ಕರ್ನಾಟಕ

karnataka

By

Published : Apr 27, 2021, 5:27 PM IST

ETV Bharat / bharat

ಕುಂಭಮೇಳ: ಕೈ ಮೀರಿ ಹೋಗುತ್ತಿರುವ ಕೋವಿಡ್​ ನಡುವೆ ಸಾಂಕೇತಿಕ 'ಶಾಹಿ ಸ್ನಾನ'!

ಈ ಹಿಂದೆ ಕುಂಭಮೇಳದಲ್ಲಿ ಭಾಗವಹಿಸಿದ್ದ ಹಲವು ಸಂತರಿಗೆ ಕೊರೊನಾ ದೃಢಪಟ್ಟಿದ್ದರಿಂದ ಅವರು ಹಿಂದಿರುಗಿದ್ದರು. ಅದರಲ್ಲಿ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Kumbh Mela: Seers keep last Shahi Snan symbolic affair
ಸಾಂಕೇತಿಕ 'ಶಾಹಿ ಸ್ನಾನ

ಡೆಹ್ರಾಡೂನ್ / ರಿಷಿಕೇಶ:ದೇಶಾದ್ಯಂತ ಕೊರೊನಾ 2ನೇ ಅಲೆ ಕೈ ಮೀರಿ ಹೋಗುತ್ತಿರುವುದರ ನಡುವೆ ಕುಂಭಮೇಳದಲ್ಲಿ ಇಂದು ಭಕ್ತರು ಸಾಂಕೇತಿಕವಾಗಿ ಕೊನೆಯ 'ಶಾಹಿ ಸ್ನಾನ'ವನ್ನು ನೆರವೇರಿಸಿದ್ದಾರೆ. ಬೆಳಗ್ಗೆ ಬ್ರಾಹ್ಮಿ ಮೂಹರ್ತದಿಂದ 10: 45 ರವರೆಗೆ ಸುಮಾರು 670 ಮಂದಿ ಭಕ್ತರು ಸ್ನಾನದಲ್ಲಿ ಪಾಲ್ಗೊಂಡಿದ್ದರು ಎಂಬುದಾಗಿ ತಿಳಿದು ಬಂದಿದೆ.

ವಿವಿಧ ಕಣಿವೆ ಪ್ರದೇಶಗಳಿಂದ ಬಂದಿದ್ದ ಸಾಧು - ಸಂತರು ಪವಿತ್ರ ಸ್ನಾನ ನೆರವೇರಿಸಿದ್ದಾರೆ. ಈ ಹಿಂದೆ ಕುಂಭಮೇಳದಲ್ಲಿ ಭಾಗವಹಿಸಿದ್ದ ಹಲವು ಸಂತರಿಗೆ ಕೊರೊನಾ ದೃಢಪಟ್ಟಿದ್ದರಿಂದ ಅವರು ಹಿಂದಿರುಗಿದ್ದರು. ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಕೋವಿಡ್​ ತನ್ನ ಪ್ರಭಾವವನ್ನು ವ್ಯಾಪಕವಾಗಿ ಹರಡಿರುವುದರಿಂದ ಏಪ್ರಿಲ್​ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕುಂಭಮೇಳವನ್ನು ಕೇವಲ ಸಾಂಕೇತಿಕವಾಗಿ ಆಚರಿಸುವಂತೆ ಸಾಧು ಸಂತರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಹಲವಾರು ಸಾಧು ಸಂತರು ಇದಕ್ಕೆ ಒಪ್ಪಿಗೆಯನ್ನೂ ಸೂಚಿಸಿದ್ದರು.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ದಿನವೊಂದಕ್ಕೆ 3,23,144 ಜನರಿಗೆ ಕೊರೊನಾ ಪಾಸಿಟಿವ್​ ಕಂಡುಬರುತ್ತಿದೆ. ಈವರೆಗೆ ಸುಮಾರು 1,76,36,307ಜನರಿಗೆ ಪಾಸಿಟಿವ್​ ದೃಢಪಟ್ಟಿದೆ. ಈ ನಡುವೆ ಸೋಂಕಿನಿಂದ ಗುಣಮುಖರಾದವರ ಪ್ರಮಾಣ 82.54ಕ್ಕೆ ತಲುಪಿದೆ ಎಂದು ವರದಿ ಬಿಡುಗಡೆ ಮಾಡಿದೆ.

ಉತ್ತರಾಖಂಡದಲ್ಲಿ ಸೋಮವಾರ 5,058 ಕೋವಿಡ್​ -19 ಪ್ರಕರಣಗಳು ದಾಖಲಾಗಿದ್ದು, ಡೆಹ್ರಾಡೂನ್‌ನಲ್ಲಿ 2,034 ಪ್ರಕರಣಗಳು ಮತ್ತು ಹರಿದ್ವಾರ 1,002 ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ ಕೋವಿಡ್​ ಪರಿಸ್ಥಿತಿ ಹದಗೆಟ್ಟು ಹಲವಾರು ರಾಜ್ಯಗಳು ಲಾಕ್​ಡೌನ್​ ಮೊರೆ ಹೋಗಿರುವ ನಡುವೆ ಕುಂಭಮೇಳದಲ್ಲಿ ಸಾಕಷ್ಟು ಜನ ಒಂದೆಡೆ ಸೇರಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಓದಿ:ಕಾಶಿ ವಿಶ್ವನಾಥನ ಸನ್ನಿಧಿಯಿಂದ ಕೊರೊನಾ ರೋಗಿಗಳಿಗೆ ಕಿಟ್​

ABOUT THE AUTHOR

...view details