ಕರ್ನಾಟಕ

karnataka

ETV Bharat / bharat

'ಕಳಪೆ ಲಸಿಕೆ' ನಿರ್ವಹಣೆ, ಮಹಾರಾಷ್ಟ್ರದಲ್ಲಿ ಮತ್ತೆ  ಕೊರೊನಾ ಉಲ್ಬಣ: ಜಾವಡೇಕರ್​ ಕಿಡಿ - ಮಹಾರಾಷ್ಟ್ರದ ಕೋವಿಡ್ ಪ್ರಕರಣ

ಮಾರ್ಚ್ 12ರವರೆಗೆ ರಾಜ್ಯಕ್ಕೆ ಕಳುಹಿಸಲಾದ ಒಟ್ಟು 54 ಲಕ್ಷ ಲಸಿಕೆಗಳಲ್ಲಿ ಕೇವಲ 23 ಲಕ್ಷ ಲಸಿಕೆಗಳನ್ನು ಮಾತ್ರ ರಾಜ್ಯ ಸರ್ಕಾರ ಬಳಸಿದೆ. 56 ಪ್ರತಿಶತದಷ್ಟು ಲಸಿಕೆಗಳು ಬಳಕೆಯಾಗದೇ ಉಳಿದಿವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್​ ಟ್ವೀಟ್ ಮಾಡಿದ್ದಾರೆ.

Javadekar
Javadekar

By

Published : Mar 17, 2021, 1:18 PM IST

Updated : Mar 17, 2021, 4:14 PM IST

ಮುಂಬೈ: ರಾಜ್ಯದಲ್ಲಿನ ವ್ಯಾಕ್ಸಿನೇಷನ್ ಚಾಲನೆಗೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಅವರು 2.20 ಕೋಟಿ ಕೋವಿಡ್ -19 ಲಸಿಕೆ ಡೋಸ್​ ನೀಡುವಂತೆ ಕೇಂದ್ರಕ್ಕೆ ಕೋರಿದ ಒಂದು ದಿನದ ನಂತರ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, 'ಶಿವಸೇನೆ ನೇತೃತ್ವದ ಎಂವಿಎ ಸರ್ಕಾರವು ಲಸಿಕೆಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ' ಎಂದು ಆರೋಪಿಸಿದ್ದಾರೆ.

ಮಾರ್ಚ್ 12ರವರೆಗೆ ರಾಜ್ಯಕ್ಕೆ ಕಳುಹಿಸಲಾದ ಒಟ್ಟು 54 ಲಕ್ಷ ಲಸಿಕೆಗಳಲ್ಲಿ ಕೇವಲ 23 ಲಕ್ಷ ಲಸಿಕೆಗಳನ್ನು ಮಾತ್ರ ರಾಜ್ಯ ಸರ್ಕಾರ ಬಳಸಿದೆ. 56 ಪ್ರತಿಶದಷ್ಟು ಲಸಿಕೆಗಳು ಬಳಕೆಯಾಗದೇ ಉಳಿದಿವೆ ಎಂದು ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮಹಾರಾಷ್ಟ್ರವು ಹೆಚ್ಚು ಹಾನಿಗೊಳಗಾಗಿದೆ. ಸಾಂಕ್ರಾಮಿಕ ರೋಗದ ಮೊದಲ ನಿರ್ವಹಣೆಯ ಲಸಿಕೆಗಳ 'ಕಳಪೆ ನಿರ್ವಹಣಾಡಳಿತ' ಕಾರಣ ಎಂದಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಮಹಾರಾಷ್ಟ್ರ, ಕೇರಳ ಮತ್ತು ಪಂಜಾಬ್ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ 76.4ರಷ್ಟಿವೆ. ಮಹಾರಾಷ್ಟ್ರದಲ್ಲಿ ಮಾತ್ರ ಅತ್ಯಧಿಕ ಶೇ .60ರಷ್ಟು ಕೇಸ್​ಗಳಿವೆ.

ಇದನ್ನೂ ಓದಿ: ನಿದ್ರೆಗೆ ಭಂಗ ತರುತ್ತಿರುವ 'ಅಜಾನ್​' ಧ್ವನಿವರ್ಧಕ ನಿಲ್ಲಿಸುವಂತೆ ಡಿಸಿಗೆ ವಿವಿ ಕುಲಪತಿ ಪತ್ರ

ಮಾರ್ಚ್ 12ರವರೆಗೆ ಮಹಾರಾಷ್ಟ್ರ ಸರ್ಕಾರ ರಾಜ್ಯಕ್ಕೆ ಕಳುಹಿಸಿದ ಒಟ್ಟು 54 ಲಕ್ಷ ಲಸಿಕೆಗಳಲ್ಲಿ ಕೇವಲ 23 ಲಕ್ಷ ಲಸಿಕೆಗಳನ್ನು ಮಾತ್ರ ಬಳಸಿದೆ. ಶೇ 56ರಷ್ಟು ಲಸಿಕೆಗಳು ಬಳಕೆಯಾಗದೆ ಉಳಿದಿವೆ. ಈಗ ಶಿವಸೇನೆ ಸಂಸದರು ರಾಜ್ಯಕ್ಕೆ ಹೆಚ್ಚಿನ ಲಸಿಕೆಗಳನ್ನು ಕೇಳುತ್ತಾರೆ. ಸಾಂಕ್ರಾಮಿಕ ರೋಗದ ಮೊದಲ ನಿರ್ವಹಣೆಗೆ ಲಸಿಕೆಗಳ ಕಳಪೆ ಆಡಳಿತ ನಿರ್ವಹಣೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದಾರೆ.

Last Updated : Mar 17, 2021, 4:14 PM IST

ABOUT THE AUTHOR

...view details