ನವದೆಹಲಿ: ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರ ಪಿಂಚಣಿ ನಿಧಿಗೆ ಕೊಡುಗೆ ನೀಡಲು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (ಪಿಎಂ-ಎಸ್ವೈಎಂ) ಯೋಜನೆಯಡಿಯಲ್ಲಿ 'ಡೊನೇಟ್-ಎ-ಪೆನ್ಷನ್' ಕಾರ್ಯಕ್ರಮ ಆರಂಭಿಸಿದ್ದು, ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಇಂದು ಚಾಲನೆ ನೀಡಿದ್ದಾರೆ.
ಇದು (PM-SYM) ಪಿಂಚಣಿ ಯೋಜನೆಯಡಿಯಲ್ಲಿನ ಉಪಕ್ರಮವಾಗಿದ್ದು, ನಾಗರಿಕರು ತಮ್ಮ ತಕ್ಷಣದ ಸಹಾಯಕ ಸಿಬ್ಬಂದಿಗಳಾದ ಗೃಹ ಕಾರ್ಮಿಕರು, ಚಾಲಕರು, ಸಹಾಯಕರು ಮುಂತಾದವರ ಪ್ರೀಮಿಯಂ ಕೊಡುಗೆಯನ್ನು ದಾನ ಮಾಡಬಹುದು ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಪಿಎಂ-ಎಸ್ವೈಎಂ ಯೋಜನೆ ಅಡಿಯಲ್ಲಿ 18-40 ವರ್ಷ ವಯಸ್ಸಿನ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಅವರ ವಯಸ್ಸಿನ ಆಧಾರದ ಮೇಲೆ ಪ್ರತಿ ವರ್ಷ ಕನಿಷ್ಠ 660 ರಿಂದ 2400 ರೂ.ಇವರ ಹೆರಿನಲ್ಲಿ ಠೇವಣಿ ಮಾಡಲಾಗುತ್ತದೆ. 60 ವರ್ಷ ವಯಸ್ಸ ತಲುಪಿದ ನಂತರ ಇವರ ತಿಂಗಳಿಗೆ 3,000 ರೂಪಾಯಿಗಳ ಕನಿಷ್ಠ ಖಚಿತವಾದ ಪಿಂಚಣಿ ಪಡೆಯುತ್ತಾರೆ ಎಂದು ಅವರು ವಿವರಿಸಿದ್ದಾರೆ.