ರುದ್ರಪ್ರಯಾಗ್ (ಉತ್ತರಾಖಂಡ): ಐತಿಹಾಸಿಕ ಪುಣ್ಯಕ್ಷೇತ್ರ ಎಂದು ಪ್ರಸಿದ್ಧಿ ಪಡೆದುಕೊಂಡಿರುವ ಕೇದಾರನಾಥ ದೇವಸ್ಥಾನ ನಾಳೆ ಬೆಳಗ್ಗೆ ಓಪನ್ ಆಗಲಿದ್ದು, ದಾಖಲೆಯ 11 ಕ್ವಿಂಟಲ್ ಹೂವಿನಿಂದ ಅಲಂಕಾರ ಮಾಡಲಾಗಿದೆ.
ನಾಳೆ ಓಪನ್ ಆಗಲಿದೆ ಕೇದಾರನಾಥ್ ದೇಗುಲ ಈಗಾಗಲೇ ಮಂದಿರದ ಜಗದ್ಗುರುಗಳಾದ ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಮನುಜ್ ಗೋಯಲ್ ಕೇದಾರನಾಥ್ ಧಾಮ್ ತಲುಪಿದ್ದಾರೆ. ಈಗಾಗಲೇ ಎಲ್ಲ ಸಿದ್ಧತೆ ಪೂರ್ಣಗೊಂಡಿರುವ ಕಾರಣ ನಾಳೆ ಬೆಳಗ್ಗೆ 5 ಗಂಟೆಗೆ ದೇವಸ್ಥಾನದ ಬಾಗಿಲು ಓಪನ್ ಆಗಲಿದೆ.
ಕೊರೊನಾ ಮಹಾಮಾರಿ ಕಾರಣ ಕೆಲವೇ ಪುರೋಹಿತರಿಗೆ ಕೇದಾರನಾಥ ಧಾಮಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ದೇವಸ್ಥಾನ ಮಂಡಳಿಯ ಅಧಿಕಾರಿ ಯದುವೀರ್ ಪುಷ್ವಾನ್, ಕೇದಾರನಾಥ್ ಸೇರಿದಂತೆ ಎಲ್ಲ ದೇವಾಲಯಗಳನ್ನು ಬಣ್ಣಗಳಿಂದ ಅಲಂಕಾರ ಮಾಡಲಾಗಿದ್ದು, ವಿದ್ಯುತ್ ಹಾಗೂ ನೀರಿನ ಸರಬರಾಜು ಈಗಾಗಲೇ ವ್ಯವಸ್ಥೆಯಾಗಿದೆ ಎಂದರು.
ಇದನ್ನೂ ಓದಿ: ಕೋವಿಡ್ ಸೋಂಕಿದ್ದರೂ ಮನೆಗೆ ಬಂದ ಅಣ್ಣನ ಕೊಂದ ತಮ್ಮ!
ಪ್ರತಿ ವರ್ಷ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಕೇದಾರನಾಥ್ ಸೇರಿದಂತೆ ಚಾರ್ಧಾಮ್ನ ಎಲ್ಲ ಬಾಗಿಲು ಮುಚ್ಚಲಾಗುತ್ತದೆ. ಇದಾದ ಬಳಿಕ ಏಪ್ರಿಲ್-ಮೇ ತಿಂಗಳಲ್ಲಿ ಭಕ್ತರ ದರ್ಶನಕ್ಕಾಗಿ ತೆರೆಯಲಾಗುತ್ತದೆ. ಇನ್ನು ಬದ್ರಿನಾಥ್ ಮೇ 18ರಂದು ಓಪನ್ ಆಗಲಿದೆ. ಕೊರೊನಾ ಮಹಾಮಾರಿ ಹಾವಳಿ ಹೆಚ್ಚಾಗಿರುವ ಕಾರಣ ಭಕ್ತಾಧಿಗಳಿಗೆ ಇಲ್ಲಿನ ಪ್ರವೇಶ ನಿರಾಕರಣೆ ಮಾಡಲಾಗಿದೆ.