ಕರ್ನಾಟಕ

karnataka

ETV Bharat / bharat

Lakhimpur Kheri violence: ಕೇಂದ್ರ ಸಚಿವರ ಪುತ್ರ ಆಶಿಷ್‌ ಮಿಶ್ರಾ ಮತ್ತೆರಡು ದಿನ ಪೊಲೀಸ್ ಕಸ್ಟಡಿಗೆ - ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ

ಆಶಿಷ್‌ ಮಿಶ್ರಾನನ್ನು ಅಕ್ಟೋಬರ್‌ 9ರಂದು ಬಂಧಿಸಲಾಗಿದೆ. ಅಕ್ಟೋಬರ್‌ 11ರಂದು ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ ಎಂಟು ಜನರು ಮೃತಪಟ್ಟಿದ್ದರು. ಗಲಭೆಯಲ್ಲಿ ಆಶಿಷ್‌​ ಮಿಶ್ರಾ ಭಾಗಿಯಾಗಿದ್ದಾನೆ ಎಂಬ ಆರೋಪವೂ ಕೇಳಿ ಬಂದಿತ್ತು.

Lakhimpur Kheri violence
Lakhimpur Kheri violence

By

Published : Oct 22, 2021, 9:03 PM IST

ಲಖಿಂಪುರ್‌ ಖೇರಿ (ಉತ್ತರಪ್ರದೇಶ):ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಬಂಧಿಯಾಗಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಅವರನ್ನು ಮತ್ತೆರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಲಖಿಂಪುರ್ ಖೇರಿಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಚಿಂತಾ ರಾಮ್ ಅವರು ಎರಡನೇ ಬಾರಿಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ಆಶಿಷ್​ ಮಿಶ್ರಾ ಮಾತ್ರವಲ್ಲದೇ, ಈ ಪ್ರಕರಣದ ಇತರ ಮೂವರು ಆರೋಪಿಗಳಾದ ಅಂಕಿತ್ ದಾಸ್, ಶೇಖರ್ ಭಾರತಿ ಮತ್ತು ಲತೀಫ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಆಶಿಷ್‌ ಮಿಶ್ರಾನನ್ನು ಅಕ್ಟೋಬರ್‌ 9ರಂದು ಬಂಧಿಸಲಾಗಿದೆ. ಅಕ್ಟೋಬರ್‌ 11ರಂದು ಪೊಲೀಸರ ವಶಕ್ಕೆ ನೀಡಲಾಗಿತ್ತು. ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ ಎಂಟು ಜನರು ಮೃತಪಟ್ಟಿದ್ದರು. ಗಲಭೆಯಲ್ಲಿ ಆಶಿಷ್‌​ ಮಿಶ್ರಾ ಭಾಗಿಯಾಗಿದ್ದಾನೆ ಎಂಬ ಆರೋಪವೂ ಕೇಳಿ ಬಂದಿತ್ತು.

ಇದನ್ನೂ ಓದಿ: ಲಖಿಂಪುರ್ ಖೇರಿ​ ಹಿಂಸಾಚಾರ: ಘಟನೆಗಳ ಮರುಸೃಷ್ಟಿಗಾಗಿ ಕೇಂದ್ರ ಸಚಿವರ ಮಗನ ಜೊತೆಗೆ ಮೂವರನ್ನು ಕರೆದೊಯ್ದ SIT

ABOUT THE AUTHOR

...view details