ಕರ್ನಾಟಕ

karnataka

By

Published : Oct 28, 2022, 10:53 AM IST

ETV Bharat / bharat

ಮಹಿಳೆ ಮತ್ತು ಮನುಷ್ಯ ನಾಗಿ ಕ್ಷೇಮೆ ಕೇಳುವೆ : ಸಾದಿಕ್ ಹೇಳಿಕೆಗೆ ಕನಿಮೊಳಿ ಪ್ರತಿಕ್ರಿಯೆ

ನಟಿ ಖುಷ್ಬುಗೆ ಅವಮಾನಿಸಿದ್ದ ಡಿಎಂಕೆ ವಕ್ತಾರ ಸೈದಾಯಿ ಸಾದಿಕ್ ಹೇಳಿಕೆಗೆ ಕನಿಮೊಳಿ ಕ್ಷಮೆ ಕೋರಿದ್ದಾರೆ. ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್ ಅವರ ದ್ರಾವಿಡ ಮಾದರಿ ಪ್ರಶ್ನಿಸಿದ ಬಿಜೆಪಿ ನಾಯಕಿ ಖುಷ್ಬು ಸುಂದರ್ ಅವರು, ಪುರುಷರು ಮಹಿಳೆಯ ಗರ್ಭವನ್ನು ಅವಮಾನಿಸುತ್ತಾರೆ ಎಂದರೆ ಅಂಥ ಪುರುಷರು #Kalaignar ಅನುಯಾಯಿಗಳು ಎನ್ನುತ್ತಾರೆ. ಇದು Hable CM @mkstalin ಆಡಳಿತದ ದ್ರಾವಿಡ ಮಾದರಿಯೇ?" ಈ ಟ್ವೀಟ್ ನಲ್ಲಿ ಕನಿಮೊಳಿ ಅವರನ್ನೂ ಟ್ಯಾಗ್ ಮಾಡಲಾಗಿತ್ತು.

ಡಿಎಂಕೆ ಹಿರಿಯ ನಾಯಕಿ ಕನಿಮೊಳಿ
DMk leader Kanimozhi

ಚೆನ್ನೈ(ತಮಿಳುನಾಡು): ಬಿಜೆಪಿಯ ಮಹಿಳಾ ನಾಯಕಿಯರ ಕುರಿತಾಗಿ ಪಕ್ಷದ ಪದಾಧಿಕಾರಿಯೊಬ್ಬರು ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆ ಡಿಎಂಕೆ ಹಿರಿಯ ನಾಯಕಿ ಕನಿಮೊಳಿ ಶುಕ್ರವಾರ ಕ್ಷಮೆಯಾಚಿಸಿದ್ದಾರೆ.

ಸಾದಿಕ್ ಹೇಳಿಕೆಗೆ ಕ್ಷೇಮೆ:ಟ್ವಿಟರ್‌ನಲ್ಲಿ, 'ಮಹಿಳೆ ಮತ್ತು ಮನುಷ್ಯ' ಎಂದು ಬರೆದು ಕ್ಷಮೆಯಾಚಿಸಿರುವ ಅವರು, 'ತಮ್ಮ ನಾಯಕ ಎಂಕೆ ಸ್ಟಾಲಿನ್ ಆಗಲಿ ,ಅವರ ಪಕ್ಷವು ಅಂತಹ ನಡವಳಿಕೆಯನ್ನು ಸಹಿಸುವುದಿಲ್ಲ ಎಂಬ ಕಾರಣಕ್ಕಾಗಿ ಬಹಿರಂಗವಾಗಿ ನಾನು ಕ್ಷೇಮೆಯಾಚಿಸುದ್ದೇನೆ. ಇತ್ತೀಚೆಗೆ ಬಿಜೆಪಿ ನಾಯಕಿ ಮತ್ತು ನಟಿ ಖುಷ್ಬು ಸುಂದರ್ ಅವರನ್ನು ಡಿಎಂಕೆ ವಕ್ತಾರ ಸೈದಾಯಿ ಸಾದಿಕ್ ಅವರು ಅವಮಾನಿಸಿದ್ದಾರೆ ಎಂಬ ಟ್ವೀಟ್‌ಗೆ ಕ್ಷಮೆಯಾಚಿಸಿ ಈ ರೀತಿ ಪ್ರತಿಕ್ರಿಯೆಸಿದ್ದಾರೆ.

ಬಿಜೆಪಿ ನಾಯಕಿ ಖಷ್ಬು ಟ್ವೀಟ್ :ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್ ಅವರ ದ್ರಾವಿಡ ಮಾದರಿ ಪ್ರಶ್ನಿಸಿದ ಖುಷ್ಬು ಸುಂದರ್ ಅವರು, ತಮ್ಮ ಟ್ವೀಟ್‌ನಲ್ಲಿ, “ಪುರುಷರು ಮಹಿಳೆಯರನ್ನು ನಿಂದಿಸಿದಾಗ, ಅವರದ್ದು ಯಾವ ರೀತಿ ಪಾಲನೆ, ಪ್ರತಿಕ್ರಿಯೆ ಇರುತ್ತದೆ. ಅವರು ಬೆಳೆಸುವ ವಿಷಕಾರ ವಾತಾವರಣವನ್ನೂ ಪ್ರತಿನಿಧಿಸುವಂತಿದೆ. ಪುರುಷರು ಮಹಿಳೆಯ ಗರ್ಭವನ್ನು ಅವಮಾನಿಸುತ್ತಾರೆ ಅಂದರೆ ಅಂಥ ಪುರುಷರು ಅವರನ್ನು #Kalaignar ಅನುಯಾಯಿಗಳು ಎನ್ನುತ್ತಾರೆ. ಇದು Hable CM @mkstalin ಆಡಳಿತದ ದ್ರಾವಿಡ ಮಾದರಿಯೇ?" ಈ ಟ್ವೀಟ್ ನಲ್ಲಿ ಕನಿಮೊಳಿ ಅವರನ್ನೂ ಟ್ಯಾಗ್ ಮಾಡಲಾಗಿತ್ತು.

ಸ್ಟಾಲಿನ್ ಪ್ರತಿಕ್ರಿಯೆ:ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಎಂಕೆ ನಾಯಕ, " ಯಾರೇ ಏನೇ ಹೇಳಿದರೂ, ನಾನು ಮಹಿಳೆ ಮತ್ತು ಮನುಷ್ಯನಾಗಿ ಕ್ಷಮೆಯಾಚಿಸುತ್ತೇನೆ. ಇದನ್ನು ಯಾರೇ ಮಾಡಿದರೂ, ಪಕ್ಷವೂ ಮತ್ತು ನಾನಾಗಲಿ ಇಂಥ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.. ಇದಕ್ಕಾಗಿ ಬಹಿರಂಗವಾಗಿ ನಾನು ಕ್ಷೇಮೆಯಾಚಿಸಬೇಕಾಯಿತು. ಏಕೆಂದರೆ ನನ್ನ ನಾಯಕ @mkstalin ಮತ್ತು ನನ್ನ ಪಕ್ಷ @arivalayam ಇದನ್ನು ಕ್ಷಮಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಜಾಗರೂಕತೆ ಹೇಳಿಕೆಗೆ ಸ್ಟಾಲಿನ್ ಅಸಮ್ಮತಿ:ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಇತ್ತೀಚಿನ ತಮ್ಮ ಪಕ್ಷದ ಸದಸ್ಯರ ಹೇಳಿಕೆಗಳು ಹಾಗೂ ಕಾರ್ಯಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿಂದಿನ ತಿಂಗಳ ಆರಂಭದಲ್ಲಿ ಕರೆದ ಡಿಎಂಕೆ ಪಕ್ಷದ ಸಭೆಯಲ್ಲಿ ಸ್ಟಾಲಿನ್ ಅವರು ಅಜಾಗರೂಕತೆಯ ಹಾಗೂ ಅಗೌರವ ತೋರಿಸುವ ಮಾತುಗಳಿಗೆ ಅಸಮ್ಮತಿ ಸೂಚಿಸಿದ್ದರು.

ಆದರೆ, ಕೆಲವು ನಾಯಕರು ಇತ್ತೀಚಿನ ದಿನಗಳಲ್ಲಿ ಏನೇನೋ ಹೇಳಿಕೆ ನೀಡುವುದರೊಂದಿಗೆ ಪಕ್ಷವನ್ನು ಅಪಮಾನ, ಅಪಹಾಸ್ಯದಂಥ ಮುಜಗರಕ್ಕೆ ತಂದಿಡುತ್ತಿದ್ದಾರೆ. ಹೀಗಾಗಿ ಇಂಥ ಕಾರ್ಯಕರ್ತರ ಹೇಳಿಕೆಗಳಿಂದಾಗಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಗಿದೆ ಎಂದು ಹೇಳಿದ್ದ ಸ್ಟಾಲಿನ್ 'ಎರಡೂ ಕಡೆಯಿಂದ ಬಾರಿಸುತ್ತಿರುವ ಡ್ರಮ್'ಗೆ ತಮ್ಮನ್ನು ಹೋಲಿಸಿಕೊಂಡಿದ್ದರು.

ಹಿಂದೆ ಕಾಂಗ್ರೆಸ್ ಮೇಲೆ ಅವಮಾನವೀಯ ತರಹ ಹೇಳಿಕೆಗಳನ್ನು ನೀಡಿದ್ದ ಹಿರಿಯ ಮುಖಂಡ ಹಾಗೂ ವಕ್ತಾರರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತುಹಾಕಲಾಗಿದೆ ನೆನಪಿಸಿ,ತರಾಟೆಗೆ ತೆಗೆದುಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ:ದ್ವೇಷ ಭಾಷಣ: ಎಸ್​ಪಿ ಸಂಸದ ಅಜಂ ಖಾನ್​ಗೆ 3 ವರ್ಷ ಜೈಲು ಶಿಕ್ಷೆ

ABOUT THE AUTHOR

...view details