ಲಕ್ನೋ: ಹಿಂಸಾಚಾರ ಮತ್ತು ಗುಂಪು ಹತ್ಯೆ ತಡೆ ಮಸೂದೆ 2021 ರ ಅಂಗೀಕಾರ ಸ್ವಾಗತಾರ್ಹ ಎಂದು ಜಮಿಯತ್ ಉಲೇಮಾ ಇ ಹಿಂದ್ನ ರಾಷ್ಟ್ರೀಯ ಅಧ್ಯಕ್ಷ ಮಹ್ಮದ್ ಮದನಿ ಬಣ್ಣಿಸಿದ್ದಾರೆ. ಜಾರ್ಖಂಡ್ನಂತೆ ಇತರ ರಾಜ್ಯಗಳು ಸಹ ಮುಂದೆ ಬಂದು ಇಂತಹ ಕಾನೂನುಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದು, ಇದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲ ವರ್ಗದವರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದಿದ್ದಾರೆ.
ಗುಂಪು ಹತ್ಯೆ ವಿರೋಧಿ ಮಸೂದೆ ಅಂಗೀಕಾರವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಸ್ಥಾಪಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.