ಕರ್ನಾಟಕ

karnataka

ಮುಂಬೈ ಸಮುದ್ರ ಸೇತುವೆಗೆ ಸಾವರ್ಕರ್, ಹಾರ್ಬರ್ ಮಾರ್ಗಕ್ಕೆ ವಾಜಪೇಯಿ ಹೆಸರಿಡಲು ತೀರ್ಮಾನ

By

Published : Jun 28, 2023, 4:12 PM IST

ಮುಂಬೈನ ವರ್ಸೋವಾ - ಬಾಂದ್ರಾ ಸಮುದ್ರ ಸೇತುವೆಗೆ ವಿ.ಡಿ. ಸಾವರ್ಕರ್ ಹಾಗೂ ಮುಂಬೈ ಟ್ರಾನ್ಸ್ ಹಾರ್ಬರ್ ಮಾರ್ಗಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ.

Maha cabinet nod for renaming Versova Bandra Sea Link after Savarkar, Mumbai Trans Harbour Link after Vajpayee
Shinde government: ಮುಂಬೈನ ಸಮುದ್ರ ಸೇತುವೆಗೆ ಸಾವರ್ಕರ್, ಹಾರ್ಬರ್ ಮಾರ್ಗಕ್ಕೆ ವಾಜಪೇಯಿ ಹೆಸರಿಡಲು ತೀರ್ಮಾನ

ಮುಂಬೈ (ಮಹಾರಾಷ್ಟ್ರ):ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಬಿಜೆಪಿ ಸರ್ಕಾರ ಮುಂಬೈನ ಪ್ರಮುಖ ಎರಡು ರಸ್ತೆಗಳಿಗೆ ಮರುನಾಮಕರಣ ಮಾಡಲು ನಿರ್ಧರಿಸಿದೆ. ವರ್ಸೋವಾ - ಬಾಂದ್ರಾ ಸಮುದ್ರ ಸೇತುವೆ (Versova - Bandra Sea Link)ಗೆ ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಹಾಗೂ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (Mumbai Trans Harbour Link)ಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡಲು ತೀರ್ಮಾನಿಸಲಾಗಿದೆ.

ಇಂದು ಮುಖ್ಯಮಂತ್ರಿ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಎರಡೂ ಯೋಜನೆಗಳು ನಿರ್ಮಾಣದ ಹಂತದಲ್ಲಿವೆ. 17 ಕಿಮೀ ಉದ್ದದ ವರ್ಸೋವಾ - ಬಾಂದ್ರಾ ಸಮುದ್ರ ಸೇತುವೆಯು ಮುಂಬೈನ ಎರಡನೇ ಸಮುದ್ರ ಸೇತುವೆಯಾಗಿದೆ. ಇದು ಅಂಧೇರಿ ಪ್ರವೇಶವನ್ನು ಬಾಂದ್ರಾ - ವರ್ಲಿ ಸಮುದ್ರ ಸೇತುವೆಗೆ ಸಂಪರ್ಕಿಸುತ್ತದೆ. 2018ರಿಂದ ಇದರ ಕಾಮಗಾರಿ ಆರಂಭವಾಗಿದ್ದು, 2016ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸದ್ಯ ಬಾಂದ್ರಾದಿಂದ ವರ್ಸೋವಾ ತಲುಪಲು ಒಂದೂವರೆ ಗಂಟೆ ಸಮಯ ಹಿಡಿಯುತ್ತಿದ್ದು, ಇದರ ಯೋಜನೆಗೊಂಡಲ್ಲಿ ಕೇವಲ ಅರ್ಧ ಗಂಟೆಯ ಸಾಗುತ್ತದೆ.

ಕಳೆದ ಮೇ 28ರಂದು ನಡೆದ ಸಾವರ್ಕರ್ ಜಯಂತಿ ಕಾರ್ಯಕ್ರಮದಲ್ಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ, ವರ್ಸೋವಾ - ಬಾಂದ್ರಾ ಸಮುದ್ರ ಸೇತುವೆಕ್ಕೆ ವೀರ ಸಾವರ್ಕರ್​ ಹೆಸರಿಡಲಾಗುವುದು ಎಂದು ಘೋಷಿಸಿದ್ದರು. ಇಂದು ವಿಷಯವು ರಾಜ್ಯ ಸಚಿವ ಸಂಪುಟದ ಮುಂದೆ ಬಂದಿದ್ದು, ಇದಕ್ಕೆ ಸಂಪುಟವು ಅಂಗೀಕಾರ ನೀಡಿದೆ. ಅದೇ ರೀತಿಯಾಗಿ ಮುಂಬೈನಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುವ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಸಹ ನಿರ್ಮಾಣ ಹಂತದಲ್ಲಿದೆ. ಇದು ಈ ವರ್ಷ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಮಾರ್ಗಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡಲು ಸಂಪುಟ ಒಪ್ಪಿಗೆ ಕೊಟ್ಟಿದೆ.

ಇದನ್ನೂ ಓದಿ:ವೀರ್ ಸಾವರ್ಕರ್ ಜೀವನಚರಿತ್ರೆಯನ್ನು ಪಠ್ಯದಲ್ಲಿ ಕಡ್ಡಾಯಗೊಳಿಸಿದ ಯುಪಿ ಸರ್ಕಾರ

ಸಿಎಂ ಶಿಂಧೆ ಮಾತನಾಡಿ, ನಾವು ವರ್ಸೋವಾ - ಬಾಂದ್ರಾ ಸಮುದ್ರ ಸಂಪರ್ಕಕ್ಕೆ ವೀರ ಸಾವರ್ಕರ್ ಸೇತು ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದೇವೆ. ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್​ಗೆ ಅಟಲ್ ಬಿಹಾರಿ ವಾಜಪೇಯಿ ಸ್ಮೃತಿ ನವ ಸೇವಾ ಅಟಲ್ ಸೇತು ಎಂದು ಮರುನಾಮಕರಣ ಮಾಡಿದ್ದೇವೆ. ಇದೇ ವೇಳೆ, ಮಹಾತ್ಮಾ ಜ್ಯೋತಿರಾವ್ ಫುಲೆ ಜನ್ ಆರೋಗ್ಯ ಯೋಜನೆಯ ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಎರಡು ಯೋಜನೆಗಳ ಮರು ನಾಮಕರಣವು ಶಿಂಧೆ ಸರ್ಕಾರವು ತನ್ನ ಒಂದು ವರ್ಷದ ಅಧಿಕಾರದಲ್ಲಿ ಕೈಗೊಂಡ ಮರು ನಾಮಕರಣದ ಮುಂದುವರೆದ ಭಾಗವಾಗಿದೆ. ಈ ಹಿಂದೆ ಮರಾಠ ರಾಣಿ ಅಹಲ್ಯಾದೇವಿ ಹೋಳ್ಕರ್ ಅವರನ್ನು ಅಹಮದ್‌ ನಗರಕ್ಕೆ ಅಹಲ್ಯಾ ನಗರ ಎಂದು ಮರುನಾಮಕರಣ ಮಾಡಲಾಗಿತ್ತು. ಔರಂಗಾಬಾದ್​ಗೆ ಛತ್ರಪತಿ ಶಿವಾಜಿಯ ಹಿರಿಯ ಮಗನ ಛತ್ರಪತಿ ಸಂಭಾಜಿ ಹೆಸರಿಟ್ಟು, ಛತ್ರಪತಿ ಸಂಭಾಜಿ ನಗರ ಎಂದು ಮರು ನಾಮಕರಣ ಮಾಡಲಾಗಿತ್ತು. ಒಸ್ಮಾನಾಬಾದ್​ಅನ್ನು ಧಾರಾಶಿವ್ ಎಂದು ಹೆಸರು ಬದಲಿಸಲಾಗಿತ್ತು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಸುಮಾರು ಒಂದು ವರ್ಷ ಬಾಕಿ ಇರುವಾಗ ಮರು ನಾಮಕರಣದ ಸರಣಿ ನಡೆದಿದೆ.

ಇದನ್ನೂ ಓದಿ:Uniform Civil Code: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಧಾನಿ ಮೋದಿ ಮಾತು; ತಡರಾತ್ರಿ ಸಭೆ ನಡೆಸಿದ ಮುಸ್ಲಿಂ ಕಾನೂನು ಮಂಡಳಿ

ABOUT THE AUTHOR

...view details