ಕರ್ನಾಟಕ

karnataka

ಐವಿಎಫ್​ ಚಿಕಿತ್ಸೆ: ಜೀವಾವಧಿ ಅಪರಾಧಿಗೆ 15 ದಿನಗಳ ಪೆರೋಲ್​ ನೀಡಿದ ಕೇರಳ ಹೈಕೋರ್ಟ್​

By ETV Bharat Karnataka Team

Published : Oct 5, 2023, 9:12 AM IST

Updated : Oct 5, 2023, 11:11 AM IST

ತನ್ನ ಪತಿಯಿಂದ ಮಗು ಬೇಕು ಎಂದು ಪತಿಗೆ ಪೆರೋಲ್​ ನೀಡುವಂತೆ ಕೋರಿ ಆತನ ಪತ್ನಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿ ಪುರಸ್ಕರಿಸಿರುವ ನ್ಯಾಯಾಲಯ ಅಪರಾಧಿಗೆ 15 ದಿನಗಳ ಪೆರೋಲ್​​ ನೀಡಿದೆ.

Kerala High Court
ಕೇರಳ ಹೈಕೋರ್ಟ್​

ಎರ್ನಾಕುಲಂ (ಕೇರಳ): ಐವಿಎಫ್​ (ಇನ್​ ವಿಟ್ರೋ ಫರ್ಟಿಲೈಸೇಶನ್​) ಚಿಕಿತ್ಸೆಗಾಗಿ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಯೊಬ್ಬನಿಗೆ ಕೇರಳ ಹೈಕೋರ್ಟ್​ ಪೆರೋಲ್​ ಮಂಜೂರು ಮಾಡಿದೆ. ಕಳೆದ ಏಳು ವರ್ಷಗಳಿಂದ ವಿಯ್ಯೂತರು ಸೆಂಟ್ರಲ್​ ಜೈನಿನಲ್ಲಿದ್ದ ವ್ಯಕ್ತಿಗೆ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಅವರಿದ್ದ ಏಕಸದಸ್ಯ ಪೀಠ 15 ದಿನಗಳ ಪೆರೋಲ್​ಗೆ ಅನುಮತಿ ನೀಡಿದೆ.

ಅಪರಾಧಿಯ ಪತ್ನಿ ತನಗೆ ಪತಿಯಿಂದ ಮಗು ಬೇಕು ಎಂದು ಆತನಿಗೆ ಪೆರೋಲ್​ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಮಹಿಳೆಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಹೈಕೋರ್ಟ್​ ಪೆರೋಲ್​ ಮಂಜೂರು ಮಾಡಿದೆ. ಮಹಿಳೆಯೊಬ್ಬರ ನೈಜ ವಿನಂತಿಯನ್ನು ಕೇವಲ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ತಿರಸ್ಕರಿಸಲು ಸಾಧ್ಯವಿಲ್ಲ. ಜೈಲಿನಲ್ಲಿರುವ ತನ್ನ ಪತಿಯಿಂದ ಮಗು ಬೇಕು ಎಂದು ಮಹಿಳೆಯೊಬ್ಬರು ನ್ಯಾಯಾಲಯದ ಮುಂದೆ ಬಂದಾಗ ತಾಂತ್ರಿಕ ಕಾರಣಗಳನ್ನು ನೀಡಿ, ಮನವಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಯಾವುದೇ ಕ್ರಮಿನಲ್​ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ವ್ಯಕ್ತಿ ಜೈಲಿನಿಂದ ಹೊರಬಂದ ನಂತರ ಆತನನ್ನು ವಿಭಿನ್ನವಾಗಿ ನೋಡುವ ಅಗತ್ಯವಿಲ್ಲ. ಆ ವ್ಯಕ್ತಿಗೆ ಇತರ ನಾಗರಿಕರಂತೆ ಸಭ್ಯ ಜೀವನ ನಡೆಸಲು ಹಕ್ಕಿದೆ ಎಂದು ಕೇರಳ ಹೈಕೋರ್ಟ್​ ಹೇಳಿದೆ. ಪಬ್ಲಿಕ್​ ಪ್ರಾಸಿಕ್ಯೂಟರ್​ ಮನವಿಯನ್ನು ವಿರೋಧಿಸಿದ್ದು, ಅಪರಾಧಿ ಪೆರೋಲ್​ಗೆ ಅರ್ಹನಲ್ಲ ಎಂದು ವಾದಿಸಿದರು.

ಜೊತೆಗೆ ಮಹಿಳೆ ಸಲ್ಲಿಸಿರುವ ವೈದ್ಯಕೀಯ ಪ್ರಮಾಣಪತ್ರಗಳಿಂದ ಅರ್ಜಿದಾರರ ಮನವಿಯ ನೈಜತೆಯನ್ನು ಅರಿತು ನ್ಯಾಯಾಲಯ ಪೆರೋಲ್​ ನೀಡಿದೆ. ಈ ಹಿಂದೆ ಅಪರಾಧಿಯ ಪತ್ನಿ 3 ತಿಂಗಳ ಕಾಲ ಪೆರೋಲ್​ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ ನಂತರ ಆಕೆ ನ್ಯಾಯಾಲಯದ ಮೆಟ್ಟಿಕೇರಿದ್ದಳು. ಇದೀಗ ಮಹಿಳೆಯ ಮನವಿಯನ್ನು ಆಲಿಸಿರುವ ನ್ಯಾಯಾಲಯ, ಅಪರಾಧಿಗೆ ಪೆರೋಲ್​ ನೀಡುವಂತೆ, ಹಾಗೂ ಎರಡು ವಾರಗಳಲ್ಲಿ ಕ್ರಮ ಕೈಗೊಳ್ಳುವಂತೆ ಜೈಲು ಡಿಜಿಪಿಗೆ ಸೂಚಿಸಿದೆ.

ಮೇಜರ್​ ಎ ಕೆ ಗುಪ್ತಾಗೆ ವಿಧಿಸಿದ್ದ ಶಿಕ್ಷೆ ರದ್ದುಗೊಳಿಸಿದ ಮದ್ರಾಸ್​ ಹೈಕೋರ್ಟ್​:ಶ್ರೀಲಂಕಾದಲ್ಲಿ ಅಂತರ್ಯುದ್ಧ ಅಂತ್ಯಗೊಳಿಸಲು 1987 ರಲ್ಲಿ ಅಲ್ಲಿಗೆ ಕಳುಹಿಸಿದ್ದ ಭಾರತೀಯ ಶಾಂತಿ ಪಾಲನಾ ಪಡೆಗೆ ಪೂರೈಸಿದ್ದ ಟಿನ್ಡ್​​ ಮಾಂಸದ ಖೀಮಾ ಖರೀದಿಯಲ್ಲಿ ಮೇಜರ್​ ಎ ಕೆ ಗುಪ್ತಾ ಅವರು ಭ್ರಷ್ಟಾಚಾರ ಎಸಗಿದ್ದಾರೆ ಎನ್ನುವ ಆರೋಪವನ್ನು ತಳ್ಳಿ ಹಾಕಿ, ಅವರಿಗೆ ವಿಧಿಸಿದ್ದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಮದ್ರಾಸ್​ ಹೈಕೋರ್ಟ್​ ಬುಧವಾರ ರದ್ದುಗೊಳಿಸಿದೆ.

1987ರಲ್ಲಿ ರಾಜೀವ್​ ಗಾಂಧಿ ಭಾರತದ ಪ್ರಧಾನಿಯಾಗಿದ್ದಾಗ, ಎಲ್​ಟಿಟಿಇ ಹಾಗೂ ಶ್ರೀಲಂಕಾ ಸೇನೆಯ ನಡುವಿನ ಅಂತರ್​ ಯುದ್ಧವನ್ನು ನಿಲ್ಲಿಸಲು ಭಾರತೀಯ ಶಾಂತಿಪಾಲನಾ ಪಡೆಯನ್ನು ಶ್ರೀಲಂಕಾಕ್ಕೆ ಕಳುಹಿಸಲಾಗಿತ್ತು. ಮೇಜರ್​ ಎ ಕೆ ಗುಪ್ತಾ ಅವರು ಶಾಂತಿಪಾಲಕರಿಗೆ ಆಹಾರ ಪದಾರ್ಥಗಳನ್ನು ಪೂರೈಸುವ ಸಮಿತಿಯ ಭಾಗವಾಗಿದ್ದರು. ಈ ವೇಳೆ, ಅವರಿಗೆ ಪೂರೈಸುವ ಟಿನ್ಡ್​ ಮಾಂಸದ ಖರೀದಿಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸೇನಾ ಜನರಲ್​ ಮೇಲೆ ಸಿಬಿಐ ದೂರು ದಾಖಲಿಸಿತ್ತು.

2013ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಮೇಜರ್​ ಗುಪ್ತಾ ಅವರನ್ನು ದೋಷಿ ಎಂದು ಘೋಷಿಸಿ, 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಆಲಿಸಿದ ಮದ್ರಾಸ್​ ಹೈಕೋರ್ಟ್​ ನ್ಯಾಯಮೂರ್ತಿ ಜಯಚಂದ್ರ ಅವರು, ಸಿಬಿಐ ನ್ಯಾಯಾಲಯ ಯಾವುದೇ ಕಾರಣಗಳನ್ನು ನೀಡದೆ ಊಹೆಯ ಆಧಾರದ ಮೇಲೆ ತೀರ್ಪು ನೀಡಿದೆ. ಮಿಲಿಟರಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಪರಾರಿಯಾಗಿದ್ದಾರೆ ಆಧಾರದಲ್ಲಿ ತೀರ್ಪು ನೀಡಿದೆ. ಹಾಗಾಗಿ ಮೇಜರ್​ ಎ ಕೆ ಗುಪ್ತಾ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ ಎಂದು ಹೇಳಿದ ನ್ಯಾಯಾಲಯ ಅವರಿಗೆ ವಿಧಿಸಲಾಗಿದ್ದ 2 ವರ್ಷಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸಿದೆ.

ಇದನ್ನೂ ಓದಿ:ಲೋಕ ಅದಾಲತ್​: ವಿಚ್ಛೇದನಕ್ಕೆ ತಯಾರಾಗಿದ್ದ 13 ಜೋಡಿಗಳು ಒಂದಾದ ಕ್ಷಣಕ್ಕೆ ಸಾಕ್ಷಿಯಾದ ಕೌಟುಂಬಿಕ ನ್ಯಾಯಾಲಯ

Last Updated : Oct 5, 2023, 11:11 AM IST

ABOUT THE AUTHOR

...view details