ಕರ್ನಾಟಕ

karnataka

ETV Bharat / bharat

ಕಾರ್ಮಿಕ, ಕೃಷಿ ಮಸೂದೆಗೆ ವಿರೋಧ: ಎಡ ಸಂಘಟನೆಗಳಿಂದ ರೈಲು ತಡೆದು ಪ್ರತಿಭಟನೆ

ಕೃಷಿ ಮಸೂದೆ ವಿರೋಧಿಸಿ ದೆಹಲಿ ಚಲೋ ಜೊತೆಗೆ ಕಾರ್ಮಿಕರ ಮಸೂದೆಗಳ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಬಲ್ಗೇರಿಯಾ ರೈಲು ನಿಲ್ದಾಣದಲ್ಲಿ ಲೆಫ್ಟ್​ ಟ್ರೇಡ್ ಯೂನಿಯನ್ ಸಂಘಟನೆ ಕಾರ್ಯಕರ್ತರು ರೈಲು ತಡೆದು ಪ್ರತಿಭಟನೆ ನಡೆಸಿದ್ದಾರೆ.

By

Published : Nov 26, 2020, 11:56 AM IST

Left trade union block railway track at Belgharia station,
ಎಡ ಸಂಘಟನೆಗಳಿಂದ ರೈಲು ತಡೆದು ಪ್ರತಿಭಟನೆ

ಕೋಲ್ಕತ್ತಾ: ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ದೇಶಾದ್ಯಂತ ರೈತರು ಸಿಡಿದೆದ್ದಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಪ್ರತಿಭಟನೆ ಜೋರಾಗಿದ್ದು, ಎಡ ಸಂಘಟನೆಗಳು ಧರಣಿ ನಡೆಸಿವೆ.

ಕಾರ್ಮಿಕ, ಕೃಷಿ ಮಸೂದೆಗೆ ವಿರೋಧ

ಇಲ್ಲಿನ ಬಲ್ಗೇರಿಯಾ ರೈಲು ನಿಲ್ದಾಣದಲ್ಲಿ ಲೆಫ್ಟ್​ ಟ್ರೇಡ್ ಯೂನಿಯನ್ (ಎಡ ಕಾರ್ಮಿಕರ ಸಂಘ) ರೈಲು ತಡೆದು ಪ್ರತಿಭಟನೆ ನಡೆಸಿದ್ದಾರೆ. ನೂತನ ಕಾರ್ಮಿಕ ಮಸೂದೆ ಹಾಗೂ ಕೃಷಿ ಮಸೂದೆಗಳ ವಾಪಸ್​ ಪಡೆಯುವಂತೆ ಆಗ್ರಹಿಸಿ ಪ್ರತಿಭಟಿಸಿದ್ದಾರೆ.

ಇದಲ್ಲದೆ ಸಮುದ್ರಗಢದಲ್ಲಿ ರೈಲು ಹಳಿ ಮೇಲೆ ಕುಳಿತು ಪ್ರತಿಭಟಿಸಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ನ್ಯೂಟೌನ್​ ಏರಿಯಾದಲ್ಲಿ ರಸ್ತೆ ತಡೆದು ಧರಣಿ ನಡೆಸಿದ್ದಾರೆ.

ಇದನ್ನೂ ಓದಿ: ಕೇಂದ್ರದ ವಿರುದ್ಧ ಸಿಡಿದೆದ್ದ ಅನ್ನದಾತ: ಲಕ್ಷಾಂತರ ರೈತರಿಂದ ‘ದೆಹಲಿ ಚಲೋ’

ABOUT THE AUTHOR

...view details