ಕರ್ನಾಟಕ

karnataka

By

Published : Feb 4, 2021, 8:50 PM IST

ETV Bharat / bharat

ತೆಂಡೂಲ್ಕರ್ ಅಭಿಪ್ರಾಯಕ್ಕೆ ಕೈಜೋಡಿಸಿದ ವಿರಾಟ್ ಕೊಹ್ಲಿ

ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ರಿಹಾನ್ನಾ ಟ್ವೀಟ್ ಮಾಡಿದ್ದ ಬೆನ್ನಲ್ಲೇ ಭಾರತದ ಅನೇಕ ತಾರೆಯರು ಪ್ರತಿಕ್ರಿಯೆ ನೀಡಿ, ಎಲ್ಲರೂ ಒಟ್ಟಾಗಿರೋಣ ಎಂದು ಕರೆ ನೀಡಿದ್ದರು.

virat kohli
ವಿರಾಟ್ ಕೊಹ್ಲಿ

ನವದೆಹಲಿ:ಭಿನ್ನಾಭಿಪ್ರಾಯಗಳ ಈ ವೇಳೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರೋಣ. ರೈತರು ನಮ್ಮ ದೇಶದ ಅವಿಭಾಜ್ಯ ಅಂಗವಾಗಿದ್ದು, ಎಲ್ಲಾ ಪಕ್ಷಗಳು ಸೌಹಾರ್ದವಾಗಿ ಚರ್ಚೆ ನಡೆಸಿ, ಪರಿಹಾರ ದೊರಕಿಸಿಕೊಡುವ ಬಗ್ಗೆ ನನಗೆ ಖಾತ್ರಿಯಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಟ್ವೀಟ್ ಮಾಡಿದ್ದ ಬೆನ್ನಲ್ಲೇ ಭಾರತದ ಅನೇಕ ತಾರೆಯರು ಪ್ರತಿಕ್ರಿಯೆ ನೀಡಿ, ಎಲ್ಲರೂ ಒಟ್ಟಾಗಿರೋಣ ಎಂದು ಕರೆ ನೀಡಿದ್ದರು.

ಇದನ್ನೂ ಓದಿ:ಕಾರ್ಮಿಕರಿಗೆ ಟಿಕೆಟ್ ದುಡ್ಡು ಕೊಡದವರು ಕಳ್ಳರನ್ನು ವಿಮಾನದಲ್ಲಿ ಕರೆಸಿಕೊಂಡರು : ಬಿಜೆಪಿಗೆ ದೀದಿ ಟಾಂಗ್

ಅತ್ಯಂತ ಪ್ರಮುಖವಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟ್ವೀಟ್​ ಮಾಡಿದ್ದು, ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು, ಆದರೆ ಆಂತರಿಕ ವಿಚಾರದಲ್ಲಿ ಪಾಲ್ಗೊಳ್ಳುವಂತಿಲ್ಲ. ಭಾರತೀಯರು ಭಾರತವನ್ನು ನಿರ್ಧರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದಾದ ನಂತರ ಟ್ವೀಟ್ ಮಾಡಿರುವ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ ಹೇಳಿಕೆಗೆ ಬೆಂಬಲ ನೀಡಿದ್ದಾರೆ. ರಿಹಾನ್ನಾ ಮಾತ್ರವಲ್ಲದೇ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಕೂಡಾ ಭಾರತದಲ್ಲಿನ ಪ್ರತಿಭಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details