ಕರ್ನಾಟಕ

karnataka

ETV Bharat / bharat

ಕುರುಕ್ಷೇತ್ರ: ಶಾಹಬಾದ್ ಶಾಸಕ ರಾಮ್‌ಕರಣ್​ಗೆ ರೈತರಿಂದ ಮುತ್ತಿಗೆ ​ - ಶಾಹಬಾದ್ ಶಾಸಕ ರಾಮ್‌ಕರಣ್

ಶಾಹಬಾದ್ ಶಾಸಕ ರಾಮ್‌ಕರಣ್​ ಯಾರಿಯ ಕಲಾ ಗ್ರಾಮದಲ್ಲಿರುವ ಪಂಚಾಯಿತಿಗೆ ತೆರಳಿದಾಗ ರೈತರು ತೀವ್ರವಾಗಿ ವಿರೋಧಿಸಿ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಸದ್ಯ ಸ್ಥಳದಲ್ಲಿದ್ದ ಪೊಲೀಸರು ಶಾಸಕನನ್ನು ರಕ್ಷಿಸಿದ್ದಾರೆ.

farmers-protest-against-mla-ramkaran
ಶಾಹಬಾದ್ ಶಾಸಕ ರಾಮ್‌ಕರಣ್​ಗೆ ರೈತರಿಂದ ಮುತ್ತಿಗೆ ​

By

Published : May 15, 2021, 7:28 PM IST

ಕುರುಕ್ಷೇತ್ರ: ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ನಡೆಯನ್ನು ಖಂಡಿಸಿದ್ದ ಜನನಾಯಕ್ ಜನತಾ ಪಕ್ಷದ ಶಾಹಬಾದ್ ಶಾಸಕ ರಾಮ್‌ಕರಣ್​ಗೆ ಯಾರಿಯ ಕಲಾ ಗ್ರಾಮದ ರೈತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಹಬಾದ್ ಶಾಸಕ ರಾಮ್‌ಕರಣ್​ಗೆ ರೈತರಿಂದ ಮುತ್ತಿಗೆ ​

ಶಾಸಕ ಯಾರಿ ಗ್ರಾಮದ ಪಂಚಾಯಿತಿಗೆ ತೆರಳಿದ್ದಾಗ ಈ ಘಟನೆ ನಡೆದಿದ್ದು, ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ರೈತರು ರಾಮ್‌ಕರಣ್​ ಕಾರಿನ ಮುಂದೆ ಕುಳಿತು ಪ್ರತಿಭಟಿಸಿದ್ದಾರೆ.

ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ರಾಮ್‌ಕರಣ್​ರನ್ನು ರಕ್ಷಿಸಿ ಕಾರಿನಲ್ಲಿ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.

ABOUT THE AUTHOR

...view details