ಕರ್ನಾಟಕ

karnataka

ETV Bharat / bharat

ಕನ್ಹಯ್ಯ ಕುಮಾರ್,​ ಜಿಗ್ನೇಶ್ ಮೇವಾನಿ ಕಾಂಗ್ರೆಸ್​ಗೆ ಸೇರ್ಪಡೆ

ದಲಿತ ನಾಯಕರಾದ ಜಿಗ್ನೇಶ್​ ಮೇವಾನಿ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಹುದು. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಪಂಜಾಬ್‌ನಲ್ಲಿ ದಲಿತ ನಾಯಕ ಚರಣ್​ಜಿತ್ ಸಿಂಗ್ ಚನ್ನಿಯನ್ನು ಮುಖ್ಯಮಂತ್ರಿಯಾಗಿ ನೇಮಿಸಿದ ತಂತ್ರವನ್ನೇ ಕಾಂಗ್ರೆಸ್ ಅಳವಡಿಸಿಕೊಂಡಿದೆ ಎಂದು ಹೇಳಲಾಗ್ತಿದೆ..

By

Published : Sep 28, 2021, 4:08 PM IST

Updated : Sep 28, 2021, 5:35 PM IST

Kanhaiya Kumar
ಕನ್ಹಯ್ಯ ಕುಮಾರ್,​ ಜಿಗ್ನೇಶ್ ಮೇವಾನಿ ಕಾಂಗ್ರೆಸ್​ಗೆ ಸೇರ್ಪಡೆ

ನವದೆಹಲಿ :ಸಿಪಿಐ ನಾಯಕ ಮತ್ತು ಜೆಎನ್​​​​ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಹಾಗೂ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ ಶಾಸಕ ಜಿಗ್ನೇಶ್​ ಮೇವಾನಿ ಇಂದು (ಮಂಗಳವಾರ) ಕಾಂಗ್ರೆಸ್​ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಈ ಇಬ್ಬರೂ ಯುವನಾಯಕರು ಕಾಂಗ್ರೆಸ್​ ಪಕ್ಷ ಸೇರಿದ್ದಾರೆ. ಇನ್ನು, ಈ ಬೆಳವಣಿಗೆ 2022ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​​​ ರೂಪಿಸಿರುವ ರಣತಂತ್ರದ ಒಂದು ಭಾಗವೆಂದೇ ಹೇಳಲಾಗ್ತಿದೆ. ಪಕ್ಷ ಸೇರ್ಪಡೆಗೂ ಮುನ್ನ ಕನ್ಹಯ್ಯಕುಮಾರ್ ಅವರು ಮಧ್ಯಾಹ್ನ ಶಹೀದ್-ಎ-ಅಜಮ್ ಭಗತ್ ಸಿಂಗ್ ಪಾರ್ಕ್‌ಗೆ ಭೇಟಿ ನೀಡಿದ್ದರು.

ಕನ್ಹಯ್ಯ ಕುಮಾರ್,​ ಜಿಗ್ನೇಶ್ ಮೇವಾನಿ ಕಾಂಗ್ರೆಸ್​ಗೆ ಸೇರ್ಪಡೆ

ದಲಿತ ನಾಯಕರಾದ ಜಿಗ್ನೇಶ್​ ಮೇವಾನಿ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಹುದು. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಪಂಜಾಬ್‌ನಲ್ಲಿ ದಲಿತ ನಾಯಕ ಚರಣ್​ಜಿತ್ ಸಿಂಗ್ ಚನ್ನಿಯನ್ನು ಮುಖ್ಯಮಂತ್ರಿಯಾಗಿ ನೇಮಿಸಿದ ತಂತ್ರವನ್ನೇ ಕಾಂಗ್ರೆಸ್ ಅಳವಡಿಸಿಕೊಂಡಿದೆ ಎಂದು ಹೇಳಲಾಗ್ತಿದೆ.

ರಾಜ್ಯದಲ್ಲಿ ದಲಿತ ಮತಗಳನ್ನು ಓಲೈಸುವ ಸಲುವಾಗಿ ಕಾಂಗ್ರೆಸ್​ ಈ ಹೆಜ್ಜೆ ಇಟ್ಟಿದೆ ಹಾಗೂ ಮೇವಾನಿ ಕಾಂಗ್ರೆಸ್​​ ಸೇರ್ಪಡೆಯು ಗುಜರಾತಿನಲ್ಲಿ ದಲಿತ ಸಮುದಾಯದಿಂದ ಕಾಂಗ್ರೆಸ್ ಬೆಂಬಲವನ್ನು ಪಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:ಪಂಜಾಬ್ ಪ್ರದೇಶ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ.. ರಾಜಕೀಯ ವಿಪ್ಲವ ಕಾರಣವಾಯ್ತೇ!?

Last Updated : Sep 28, 2021, 5:35 PM IST

ABOUT THE AUTHOR

...view details