ಕರ್ನಾಟಕ

karnataka

ETV Bharat / bharat

ಉಪ್ಪು ಕಮ್ಮಿ ಹಾಕಿದ್ದಕ್ಕೆ ಅಡುಗೆಯವನ ಕೊಲೆ: ಡಾಬಾ ಮಾಲೀಕರಿಗೆ ಜೈಲೂಟ - ETV Bharath Karnataka

ಉಪ್ಪು ಕಮ್ಮಿ ಹಾಕಿದ್ದಾನೆ ಎಂದು ಡಾಬಾ ಮಾಲೀಕ ಅಡಗೆಯವನನ್ನೇ ಕೊಂದ ಪ್ರಕರಣ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

Dhaba owner killed cook
ಉಪ್ಪು ಕಮ್ಮಿ ಹಾಕಿದ್ದಕ್ಕೆ ಅಡುಗೆಯವನ ಕೊಲೆ

By

Published : Dec 10, 2022, 7:24 AM IST

ಪುಣೆ( ಮಹಾರಾಷ್ಟ್ರ):ಅಡುಗೆಯ್ಲಲಿ ಉಪ್ಪು ಕಮ್ಮಿಯಾದರೆ ಸೇರಿಸಿ ತಿನ್ನುವುದು ಗೊತ್ತಿದೆ. ಆದರೆ ಉಪ್ಪು ಕಮ್ಮಿ ಹಾಕಿದ್ದ ಎಂಬ ಕಾರಣಕ್ಕೆ ಕೊಲೆಯೇ ನಡೆದಿದೆ. ಡಾಬಾದ ಮಾಲೀಕ ಅಡುಗೆಗೆ ಉ್ಪಪುಕಮ್ಮಿ ಹಾಕಿದ್ದಕ್ಕೆ ಬಾಣಸಿಗನನ್ನು ಮನಸೋ ಇಚ್ಚೆ ಥಳಿಸಿ ಕೊಂದಿರುವ ಪ್ರಕರಣ ಒಂದು ತಿಂಗಳು ತಡವಾಗಿ ಬೆಳಕಿಗೆ ಬಂದಿದೆ. ಕೊಲೆಯಾದವನನ್ನು ಪ್ರಸೇನಜಿತ್ ಗೊರೈ ಎಂದು ಗುರುತಿಸಲಾಗಿದೆ. ಡಾಬಾ ಮಾಲೀಕರಾದ ಕೈಲಾಸ್ ಮತ್ತು ಓಂಕಾರ್ ಬಂಧಿಸಲಾಗಿದೆ.

ಅಡುಗೆಯಲ್ಲಿ ಉಪ್ಪು ಕಮ್ಮಿ ಹಾಕಿದ್ದ ಎಂಬ ಕಾರಣಕ್ಕೆ ಹಲ್ಲೆ ಮಾಡಿ ಕೊಂದಿರುವುದಾಗಿ ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಿ ಶವವನ್ನು ನದಿ ಎಸೆದಿದ್ದಾಗಿ ಹೇಳಿದ್ದಾರೆ.

ಕಾರ್ಯಾಚರಣೆ: ಪೊಲೀಸರು ಮಾರು ವೇಷದಲ್ಲಿ ಡಾಬಾಕ್ಕೆ ಹೋಗಿ ಊಟ ಮಾಡಿದ್ದಾರೆ. ನಂತರ ಮಾಲೀಕರ ಜೊತೆ ಸ್ನೇಹ ಬೆಳೆಸಿಕೊಂಡು ಅವರೊಂದಿಗೆ ಹರಟೆ ಹೊಡೆಯುವಂತೆ ಕಾಲ ಕಳೆದಿದ್ದಾರೆ. ನಂತರ ಇಬ್ಬರು ಅಪರಾಧಿಗಳಿಗೆ ಕೋಳ ಹಾಕಿದ್ದಾರೆ.

ಇದನ್ನೂ ಓದಿ:ಸೀಜ್​ ಆದ ಚಿನ್ನ ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿ ವಂಚನೆ; ನಕಲಿ ಅಧಿಕಾರಿ ಸೆರೆ

ABOUT THE AUTHOR

...view details