ಕರ್ನಾಟಕ

karnataka

'ಮನೆಯಲ್ಲೇ ಹಬ್ಬ ಮಾಡಿ': ಅಕ್ಬೋಬರ್ 31ರವರೆಗೆ ತಮಿಳುನಾಡಿನಲ್ಲಿ ಕೋವಿಡ್ ನಿರ್ಬಂಧ

By

Published : Sep 9, 2021, 10:43 PM IST

ಕೋವಿಡ್​ನ ಮೂರನೇ ಅಲೆ ಭೀತಿಯ ಕಾರಣ ತಮಿಳುನಾಡಿನಲ್ಲಿ ಅಕ್ಟೋಬರ್​ 31ರವರೆಗೆ ಲಾಕ್​ಡೌನ್​ ವಿಸ್ತರಣೆ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ.

LOCKDOWN IN TAMIL NADU
LOCKDOWN IN TAMIL NADU

ಚೆನ್ನೈ(ತಮಿಳುನಾಡು):ಕೊರೊನಾ ವೈರಸ್​ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಅಕ್ಟೋಬರ್​ 31ರವರೆಗೆ ರಾಜ್ಯದಲ್ಲಿ ಆಚರಣೆ ಮಾಡಲಾಗುವ ಹಬ್ಬಗಳ ಮೇಲೆ ನಿರ್ಬಂಧ ಹೇರಿದ್ದು, ಆದೇಶ ಹೊರಡಿಸಲಾಗಿದೆ. ಹೀಗಾಗಿ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡುವುದರ ಮೇಲೂ ನಿರ್ಬಂಧ ವಿಧಿಸಿದಂತಾಗಿದೆ.

ವಿಧಾನಸಭೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​, ಕೋವಿಡ್ ಮೂರನೇ ಅಲೆ ಭಯದ ಕಾರಣ ಅಕ್ಟೋಬರ್​ 31ರವರೆಗೆ ಸಾರ್ವಜನಿಕ ಹಬ್ಬಗಳ ಮೇಲೆ ನಿಷೇಧ ಹೇರಲಾಗಿದೆ. ಸೆಪ್ಟೆಂಬರ್​​-ಅಕ್ಟೋಬರ್​ ತಿಂಗಳಲ್ಲಿ ದೇಶದಲ್ಲಿ ಮೂರನೇ ಹಂತದ ಕೊರೊನಾ ಅಲೆ ಅಪ್ಪಳಿಸುವ ಎಚ್ಚರಿಕೆ ನೀಡಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿರುವ ಸ್ಟಾಲಿನ್​, ಮನೆಯಲ್ಲಿ ಹಬ್ಬ ಆಚರಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಫೈನಲ್​​​ ಟೆಸ್ಟ್​ ಮುಂದೂಡಿಕೆ/ಅಮಾನತಿಗೆ ಬಿಸಿಸಿಐ ನಕಾರ: ಅಗತ್ಯಬಿದ್ದರೆ ರದ್ದು ನಿರ್ಧಾರ

ತಮಿಳುನಾಡಿನಲ್ಲಿ ಇಂದು ಹೊಸದಾಗಿ 1,596 ಕೋವಿಡ್ ಸೋಂಕಿತ ಪ್ರಕರಣ ದಾಖಲಾಗಿದ್ದು, 21 ಜನರು ಸಾವನ್ನಪ್ಪಿದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ ಹೊಸದಾಗಿ ಸೋಂಕಿತ ಪ್ರಕರಣ ಕಾಣಿಸಿಕೊಂಡಿವೆ. ದೈನಂದಿನ ಪ್ರಮಾಣ ಕಡಿಮೆಯಾಗಿದ್ದರೂ, ಕೆಲವೊಂದು ಜಿಲ್ಲೆಗಳಲ್ಲಿ ಹೆಚ್ಚಿನ ಸೋಂಕಿತ ಪ್ರಕರಣ ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.

ABOUT THE AUTHOR

...view details