ಡಿ ಅರ್ಜಿಯಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ತಮ್ಮ ಎಂಬಿಎ ಪದವಿಯನ್ನು ದುಬೆ ಉಲ್ಲೇಖಿಸಿಲ್ಲ.

ನಕಲಿ ಪದವಿಗಳನ್ನು ಬರೆದು ತಮ್ಮ ಅಫಿಡವಿಟ್‌ಗಳಲ್ಲಿ ಸುಳ್ಳು ಹೇಳುವವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಬಾರದು ಎಂದು ಮೊಯಿತ್ರಾ ತಮ್ಮ ಟ್ವೀಟ್‌ಗಳನ್ನು ಮುಕ್ತಾಯಗೊಳಿಸಿದ್ದಾರೆ. 1993ರಲ್ಲಿ ದೆಹಲಿ ವಿಶ್ವವಿದ್ಯಾನಿಲಯವು ದುಬೆ ಅವರಿಗೆ ನೀಡಿದ ಪ್ರಮಾಣಪತ್ರವನ್ನು ಬಹಿರಂಗಪಡಿಸುವಂತೆ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಏಪ್ರಿಲ್ 1 ರಂದು ಜೈಲಿನಿಂದ ಬಿಡುಗಡೆ ಸಾಧ್ಯತೆ?

For All Latest Updates

ABOUT THE AUTHOR

...view details