ಕರ್ನಾಟಕ

karnataka

ETV Bharat / bharat

ಸತ್ನಾಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್​​: ಬುಡಕಟ್ಟು ಜನಾಂಗದ ವ್ಯಕ್ತಿ ಮನೆಯಲ್ಲಿ ಆಹಾರ ಸೇವನೆ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​​ ಸತ್ನಾ ಜಿಲ್ಲೆಗೆ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಬಳಿಕ ಜಿಲ್ಲೆಯ ಬುಡಕಟ್ಟು ಜನಾಂಗದ ವ್ಯಕ್ತಿ ಮನೆಯಲ್ಲಿ ಆಹಾರ ಸೇವಿಸಿದರು.

By

Published : Jan 27, 2021, 6:33 AM IST

Madhya Pradesh CM dines with tribal man
ಬುಡಕಟ್ಟು ಜನಾಂಗದವರ ಮನೆಯಲ್ಲಿ ಆಹಾರ ಸೇವನೆ

ಸತ್ನಾ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​​ ಅವರು ಮಂಗಳವಾರ ಸತ್ನಾ ಜಿಲ್ಲೆಗೆ ಭೇಟಿ ನೀಡಿ, ಅಲ್ಲಿಯ ಬುಡಕಟ್ಟು ಜನಾಂಗದ ವ್ಯಕ್ತಿ ಮನೆಯಲ್ಲಿ ಆಹಾರ ಸೇವಿಸಿದರು.

"ನಮ್ಮ ಬುಡಕಟ್ಟು ಸಹೋದರ ಚೆಡಿಲಾಲ್ ಕೋಲ್ ಅವರ ಮನೆಯಲ್ಲಿ ನಾನು ಆಹಾರವನ್ನು ಸೇವಿಸಿದ್ದು, ಅನ್ನ ಮತ್ತು ರೊಟ್ಟಿ ತುಂಬಾ ರುಚಿಕರವಾಗಿತ್ತು. ಇದರಲ್ಲಿ ನನ್ನ ಸಹೋದರನ ಪ್ರೀತಿ ಮತ್ತು ವಾತ್ಸಲ್ಯ ತುಂಬಿತ್ತು. ಚೆಡಿಲಾಲ್ ಜಿ ಅವರು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿ ಮತ್ತು ಅವರು ನಮ್ಮ ಸರ್ಕಾರದ ಇತರ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ "ಎಂದು ಚೌಹಾಣ್​​ ಟ್ವೀಟ್ ಮಾಡಿದ್ದಾರೆ.

ಸ್ಥಳೀಯರೊಂದಿಗೆ ಬೆರೆಯುವ ಸಲುವಾಗಿ ಮುಖ್ಯಮಂತ್ರಿ ಸತ್ನಾ ಜಿಲ್ಲೆಗೆ ಭೇಟಿ ನೀಡಿದರು.

ಓದಿ:ಹಿಂಸಾತ್ಮಕ ಪ್ರತಿಭಟನೆ ನಡುವೆಯೂ 300 ಮಂದಿ ಗಣರಾಜ್ಯೋತ್ಸವ ಕಲಾವಿದರ ರಕ್ಷಿಸಿದ ಪೊಲೀಸರು

"ಸತ್ನಾದ ಆತ್ಮೀಯ ಸಹೋದರರೇ, ನೀವು ನನಗೆ ಅನಂತ ಪ್ರೀತಿ ಮತ್ತು ಆಶೀರ್ವಾದಗಳನ್ನು ನೀಡಿದ್ದೀರಿ. ನಿಮ್ಮೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಸತ್ನಾ ಅಭಿವೃದ್ಧಿಗೆ ನಾನು ಯಾವುದೇ ರೀತಿ ತೊಡಕು ಮಾಡುವುದಿಲ್ಲ" ಎಂದು ಸಿಎಂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಚೌಹಾನ್ ಮಂಗಳವಾರ ಸತ್ನಾದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಅಡಿಪಾಯ ಹಾಕಿದರು.

ABOUT THE AUTHOR

...view details