ಕರ್ನಾಟಕ

karnataka

ETV Bharat / bharat

ಕೋವಿಡ್‌ನಿಂದಾಗಿ ಅನಾಥರಾದ ಮಕ್ಕಳನ್ನು, ವಿವಿಧ ಯೋಜನೆಗಳಿಗೆ ಸೇರ್ಪಡಿಸಿ: ಸುಪ್ರೀಂ ನಿರ್ದೇಶನ - ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ನಿರ್ದೇಶನ

ಕೋವಿಡ್​​ನಿಂದ ಮರಣ ಹೊಂದಿದ ಪೋಷಕರಿಗೆ ಸೇರಿದ ಆಸ್ತಿಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಅದನ್ನು 'ಬಾಲ ಸ್ವರಾಜ್' ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಪೀಠ ಅಧಿಕಾರಿಗಳಿಗೆ ಸೂಚಿಸಿದೆ.

Supreme Court
ಸುಪ್ರೀಂ ಕೋರ್ಟ್

By

Published : Apr 5, 2022, 9:00 AM IST

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಅನಾಥರಾಗಿರುವ ಮಕ್ಕಳು ಮತ್ತು ಅವರ ಕುಟುಂಬ ಸದಸ್ಯರನ್ನು ವಿವಿಧ ಕಲ್ಯಾಣ ಯೋಜನೆಗಳಿಗೆ ಸೇರ್ಪಡೆ ಮಾಡುವಂತೆ ಸುಪ್ರೀಂಕೋರ್ಟ್ ಸೋಮವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರ ಪೀಠವು, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ವಿವಿಧ ಯೋಜನೆಗಳಿಗೆ ಮಗು ಮತ್ತು ಅವನ ಅಥವಾ ಅವಳ ಕುಟುಂಬ ಸದಸ್ಯರನ್ನು ಸೇರ್ಪಡೆ ಮಾಡಲು ವಿವಿಧ ಶಿಫಾರಸುಗಳನ್ನು ಮಾಡಿ 19,825 ಪತ್ರಗಳನ್ನು ವಿವಿಧ ಜಿಲ್ಲಾ ಅಧಿಕಾರಿಗಳಿಗೆ ಬರೆದಿದೆ.

ಈ ವಿಷಯದ ಕುರಿತು ಎನ್‌ಸಿಪಿಸಿಆರ್ ಸಲ್ಲಿಸಿದ ವರದಿಯನ್ನು ಪೀಠವು ಪರಿಶೀಲಿಸಿದ್ದು, ಎರಡು ವಾರಗಳಲ್ಲಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಕೋವಿಡ್​​ನಿಂದ ಮರಣ ಹೊಂದಿದ ಪೋಷಕರಿಗೆ ಸೇರಿದ ಆಸ್ತಿಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಅದನ್ನು 'ಬಾಲ ಸ್ವರಾಜ್' ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಪೀಠ ಅಧಿಕಾರಿಗಳಿಗೆ ಸೂಚಿಸಿದೆ. ಅಂತಹ ಆಸ್ತಿಗಳನ್ನು ರಕ್ಷಿಸಲು ಜಿಲ್ಲಾಧಿಕಾರಿಗಳಿಗೆ (ಡಿಎಂ) ತಿಳಿಸಿದೆ.

"ಮಕ್ಕಳು ತಮ್ಮ ಆಸ್ತಿಯಿಂದ ವಂಚಿತರಾಗದಂತೆ ಈ ನಿಟ್ಟಿನಲ್ಲಿ ಕಾನೂನು ಸೇವಾ ಅಧಿಕಾರಿಗಳ ನೆರವು ಪಡೆಯಲು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಮತ್ತು ಡಿಎಂಗಳಿಗೆ ನಿರ್ದೇಶಿಸಲಾಗಿದೆ" ಎಂದು ಪೀಠ ಹೇಳಿದೆ. ಶಿಕ್ಷಣದ ವಿಷಯಕ್ಕೆ ಸಂಬಂಧಿಸಿದಂತೆ, ಅನಾಥ ಮಕ್ಕಳಿಗೆ ನೀಡಲಾದ ಪರಿಹಾರವನ್ನು ಮುಂದುವರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಮತ್ತು ಅವರ ಅಧ್ಯಯನದಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳಲು ಡಿಎಂಗಳಿಗೆ ನಿರ್ದೇಶನ ನೀಡಿದೆ.

ವರದಿಯ ಪ್ರಕಾರ, 10,793 ಮಕ್ಕಳು ಪೋಷಕರಿಬ್ಬರನ್ನೂ ಕಳೆದುಕೊಂಡಿದ್ದಾರೆ ಮತ್ತು 1,51,322 ಮಕ್ಕಳು ಒಬ್ಬರು ಪೋಷಕರನ್ನು(ತಂದೆ/ತಾಯಿ) ಕಳೆದುಕೊಂಡಿದ್ದಾರೆ. ಅಂತಹ ಮಕ್ಕಳಿಗೆ ಸಂಬಂಧಿಸಿದಂತೆ ಸಾಮಾಜಿಕ ತನಿಖಾ ವರದಿಗಳನ್ನು ಅಂತಿಮಗೊಳಿಸಲಾಗಿಲ್ಲ. ಆ ಮಕ್ಕಳಿಗೆ ಸಂಬಂಧಿಸಿದಂತೆ ಸಾಮಾಜಿಕ ತನಿಖಾ ವರದಿಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯಾಲಯ ಸೂಚಿಸಿದೆ.

ಇದನ್ನೂ ಓದಿ:ಕೋವಿಡ್​​ನಿಂದ ತಬ್ಬಲಿಗಳಾದ ಮಕ್ಕಳಿಗೆ ಬಾಲ ಸೇವಾ ಯೋಜನೆ: ರಾಜ್ಯದಲ್ಲಿ ತಬ್ಬಲಿಗಳಾದವರೆಷ್ಟು?

ABOUT THE AUTHOR

...view details