ಕರ್ನಾಟಕ

karnataka

ETV Bharat / bharat

ಆನ್​ಲೈನ್​ ಶಿಕ್ಷಣಕ್ಕೆ ಮೊಬೈಲ್‌ ಖರೀದಿಸಲು ಮಾವಿನ ಹಣ್ಣು ಮಾರಾಟಕ್ಕಿಳಿದ ಮಕ್ಕಳು - ಆನ್​ಲೈನ್​ ಸ್ಕೂಲ್​

ಕೋವಿಡ್​ ಸಮಯದಲ್ಲಿ ಎಲ್ಲ ಶಾಲೆಗಳು ಬಂದ್​ ಆಗಿವೆ. ವಿದ್ಯಾರ್ಥಿಗಳು ಆನ್​ಲೈನ್​ ಶಿಕ್ಷಣ ಮುಂದುವರಿಸುತ್ತಿದ್ದಾರೆ. ಸ್ಮಾರ್ಟ್ ಫೋನ್​ ಹೊಂದಿಲ್ಲದ ಕಾರಣ ನಮಗೆ ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲ. ಹೀಗಾಗಿ ಮೊಬೈಲ್‌ಗಳನ್ನು ಖರೀದಿಸಲು ಮಾವಿನಹಣ್ಣಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಬಾಲಕನೊಬ್ಬ ಹೇಳುತ್ತಾನೆ.

Kids forced to sell mangoes, Kids forced to sell mangoes to buy smart phones, Kids forced to sell mangoes to buy smart phones for online schooling, online school, online school news, ಮಾವಿನ ಹಣ್ಣು ಮಾರುತ್ತಿರುವ ಮಕ್ಕಳು, ಸ್ಮಾರ್ಟ್​ ಫೋನ್ ಖರೀದಿ​ಗಾಗಿ ಮಾವಿನಹಣ್ಣು ಮಾರುತ್ತಿರುವ ಮಕ್ಕಳು, ಆನ್​ಲೈನ್​ ಶಿಕ್ಷಣಕ್ಕೆ ಸ್ಮಾರ್ಟ್​ ಫೋನ್ ಖರೀದಿ​ಗಾಗಿ ಮಾವಿನಹಣ್ಣು ಮಾರುತ್ತಿರುವ ಮಕ್ಕಳು, ಆನ್​ಲೈನ್​ ಸ್ಕೂಲ್​, ಆನ್​ಲೈನ್​ ಶಾಲೆ ಸುದ್ದಿ,
ಕಿತ್ತು ತಿನ್ನುವ ಬಡತನದಲ್ಲಿ ಆನ್​ಲೈನ್​ ಶಿಕ್ಷಣಕ್ಕಾಗಿ ಮಾವಿನ ಹಣ್ಣು ಮಾರಟಕ್ಕಿಳಿದ ಮಕ್ಕಳು

By

Published : May 31, 2021, 7:48 AM IST

ಘಾಟ್ಶಿಲಾ(ಜಾರ್ಖಂಡ್‌):ಬಡತದಲ್ಲಿ ಹುಟ್ಟಿದ ಮಕ್ಕಳಿಗೆ ಓದುವ ಆಸೆ. ಹೇಗಾದ್ರೂ ಮಾಡಿ ಆನ್​ಲೈನ್​ ಶಿಕ್ಷಣ ಕಲಿಯಬೇಕೆಂದು ಪಣತೊಟ್ಟ ಮಕ್ಕಳು ಕಾಡಿನಿಂದ ಮಾವಿನ ಹಣ್ಣು ಕಿತ್ತು ಮಾರಾಟ ಮಾಡುತ್ತಿರುವ ಘಟನೆ ಜಾದುಗೋಡ ಗ್ರಾಮದಲ್ಲಿ ಕಂಡು ಬಂದಿದೆ.

ಕೋವಿಡ್​ ಸಮಯದಲ್ಲಿ ಜಾದುಗೋಡ ಗ್ರಾಮದ ಮಕ್ಕಳ ಗುಂಪೊಂದು ಸಮೀಪದ ಕಾಡಿನಲ್ಲಿ ಮಾವಿನ ಹಣ್ಣುಗಳನ್ನು ಕಿತ್ತು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಮಕ್ಕಳ ತಂದೆ-ತಾಯಿ ಒಪ್ಪೊತ್ತಿನ ಊಟಕ್ಕಾಗಿ ಕಷ್ಟಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ಆನ್​ಲೈನ್​ ಶಿಕ್ಷಣಕ್ಕಾಗಿ ಮಕ್ಕಳಿಗೆ ಸ್ಮಾರ್ಟ್​ ಫೋನ್​ ಕೊಡಿಸುವ ಶಕ್ತಿ ಅವರ ಬಳಿ ಇಲ್ಲ. ಇದನ್ನರಿತ ಮಕ್ಕಳು ತಾವೇ ಕಾಡಿಗೆ ಹೋಗಿ ಮಾವಿನ ಹಣ್ಣುಗಳನ್ನು ತಂದು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಆನ್‌ಲೈನ್ ಶಿಕ್ಷಣಕ್ಕಾಗಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ಮಕ್ಕಳು

'ಕಾಡಿನಿಂದ ಮಾವಿನ ಹಣ್ಣುಗಳನ್ನು ತಂದು ಪ್ರತಿ ಕೆ.ಜಿ.ಗೆ 30 ರೂ.ಗೆ ಮಾರಾಟ ಮಾಡುತ್ತಿದ್ದೇನೆ. ದಿನಕ್ಕೆ ಸುಮಾರು 150 ರಿಂದ 200 ರೂಪಾಯಿ ಸಿಗುತ್ತಿದೆ' ಎಂದು ಬಾಲಕ ರಾಮು ಹೆಂಬ್ರಾಮ್ ಹೇಳುತ್ತಾನೆ.

'ಕೋವಿಡ್​ ಸಮಯದಲ್ಲಿ ಎಲ್ಲ ಶಾಲೆಗಳು ಬಂದ್​ ಆಗಿವೆ. ವಿದ್ಯಾರ್ಥಿಗಳು ಆನ್​ಲೈನ್​ ಶಿಕ್ಷಣ ಮುಂದುವರಿಸುತ್ತಿದ್ದಾರೆ. ಸ್ಮಾರ್ಟ್ ಫೋನ್​ ಹೊಂದಿಲ್ಲದ ಕಾರಣ ನಮಗೆ ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲ. ಹೀಗಾಗಿ ಮೊಬೈಲ್‌ಗಳನ್ನು ಖರೀದಿಸಲು ಮಾವಿನಹಣ್ಣಗಳನ್ನು ಮಾರಾಟ ಮಾಡುತ್ತಿದ್ದೇವೆ. ಬಂದ ಹಣದ ಮೂಲಕ ನಾವು ಮೊಬೈಲ್​ ಖರೀದಿಸುತ್ತೇವೆ' ಎಂದು ರಾಮು ವಿವರಿಸುತ್ತಾನೆ.

'ನಾವು ಬಡವರು, ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಮಕ್ಕಳಿಗೆ ಆನ್​ಲೈನ್​ ಶಿಕ್ಷಣಕ್ಕಾಗಿ ಮೊಬೈಲ್​ ಖರೀದಿಸುವ ಶಕ್ತಿ ನಮ್ಮಲ್ಲಿಲ್ಲ. ಮಕ್ಕಳೇ ಇದನ್ನರಿತು ಕಾಡಿಗೆ ಹೋಗಿ ಮಾವಿನಹಣ್ಣುಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಮಾರಾಟ ಮಾಡಿದ ಹಣವನ್ನು ಸಂಗ್ರಹಿಸಿ ಮೊಬೈಲ್​ ಖರೀದಿಸುತ್ತಾರೆ' ಎಂದು ರಾಮುವಿನ ತಂದೆ ಯಶ್ವಂತ್ ಹೆಂಬ್ರಾಮ್ ಹೇಳಿದರು.

ABOUT THE AUTHOR

...view details