ಕರ್ನಾಟಕ

karnataka

ETV Bharat / bharat

ಕೆಲಸಕ್ಕೆ ತೆರಳುತ್ತಿದ್ದ ಯುವಕನ ಅಪಹರಿಸಿ ಒಂದು ಕೋಟಿ ರೂ.ಗೆ ಬೇಡಿಕೆ: ಪೊಲೀಸರಿಗೆ ತಿಳಿಸಿದ್ದಕ್ಕೆ ಕೊಲೆ - jaipur crime news

ಯುವಕನೋರ್ವನ್ನು ಅಪಹರಿಸಿ ಕೊಲೆ ಮಾಡಿ ಮೃತದೇಹವನ್ನು ನದಿಗೆ ಎಸೆದಿರುವ ಘಟನೆ ನಡೆದಿದೆ.

ಯುವಕನ ಅಪಹರಿಸಿ ಕೊಲೆ
ಯುವಕನ ಅಪಹರಿಸಿ ಕೊಲೆ

By

Published : May 25, 2023, 9:10 PM IST

ಜೈಪುರ (ರಾಜಸ್ಥಾನ):ದುಷ್ಕರ್ಮಿಗಳುಯುವಕನೊಬ್ಬನನ್ನು ಅಪಹರಿಸಿ, ಕೊಲೆಮಾಡಿ ದೇಹವನ್ನು ನದಿಗೆ ಎಸೆದಿರುವ ಘಟನೆ ನಗರದ ಸಂಗನೇರ್ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹನುಮಂತ ಮೀನಾ ಮೃತ ಯುವಕ ಎಂದು ಗುರುತಿಸಲಾಗಿದೆ.

ಘಟನೆಯ ವಿವರ:ಹನುಮಂತ ಮೀನಾ ಕೆಲಸಕ್ಕೆ ತೆರಳುವಾಗ ಇಬ್ಬರು ಆರೋಪಿಗಳು ಆತನನ್ನು ಅಪಹರಿಸಿದ್ದಾರೆ. ಬಳಿಕ ಆತನ ಪೋಷಕರಿಗೆ ವಿಡಿಯೋ ಕರೆ ಮಾಡಿ 1 ಕೋಟಿ ರೂ ಹಣ ನೀಡುವಂತೆ, ಇಲ್ಲದಿದ್ದರೆ ನಿಮ್ಮ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ. ಅಲ್ಲದೇ ಈ ಬಗ್ಗೆ ಪೊಲೀಸರಿಗೆ ತಿಳಿಸದಂತೆ ಕುಟುಂಬ ಸದಸ್ಯರಿಗೆ ಎಚ್ಚರಿಕೆ ಕೂಡಾ ನೀಡಿದ್ದಾರೆ

ಇದರಿಂದ ಗಾಬರಿಗೊಂಡ ಹನುಮಂತನ ಪೋಷಕರು ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ. ಈ ವಿಷಯ ತಿಳಿದ ಆರೋಪಿಗಳು, ಕೋಪಗೊಂಡು ಹನುಮಂತನನ್ನು ಕೊಲೆ ಮಾಡಿ, ಶವವನನ್ನು ಗೋಣಿ ಚೀಲದಲ್ಲಿ ಕಟ್ಟಿ ದ್ರವ್ಯಾವತಿ ನದಿಗೆ ಎಸೆದು ಪರಾರಿಯಾಗಿದ್ದಾರೆ.

ಈ ಬಗ್ಗೆ ಪೊಲೀಸ್​ ಅಧಿಕಾರಿ ಮಹೇಂದ್ರ ಸಿಂಗ್ ಯಾದವ್ ಎಂಬುವವರು ಮಾಹಿತಿ ನೀಡಿದ್ದು, ಮೃತ ಯುವಕ ಡೈರಿಯೊಂದರಲ್ಲಿ ಕಂಪ್ಯೂಟರ್​ ಆಪ್ರೇಟರ್​ ಆಗಿ ಕೆಲಸ ಮಾಡುತ್ತಿದ್ದ. ಸೋಮವಾರ ಬೆಳಗ್ಗೆ ಕೆಲಸಕ್ಕೆ ಎಂದು ಕಚೇರಿಗೆ ತೆರಳಿದ್ದ ಹನುಮಂತ, ಸಂಜೆಯಾದರೂ ಮನೆಗೆ ಹಿಂತಿರುಗಿಲ್ಲ. ಬಳಿಕ ಹನುಮಂತ ಮೀನಾ ಅವರ ನಂಬರ್‌ನಿಂದ ಆರೋಪಿಗಳು ಆತನ ಪೋಷಕರಿಗೆ ವಿಡಿಯೋ ಕರೆ ಮಾಡಿ ತಮ್ಮ ಮಗನನ್ನು ಅಪಹರಿಸಿರುವುದಾಗಿ ಹೇಳಿದ್ದರು.

ಅಲ್ಲದೇ ನಿಮ್ಮ ಮಗನ್ನು ಬಿಡುಗಡೆ ಮಾಡಬೇಕಾದರೆ ಮೇ.25ರ ಒಳಗೆ 1 ಕೋಟಿ ರೂ ಕೊಡುವುಂತೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪೋಲಿಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಇದಿರಂದ ಆತಂಕಗೊಂಡ ಆತನ ಪೋಷಕರು ಸಂಗನೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ವಿಷಯ ಆರೋಪಿಗಳಿಗೆ ತಿಳಿಯುತ್ತಿದ್ದಂತೆ ಹನುಮಂತನ್ನು ಕೊಲೆ ಮಾಡಿ, ಶವವನ್ನು ಗೋಣಿಚೀಲದಲ್ಲಿ ಕಟ್ಟಿ ಸಂಗನೇರ್ ಪ್ರದೇಶದ ದ್ರವ್ಯಾವತಿ ನದಿಗೆ ಎಸೆದಿದ್ದಾರೆ. ಬಳಿಕ ಸಂಜೆ ವೇಳೆ ದ್ರವ್ಯವಾತಿ ನದಿಯ ಬಳಿ ಬೈಕ್ ಬಿದ್ದಿರುವುದು ಕಂಡು ಬಂದಿದೆ. ನಂತರ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಸ್‌ಎಂಎಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಮಹೇಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ. ವೈದ್ಯಕೀಯ ಮಂಡಳಿ ಮರಣೋತ್ತರ ಪರೀಕ್ಷೆ ನಡೆಸಲಿದೆ.

ಇದನ್ನೂ ಓದಿ:ಅಕ್ಕನ ಮದುವೆ ದಿನವೇ ತಮ್ಮ ರಸ್ತೆ ಅಪಘಾತದಲ್ಲಿ ದುರ್ಮರಣ

ABOUT THE AUTHOR

...view details