ಕರ್ನಾಟಕ

karnataka

ETV Bharat / bharat

ಕಿಡ್ನಿ ಮಾರಾಟ ದಂಧೆ: 10 ಜನರನ್ನು ಬಂಧಿಸಿ ಪ್ರಕರಣ ಭೇದಿಸಿದ ಪೊಲೀಸರು

10 ಜನರನ್ನು ಬಂಧಿಸುವುದರೊಂದಿಗೆ ದೆಹಲಿ ಪೊಲೀಸರು ದಕ್ಷಿಣ ದೆಹಲಿಯ ಹುವಾಜ್ ಖಾಸ್‌ನಲ್ಲಿ ಅಕ್ರಮ ಮೂತ್ರಪಿಂಡ ಕಸಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾದ ದಂಧೆಯನ್ನು ಭೇದಿಸಿದ್ದಾರೆ.

By

Published : Jun 2, 2022, 3:12 PM IST

ದೆಹಲಿಯಲ್ಲಿ  ಕಿಡ್ನಿ ಮಾರಾಟ ದಂಧೆ
ದೆಹಲಿಯಲ್ಲಿ ಕಿಡ್ನಿ ಮಾರಾಟ ದಂಧೆ

ನವದೆಹಲಿ: ಹುವಾಜ್ ಖಾಸ್‌ನಲ್ಲಿ ಅಕ್ರಮ ಮೂತ್ರಪಿಂಡ ಕಸಿಯಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಮೇಲೆ 10 ಜನರನ್ನು ಬಂಧಿಸಲಾಗಿದೆ. ಈ ಮೂಲಕ ದೊಡ್ಡ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಈ ಗ್ಯಾಂಗ್​ನ ಸದಸ್ಯರು ಹಣದ ಅವಶ್ಯಕತೆ ಇರುವ 20 ರಿಂದ 30 ವರ್ಷ ವಯಸ್ಸಿನ ಯುವಕರನ್ನು ಗುರಿಯಾಗಿಸಿಕೊಂಡು ಅವರ ಕಿಡ್ನಿ ಮಾರಾಟಕ್ಕೆ ಮನವರಿಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇಲ್ಲಿಯವರೆಗೆ 20 ಕ್ಕೂ ಹೆಚ್ಚು ಮೂತ್ರಪಿಂಡಗಳನ್ನು ಕಸಿ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೇ 26 ರಂದು ಹೌಜ್ ಖಾಸ್ ಪೊಲೀಸ್ ಠಾಣೆಗೆ ಅಕ್ರಮ ಕಿಡ್ನಿ ಕಸಿ ದಂಧೆ ನಡೆಯುತ್ತಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಆಪರೇಟಿಂಗ್ ಥಿಯೇಟರ್ ತಂತ್ರಜ್ಞ ಕುಲದೀಪ್ ರೇ ವಿಶ್ವಕರ್ಮ (46) ಗ್ಯಾಂಗ್‌ನ ಕಿಂಗ್‌ಪಿನ್ ಆಗಿದ್ದು, ಸೋನಿಪತ್‌ನ ಗುಹಾನಾದಲ್ಲಿರುವ ಡಾ ಸೋನು ರೋಹಿಲ್ಲಾ ಅವರ ಕ್ಲಿನಿಕ್‌ನಲ್ಲಿ ಈ ಕೆಲಸ ಮಾಡುತ್ತಿದ್ದರು.

ವಿಶ್ವಕರ್ಮ ಪ್ರತಿಯೊಬ್ಬ ಗ್ಯಾಂಗ್​ನ ಸದಸ್ಯರಿಗೂ ಅವರವರ ಪಾತ್ರಗಳಿಗೆ ಅನುಗುಣವಾಗಿ ವೇತನ ನೀಡುತ್ತಿದ್ದ. ಇನ್ನು ಗುಹಾನಾ ಚಿಕಿತ್ಸಾಲಯದಲ್ಲಿ ಕಳೆದ ಆರು - ಏಳು ತಿಂಗಳ ಅವಧಿಯಲ್ಲಿ 12-14 ಅಕ್ರಮ ಕಸಿಗಳನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬಂದಿತರಾದ ಶೈಲೇಶ್ ಪಟೇಲ್ (23) ಮತ್ತು ಸರ್ವಜೀತ್ ಜೈಲ್ವಾಲ್ (37) ಸಂತ್ರಸ್ತರಿಗೆ ಆಮಿಷ ಒಡ್ಡಿದರೆ, ಹೌಜ್ ಖಾಸ್‌ನ ಇಮೇಜಿಂಗ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಎಂಡಿ ಲತೀಫ್ (24) ಅವರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ಸಹಾಯ ಮಾಡಿದ್ದನಂತೆ.

ಇನ್ನು ವಿಕಾಸ್ (24) ವಸತಿ ಮತ್ತು ಸಾರಿಗೆಯ ಜವಾಬ್ದಾರಿ ಹೊಂದಿದ್ದು, ರಂಜಿತ್ ಗುಪ್ತಾ (43) ಸಂತ್ರಸ್ತರನ್ನು ಹರಿಯಾಣದ ಕ್ಲಿನಿಕ್‌ಗೆ ಕರೆದೊಯ್ಯುವ ಮೊದಲು ಅವರನ್ನು ನೋಡಿಕೊಳ್ಳುವ ಜವಬ್ದಾರಿ ವಹಿಸಿಕೊಳ್ಳುತ್ತಿದ್ದ. ರೋಹಿಲ್ಲಾ (37) ಹಾಗೂ ಡಾ. ಸೌರಭ್ ಮಿತ್ತಲ್ (37) ಅಕ್ರಮ ಕಸಿ ಕೆಲಸದಲ್ಲಿ ನಿರತರಾಗುತ್ತದ್ದರು, ಎಂದು ಪೊಲೀಸರು ತಿಳಿಸಿದ್ದಾರೆ.

ಹಾಗೆ ವಿಶ್ವಕರ್ಮ ಅವರ ಇಬ್ಬರು ಸಹಚರರಾದ ಓಂ ಪ್ರಕಾಶ್ ಶರ್ಮಾ (48) ಮತ್ತು ಮನೋಜ್ ತಿವಾರಿ (36) ಅವರನ್ನೂ ಸಹ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಕಮಲದೊಂದಿಗೆ ಹೊಸ ಅಧ್ಯಾಯ ಆರಂಭಿಸಿದ ಹಾರ್ದಿಕ್​.. ಕೈ ಶಾಸಕರನ್ನು ಬಿಜೆಪಿಗೆ ಕರೆತರುತ್ತೇನೆಂದ ಯುವ ನಾಯಕ

ABOUT THE AUTHOR

...view details