ಕರ್ನಾಟಕ

karnataka

ETV Bharat / bharat

ನಡು ರಸ್ತೆಯಲ್ಲೇ ಹೈಕೋರ್ಟ್ ವಕೀಲ ದಂಪತಿ ಭೀಕರ ಹತ್ಯೆ... ಬೆಚ್ಚಿಬಿದ್ದ ತೆಲಂಗಾಣ! - ವಕೀಲ ದಂಪತಿ ಕೊಲೆ

ತೆಲಂಗಾಣದಲ್ಲಿ ಹಾಡಹಗಲೇ ಪ್ರಸಿದ್ಧ ಲಾಯರ್ ದಂಪತಿಯ ಭೀಕರ ಹತ್ಯೆ ನಡೆದಿದ್ದು, ಇದರಿಂದ ಮುತ್ತಿನ ನಗರಿ ಬೆಚ್ಚಿಬಿದ್ದಿದೆ.

Lawyer Couple Hacked To Death
Lawyer Couple Hacked To Death

By

Published : Feb 17, 2021, 10:14 PM IST

Updated : Feb 18, 2021, 10:55 AM IST

ಹೈದರಾಬಾದ್​:ಹೈಕೋರ್ಟ್​​ನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದ ದಂಪತಿಯನ್ನು ಬುಧವಾರ ಮಧ್ಯಾಹ್ನ ನಡು ರಸ್ತೆಯಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ತೆಲಂಗಾಣ ಬೆಚ್ಚಿಬಿದ್ದಿದೆ.

ದಂಪತಿ ಗಟ್ಟು ವಾಮನ್​ ರಾವ್​ ಹಾಗೂ ಅವರ ಪತ್ನಿ ಪಿ.ವಿ.ನಾಗಮಣಿ ನ್ಯಾಯಾಲಯಕ್ಕೆ ಹಾಜರಾಗಿ ಹಿಂದಿರುಗುತ್ತಿದ್ದ ವೇಳೆ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದ್ದು, ಸ್ಥಳೀಯರ ಮೊಬೈಲ್​​ನಲ್ಲಿ ದೃಶ್ಯಾವಳಿ ಸೆರೆಯಾಗಿದೆ. ದಾಳಿಕೋರನೋರ್ವ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ನಡು ರಸ್ತೆಯಲ್ಲೇ ಹೈಕೋರ್ಟ್ ವಕೀಲ ದಂಪತಿ ಭೀಕರ ಹತ್ಯೆ

ಓದಿ: ಅಪ್ರಾಪ್ತೆ ಮೇಲೆ ರೇಪ್​ ಪ್ರಕರಣ​: ಶಿಕ್ಷಕನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​

ಹಲ್ಲೆಕೋರ ನಡು ರಸ್ತೆಯಲ್ಲಿ ವಕೀಲ ದಂಪತಿ ಮೆಲೆ ಚಾಕುವಿನಿಂದ ಇರಿದಿದ್ದು, ಈತ ವೃತ್ತಿಪರ ಕೊಲೆಗಾರನೆಂಬ ಮಾಹಿತಿ ಕೂಡ ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಈಗಾಗಲೇ ಆರೋಪಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಆತನ 10 ಮಂದಿ ಸಹಚರರನ್ನ ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದು, ಆರು ತಂಡ ರಚನೆ ಮಾಡಿದ್ದಾಗಿ ಹೇಳಿದ್ದಾರೆ.

ಇದಕ್ಕೂ ಮೊದಲು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಈ ದಂಪತಿ ತೆಲಂಗಾಣ ಹೈಕೋರ್ಟ್​ನ ಮುಖ್ಯ ನ್ಯಾಯಾಧೀಶರಿಗೆ ಔಪಚಾರಿಕ ದೂರು ನೀಡಿದ್ದರು. ತೆಲಂಗಾಣ ಬಾರ್ ಅಸೋಸಿಯೇಷನ್ ಹಾಗೂ ಇತರ ಸಂಸ್ಥೆಗಳು ಈ ದಾಳಿಯನ್ನು ಖಂಡಿಸಿವೆ.

Last Updated : Feb 18, 2021, 10:55 AM IST

ABOUT THE AUTHOR

...view details