ಕರ್ನಾಟಕ

karnataka

By

Published : Apr 29, 2023, 2:50 PM IST

ETV Bharat / bharat

ವಿಧಾನಸಭಾ ಚುನಾವಣೆ: ಕಾಶಿಯ ಜಂಗಮವಾಡಿ ಮಠಕ್ಕೆ ಹೆಚ್ಚಿನ ಬೇಡಿಕೆ

ಭಾರತವು ನಂಬಿಕೆಯ ದಾರದಿಂದ ಬಂಧಿತವಾಗಿದೆ. ಈ ದಾರದ ಒಂದು ತುದಿ ಉತ್ತರ ಭಾರತದಲ್ಲಿದ್ದರೆ ಇನ್ನೊಂದು ತುದಿ ದಕ್ಷಿಣ ಭಾರತದಲ್ಲಿದೆ. ವಾರಣಾಸಿಯ ಜಂಗಮವಾಡಿ ಮಠ ಇದಕ್ಕೆ ಉದಾಹರಣೆಯಾಗಿದ್ದು, ಇದು ವೀರಶೈವ ಲಿಂಗಾಯತರೊಂದಿಗೆ ಸಂಬಂಧ ಹೊಂದಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವಾಗ ಕಾಶಿಯ ಜಂಗಮವಾಡಿ ಮಠಕ್ಕೆ ಹೆಚ್ಚಿನ ಮಹತ್ವ ಬಂದಿದೆ.

kashi jangamwadi math  jangamwadi math in Varanasi  jangamwadi math Lingayat voters  Lingayat voters in Karnataka  Karnataka assembly election 2023  ಕಾಶಿಯ ಜಂಗಮವಾಡಿ ಮಠಕ್ಕೆ ಹೆಚ್ಚಿನ ಬೇಡಿಕೆ  ವಿಧಾನಸಭಾ ಚುನಾವಣೆ  ವಾರಣಾಸಿಯ ಜಂಗಮವಾಡಿ ಮಠ  ವೀರಶೈವ ಲಿಂಗಾಯತರೊಂದಿಗೆ ಸಂಬಂಧ  ಎಂಟನೇ ಶತಮಾನದಲ್ಲಿ ಸ್ಥಾಪಿತವಾದ ಜಂಗಮವಾಡಿ ಮಠ  ಕಾಶಿಯ ಜಂಗಮವಾಡಿ ಮಠದಲ್ಲಿ 86 ಜಗದ್ಗುರುಗಳ ವಂಶಾವಳಿ  ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
ಕಾಶಿಯ ಜಂಗಮವಾಡಿ ಮಠಕ್ಕೆ ಹೆಚ್ಚಿನ ಬೇಡಿಕೆ

ವಾರಣಾಸಿ (ಉತ್ತರಪ್ರದೇಶ):ಧಾರ್ಮಿಕ ಕ್ಷೇತ್ರವಾದ ಕಾಶಿ ಅತ್ಯಂತ ಪುರಾತನ ನಗರ. ಈ ಪ್ರಾಚೀನ ನಗರವಾದ ಬನಾರಸ್‌ನಲ್ಲಿ ಇಂತಹ ಅನೇಕ ಮಠಗಳು ಮತ್ತು ದೇವಾಲಯಗಳಿವೆ. ಇದು ಉತ್ತರ ಮತ್ತು ದಕ್ಷಿಣ ಭಾರತವನ್ನು ನಂಬಿಕೆಯ ಪ್ರತೀತಿಯೊಂದಿಗೆ ಸಂಪರ್ಕಿಸುತ್ತದೆ. ಇದರ ಅಸ್ತಿತ್ವವು ಇಂದಿನದಲ್ಲ. ಹಲವಾರು ಶತಮಾನಗಳ ಹಿಂದಿನದು. ಈ ಮಠಗಳು ಧರ್ಮ ಮತ್ತು ನಂಬಿಕೆಯ ಕೇಂದ್ರವಾಗಿದೆ. ಇದರೊಂದಿಗೆ ರಾಜಕೀಯ ದೃಷ್ಟಿಯಿಂದಲೂ ಈ ಮಠಗಳು ಬಹುಮುಖ್ಯವಾಗಿವೆ.

ಜಂಗಮವಾಡಿ ಮಠದಲ್ಲಿ ಪ್ರಧಾನಿ ಮೋದಿ ಚಿತ್ರ

ಎಂಟನೇ ಶತಮಾನದಲ್ಲಿ ಸ್ಥಾಪಿತವಾದ ಜಂಗಮವಾಡಿ ಮಠವು ದಕ್ಷಿಣ ಭಾರತದ ಕರ್ನಾಟಕ ರಾಜ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಕರ್ನಾಟಕ ರಾಜ್ಯದಲ್ಲಿ ಕೆಲ ದಿನಗಳ ನಂತರ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ವೀರಶೈವ ಸಂಪ್ರದಾಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಮಠದಲ್ಲಿ ಲಿಂಗಾಯತ ಸಮುದಾಯದ ದೊಡ್ಡ ಸಂಪರ್ಕವಿದೆ. ಕರ್ನಾಟಕ, ಆಂಧ್ರಪ್ರದೇಶ ಅಷ್ಟೇ ಅಲ್ಲದೆ ಮಹಾರಾಷ್ಟ್ರದಲ್ಲಿ ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಶಿಯ ಜಂಗಮವಾಡಿ ಮಠ ನೇರವಾಗಿ ಲಕ್ಷಾಂತರ ಮತದಾರರ ಮೇಲೆ ಪರಿಣಾಮ ಬೀರಬಹುದು.

ಕಾಶಿಯಲ್ಲಿರುವ ಜಂಗಮವಾಡಿ ಮಠ

ಕಾಶಿಯ ಜಂಗಮವಾಡಿ ಮಠದಲ್ಲಿ 86 ಜಗದ್ಗುರುಗಳ ವಂಶಾವಳಿಯಿದೆ. ಪ್ರಸ್ತುತ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಈ ಪೀಠದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಲಿಂಗಾಯತ ಸಮುದಾಯಕ್ಕೆ ಮಠ ಬಹಳ ಮುಖ್ಯ. ಬಹುಶಃ ಇದೇ ಕಾರಣಕ್ಕೆ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅದಕ್ಕೂ ಮುನ್ನ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಕರ್ನಾಟಕಕ್ಕೆ ಸಂಬಂಧಿಸಿದ ಅನೇಕ ದೊಡ್ಡ ನಾಯಕರು ಈ ಮಠಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ. ಈ ಮಠವನ್ನು ಜ್ಞಾನಪೀಠವಾಗಿ ಸ್ಥಾಪಿಸಲಾಗಿದೆ ಎನ್ನುತ್ತಾರೆ ಮಠದ ನಿರ್ವಹಣೆಯನ್ನು ನಿರ್ವಹಿಸುತ್ತಿರುವ ಕರ್ನಾಟಕದ ನಿವಾಸಿ ಪ್ರಭು ಸ್ವಾಮಿ. ಇದು ಐದು ವಿಭಿನ್ನ ಕೇಂದ್ರಗಳನ್ನು ಹೊಂದಿದೆ. ವಾರಣಾಸಿ, ಉಜ್ಜಯಿನಿ, ಕೇದಾರನಾಥ, ಬದರಿನಾಥ, ಶ್ರೀಶೈಲಂ ಮತ್ತು ಕರ್ನಾಟಕವನ್ನು ಹೊರತುಪಡಿಸಿ ಈ ಮಠದ ಮುಖ್ಯ ಕೇಂದ್ರಗಳೆಂದು ಪರಿಗಣಿಸಲಾಗಿದೆ.

ಕಾಶಿಯಲ್ಲಿರುವ ಜಂಗಮವಾಡಿ ಮಠ

ವೀರಶೈವ ಎಂದರೆ ಒಂದೇ ಸ್ಥಳದಲ್ಲಿ ಇರುವ ಲಿಂಗ ಮತ್ತು ಈ ಸಮುದಾಯಕ್ಕೆ ಸೇರಿದವರು ಈ ಲಿಂಗವನ್ನು ಕೊರಳಲ್ಲಿ ಧರಿಸುತ್ತಾರೆ ಎಂದು ಪ್ರಭು ಸ್ವಾಮಿ ಹೇಳುತ್ತಾರೆ. ಈ ಲಿಂಗ ಪೂಜೆಯನ್ನು ಮೂರು ಹಂತಗಳಲ್ಲಿಯೂ ಮಾಡಲಾಗುತ್ತದೆ. ಕಾಶಿಯ ಜಂಗಂಬಾಡಿ ಮಠಕ್ಕೆ ಶಿವನ ಮೇಲೆ ನಂಬಿಕೆಯಿರುವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದೇ ದೊಡ್ಡ ಸಂಗತಿ. ಇಲ್ಲಿಗೆ ಬರುವ ಹೆಚ್ಚಿನ ಸಂಖ್ಯೆಯ ಭಕ್ತರು ಕರ್ನಾಟಕ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದವರು.

ಕಾಶಿಯಲ್ಲಿರುವ ಜಂಗಮವಾಡಿ ಮಠ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಲಿಂಗಾಯತ ಸಮುದಾಯದಿಂದ ಬರುವವರು. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯಕ್ಕೆ ದೊಡ್ಡ ವೋಟ್ ಬ್ಯಾಂಕ್ ಇದೆ. ಈ ಮಠದ ಮೂಲಕ ಲಿಂಗಾಯತ ಮತದಾರರಿಗೆ ಆಧ್ಯಾತ್ಮಿಕ ಅಭ್ಯಾಸ ಮಾಡುವುದು ತುಂಬಾ ಸುಲಭ. ಕಾಂಗ್ರೆಸ್ ಪಕ್ಷವು 1990 ರಿಂದ ಲಿಂಗಾಯತ ಸಮುದಾಯದ ಆಕ್ರೋಶವನ್ನು ಎದುರಿಸುತ್ತಿದೆ. ಇದರಿಂದಾಗಿ ಪ್ರತಿಯೊಂದು ರಾಜಕೀಯ ಪಕ್ಷವೂ ನೇರವಾಗಿ ಲಿಂಗಾಯತ ಸಮುದಾಯದ ಮತಬ್ಯಾಂಕ್ ಬಳಸಿಕೊಳ್ಳಲು ಬಯಸುತ್ತದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಪ್ರಬಲ ಬಿಜೆಪಿ ನಾಯಕರು ಬನಾರಸ್‌ನಲ್ಲಿರುವ ಈ ಮಠಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಜಂಗಮವಾಡಿ ಮಠದ ಮಹಾಸ್ವಾಮಿಗಳನ್ನೂ ಖುದ್ದು ಪ್ರಧಾನಿ ದೆಹಲಿಗೆ ಆಹ್ವಾನಿಸಿದ್ದಾರೆ. ಮಠದ 100ನೇ ಸಂಸ್ಥಾಪನಾ ವರ್ಷದ ಕಾರ್ಯಕ್ರಮದಲ್ಲೂ ಪ್ರಧಾನಿ ಭಾಗವಹಿಸಿದ್ದಾರೆ.

ಕಾಶಿಯಲ್ಲಿರುವ ಜಂಗಮವಾಡಿ ಮಠ

ಈ ದಿನಗಳಲ್ಲಿ ವಾರಣಾಸಿಯಲ್ಲಿ 12 ದಿನಗಳ ಕಾಲ ಪುಷ್ಕರಲು ಕುಂಭ ನಡೆಯುತ್ತಿದೆ. ಈ ಕುಂಭಕ್ಕೆ ಕರ್ನಾಟಕದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಈ ಭಕ್ತರು ಬನಾರಸ್‌ನಲ್ಲಿ ತಮಗೆ ನೀಡುತ್ತಿರುವ ಸ್ವಾಗತದಿಂದ ತುಂಬಾ ಸಂತೋಷದಿಂದ ಕಾಣುತ್ತಿದ್ದಾರೆ. ಬನಾರಸ್‌ನಲ್ಲಿನ ಬದಲಾವಣೆಗಳನ್ನು ಅವರಿಗೆ ಪರಿಚಯಿಸಲಾಗುತ್ತಿದೆ. ಒಟ್ಟಾರೆ, ಬನಾರಸ್ ಮೂಲಕ ಬಿಜೆಪಿ ದಕ್ಷಿಣಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಿದೆ. ಕರ್ನಾಟಕ ಚುನಾವಣೆಯಲ್ಲಿ ಜಂಗಮವಾಡಿ ಮಠ ಮತ್ತು ಇತರ ದೇವಾಲಯಗಳಲ್ಲಿನ ಅಭಿವೃದ್ಧಿಯ ಚಿತ್ರಣವನ್ನು ತೋರಿಸುವುದರ ಮೂಲಕ ಮತದಾರರಿಗೆ ಸಹಾಯ ಮಾಡುವಲ್ಲಿ ಯಶಸ್ವಿಯಾಗಬಹುದು ಎಂದು ನಂಬಲಾಗ್ತಿದೆ.

ಓದಿ:ಕಾಂಗ್ರೆಸ್​ ವಿರುದ್ಧ ಮೋದಿ ದಲಿತ- ಲಿಂಗಾಯತ ಅಸ್ತ್ರ ಪ್ರಯೋಗ.. ಬೀದರ್​ನಲ್ಲಿ ಮೋದಿ ಹೇಳಿದ್ದೇನು ಗೊತ್ತಾ?

ABOUT THE AUTHOR

...view details