ಕರ್ನಾಟಕ

karnataka

ETV Bharat / bharat

ಬ್ರಿಟಿಷರ ಕಾಲದಲ್ಲಿ ದಾಖಲಾಗಿದ್ದ ಆಸ್ತಿ ವಿವಾದಕ್ಕೆ ಸಿಕ್ಕಿತು ನ್ಯಾಯ..180 ವರ್ಷದ ಬಳಿಕ ಕೋರ್ಟ್​​ನಿಂದ ತೀರ್ಪು! - Bihar land case filed during British rule

ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಕೋರ್ಟ್​ನಲ್ಲಿ ದಾಖಲಾಗಿದ್ದ ಆಸ್ತಿ ವಿವಾದದ ಪ್ರಕರಣಕ್ಕೆ ಇದೀಗ ಮುಕ್ತಿ ದೊರಕಿದ್ದು, ಬರೋಬ್ಬರಿ 108 ವರ್ಷಗಳ ಬಳಿಕ ಕೋರ್ಟ್​ನಿಂದ ತೀರ್ಪು ಹೊರಬಿದ್ದಿದೆ.

justice after 108 years in property dispute
justice after 108 years in property dispute

By

Published : May 18, 2022, 10:08 PM IST

ಪಾಟ್ನಾ(ಬಿಹಾರ):ಬರೋಬ್ಬರಿ 108 ವರ್ಷಗಳ ಹಿಂದೆ ಕೋರ್ಟ್​ನಲ್ಲಿ ದಾಖಲಾಗಿದ್ದ ಭೂ ವಿವಾದ ಪ್ರಕರಣಕ್ಕೆ ಬಿಹಾರದ ಅರ್ರಾ ಸಿವಿಲ್ ಕೋರ್ಟ್​ ಇದೀಗ ತೀರ್ಪು ನೀಡಿದೆ. ಈ ಮೂಲಕ ನಾಲ್ಕನೇ ತಲೆಮಾರಿನ ಜನರಿಗೆ ಇದರಿಂದ ನ್ಯಾಯ ಸಿಕ್ಕಿದೆ. ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ದಾಖಲಾಗಿದ್ದ ಆಸ್ತಿ ಸಂಬಂಧದ ವಿವಾದಕ್ಕೆ ಕೊನೆಗೂ ನ್ಯಾಯ ಸಿಕ್ಕಿರುವುದು ಮಾತ್ರ ಸಮಾಧಾನ ನೀಡುವ ವಿಚಾರವಾಗಿದೆ.

ಏನಿದು ಪ್ರಕರಣ?: 1911ರಲ್ಲಿ 9 ಎಕರೆ ಜಮೀನು ಹೊಂದಿದ್ದ ಕೊಯಿಲ್ವಾರ್ ನಿವಾಸಿ ನಾಥುನಿ ಖಾನ್​ ನಿಧನರಾಗುತ್ತಾರೆ. ಈ ವೇಳೆ ಆಸ್ತಿ ಹಂಚಿಕೆ ವಿಚಾರವಾಗಿ ಪತ್ನಿ ಜೈತುನ್​, ಸಹೋದರಿ ಬೀಬಿ ಬದ್ಲಾನ್ ಹಾಗೂ ಪುತ್ರಿ ಬೀಬಿ ಸಲ್ಮಾ ನಡುವೆ ಜಗಳವಾಗುತ್ತದೆ. ಈ ಪ್ರಕರಣ 1914ರಲ್ಲಿ ಕೋರ್ಟ್ ಮೆಟ್ಟಿಲೇರುತ್ತದೆ.

1931ರ ಫೆಬ್ರವರಿ ತಿಂಗಳಲ್ಲಿ ಕೋರ್ಟ್ ಮ್ಯಾಜಿಸ್ಟ್ರೇಟ್​​ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡುತ್ತಾರೆ. ಇದನ್ನ ಪ್ರಶ್ನೆ ಮಾಡಿ ಕುಟುಂಬ ಮೇಲ್ಮನವಿ ಸಲ್ಲಿಕೆ ಮಾಡಿತು. ಇದರ ಮಧ್ಯೆ ಕೊಯಿಲ್ವಾರ್ ನಿವಾಸಿ ಅಜರ್​ ಖಾನ್​​(ದಿವಂಗತ) ಮೂರು ಎಕರೆ ಜಮೀನು ಕುಟುಂಬಸ್ಥರಿಂದ ಖರೀದಿ ಮಾಡಿದ್ದಾರೆ. ಇದಕ್ಕೂ ಸಂಬಂಧಿಸಿದಂತೆ 1927ರಲ್ಲೂ ಪ್ರಕರಣ ದಾಖಲಾಗಿದೆ. 1992ರಲ್ಲಿ ಇದರ ತೀರ್ಪು ನೀಡಲಾಗಿದ್ದು, ಖರೀದಿ ಮಾಡಿರುವ ಆಸ್ತಿ ಮರು ನೀಡುವಂತೆ ಕೋರ್ಟ್​ ಆದೇಶ ನೀಡಿದೆ. ಅಲ್ಲಿನಿಂದಲೂ ವಾದ-ಪ್ರತಿವಾದ ನಡೆಯುತ್ತಲೇ ಬಂದಿದೆ.

ಸುದೀರ್ಘ ಕಾನೂನು ಹೋರಾಟದ ಬಳಿಕ ಇದೀಗ ಕೊಯಿಲ್ವಾರ್ ಮೊಮ್ಮಗನಿಗೆ ಜಮೀನು ನೀಡಲು ತೀರ್ಪು ನೀಡಲಾಗಿದೆ. ಇದರಿಂದ ಅರವಿಂದ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾನೆ. ಜೊತೆಗೆ ಈ ತೀರ್ಪು ನಮ್ಮ ಅಜ್ಜನ ಕಾಲದಲ್ಲೇ ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದಿದ್ದಾರೆ. ವಿಶೇಷವೆಂದರೆ 3 ಎಕರೆ ಜಮೀನು ಖರೀದಿ ಮಾಡಿರುವ ಅಜರ್ ಖಾನ್​ ಕುಟುಂಬಸ್ಥರು ಸದ್ಯ ಪಾಕಿಸ್ತಾನದಲ್ಲಿ ವಾಸವಾಗಿದ್ದಾರೆ.

ಇದನ್ನೂ ಓದಿ:ಹೊಸ ಮದರಸಾಗಳಿಗೆ ಸರ್ಕಾರದ ಅನುದಾನ ಕಟ್​: ಉತ್ತರಪ್ರದೇಶ ಸರ್ಕಾರದ ಮಹತ್ವದ ನಿರ್ಧಾರ

ಪ್ರಕರಣದ ಬಗ್ಗೆ ಮಾತನಾಡಿರುವ ವಕೀಲ ಸತ್ಯೇಂದ್ರ ನಾರಾಯಣ್ ಸಿಂಗ್, ಈ ಪ್ರಕರಣದಲ್ಲಿ ಮೂರು ತಲೆಮಾರಿನ ವಕೀಲರು ಹೋರಾಡಿದ್ದು, ಇದೀಗ ತೀರ್ಪು ಹೊರಬಿದ್ದಿದೆ ಎಂದಿದ್ದಾರೆ. ಇದರ ಮಧ್ಯೆ ಕೋರ್ಟ್ ಹೈಕೋರ್ಟ್ ಮೆಟ್ಟಿಲೇರಲು ಅವಕಾಶ ನೀಡಿದ್ದು, ಪ್ರಕರಣ ಮುಂದುವರೆಯುವ ಸಾಧ್ಯತೆ ಇದೆ. ಕೋರ್ಟ್​ನ ಎಡಿಜೆ ಶ್ವೇತಾ ಕುಮಾರಿ ಸಿಂಗ್​ ಇಂದು ತೀರ್ಪು ಪ್ರಕಟಿಸಿದ್ದು, ತೀರ್ಪು ಪ್ರಶ್ನೆ ಮಾಡಿ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details