ಕರ್ನಾಟಕ

karnataka

ಇಸ್ಲಾಂ ದೇಶದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದು, ಭಾರತದಲ್ಲಿ ಮುಸ್ಲಿಮರು ಶಾಂತಿಯಿಂದ ಬದುಕುತ್ತಿದ್ದಾರೆ: ಅಜಿತ್ ದೋವಲ್

By

Published : Jul 11, 2023, 5:59 PM IST

ಸರ್ವಧರ್ಮೀಯ ಏಕತೆಯ ಸಂದೇಶವನ್ನು ತಿಳಿಸುವ ಉದ್ದೇಶದಿಂದ ಡಾ ಅಬ್ದುಲ್ಕರೀಮ್ ಅಲ್-ಇಸ್ಸಾ ಅವರು ನಾಲ್ಕು ದಿನಗಳ ಭೇಟಿಗಾಗಿ ಸೋಮವಾರ ಭಾರತಕ್ಕೆ ಭೇಟಿ ನೀಡಿದ್ದಾರೆ.

Program organized by India Islamic Culture Centre
ಇಂಡಿಯಾ ಇಸ್ಲಾಮಿಕ್ ಕಲ್ಚರ್ ಸೆಂಟರ್ ಆಯೋಜಿಸಿದ್ದ ಕಾರ್ಯಕ್ರಮ

ನವದೆಹಲಿ:ಭಾರತವು ಯಾವುದೇ ಭೇದವಿಲ್ಲದೆ ಎಲ್ಲ ಧರ್ಮಗಳನ್ನು ಸ್ವೀಕರಿಸುವ ಸ್ಥಳವಾಗಿರುವುದರಿಂದ ಭಾರತದಲ್ಲಿ ಮುಸ್ಲಿಮರು ಶಾಂತಿ ಮತ್ತು ಸಹೋದರತೆಯಿಂದ ಬದುಕುತ್ತಿದ್ದಾರೆ. ಅವರಲ್ಲಿ ಕೆಲವೇ ಕೆಲವರು ಮಾತ್ರ ವಿದೇಶದಲ್ಲಿ ಭಯೋತ್ಪಾದಕ ಗುಂಪುಗಳನ್ನು ಸೇರಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಂಗಳವಾರ ವಿಶ್ವಾದ್ಯಂತದ ಭಯೋತ್ಪಾದಕ ಗುಂಪುಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.

ನವದೆಹಲಿಯಲ್ಲಿ ಖುಸ್ರೋ ಫೌಂಡೇಶನ್ ಮತ್ತು ಇಂಡಿಯಾ ಇಸ್ಲಾಮಿಕ್ ಕಲ್ಚರ್ ಸೆಂಟರ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ಸೌದಿ ಅರೇಬಿಯಾದ ವಿದೇಶಾಂಗ ಕಾನೂನು ಸಚಿವ ಮತ್ತು ಮುಸ್ಲಿಂ ವರ್ಲ್ಡ್ ಲೀಗ್‌ನ ಪ್ರಧಾನ ಕಾರ್ಯದರ್ಶಿ ಡಾ ಮೊಹಮ್ಮದ್ ಬಿನ್ ಅಬ್ದುಲ್ಕರೀಮ್ ಅಲ್ - ಇಸ್ಸಾ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತವು ಭಯೋತ್ಪಾದನೆಗೆ ಬಲಿಪಶುವಾಗಿದ್ದು, 2008ರ ವಿನಾಶಕಾರಿ ಘಟನೆಗೆ ಇಡೀ ಜಗತ್ತೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸರ್ವಧರ್ಮೀಯ ಏಕತೆಯ ಸಂದೇಶವನ್ನು ತಿಳಿಸುವ ಉದ್ದೇಶದಿಂದ ಡಾ ಅಬ್ದುಲ್ಕರೀಮ್ ಅಲ್ - ಇಸ್ಸಾ ಅವರು ನಾಲ್ಕು ದಿನಗಳ ಭೇಟಿಗಾಗಿ ಸೋಮವಾರ ಭಾರತಕ್ಕೆ ಭೇಟಿ ನೀಡಿದ್ದಾರೆ. ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆ ನಡೆಯುತ್ತಿರುವ ವೇಳೆಯಲ್ಲೇ ಡಾ ಅಬ್ದುಲ್ಕರೀಮ್ ಅಲ್-ಇಸ್ಸಾ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತದ ಕಾನೂನು ಆಯೋಗವು ಇತ್ತೀಚೆಗೆ ಏಕರೂಪ ನಾಗರಿಕ ಸಂಹಿತೆ (UCC) ಕುರಿತು ಹೊಸ ಚರ್ಚೆ ಪ್ರಾರಂಭಿಸಿದೆ ಮತ್ತು ಅದರ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಕೋರಿದೆ.

"ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟವು ಪೂರ್ಣ ಪ್ರಮಾಣದಲ್ಲಿ ನಿರಂತರವಾಗಿದೆ. ಭಯೋತ್ಪಾದನೆ ಮತ್ತು ಉಗ್ರವಾದವನ್ನು ಕೊನೆಗೊಳಿಸುವ ಸಲುವಾಗಿ ನಾವು ವಿದೇಶಿ ರಾಷ್ಟ್ರಗಳೊಂದಿಗೂ ಸಹಕಾರ ಮುಂದುವರಿಸುತ್ತೇವೆ. ಭಯೋತ್ಪಾದನೆಗೆ ಯಾವುದೇ ಧರ್ಮ ಅಥವಾ ಜನಾಂಗೀಯತೆ ಇಲ್ಲ. ಆದರೆ, ಯುವಕರು ಕೆಲವೊಮ್ಮೆ ದಾರಿ ತಪ್ಪುತ್ತಾರೆ." ಎಂದು ಎನ್‌ಎಸ್‌ಎ ಅಜಿತ್ ದೋವಲ್ ತಿಳಿಸಿದರು.

ಭಯೋತ್ಪಾದನೆ ಮತ್ತು ಉಗ್ರವಾದವನ್ನು ಎದುರಿಸಲು ಜಾಗತಿಕ ಸಮುದಾಯವು ಒಗ್ಗೂಡಲು ಮತ್ತು ಸ್ಪಷ್ಟವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ ಎನ್‌ಎಸ್‌ಎ ದೋವಲ್, "ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟವು ನಿರಂತರವಾಗಿದೆ ಮತ್ತು ಅಂತಹ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಯಾರನ್ನಾದರೂ ಪರಿಣಾಮಕಾರಿಯಾಗಿ ಎದುರಿಸಲಾಗುವುದು" ಎಂದು ಒತ್ತಿ ಹೇಳಿದರು.

ಭಾರತದಲ್ಲಿ ನೆಲೆಸಿರುವ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ನಿರಾಶ್ರಿತರ ಕುರಿತು ಮಾತನಾಡಿದ ಅಜಿತ್ ದೋವಲ್, ಭಾರತವು ಯಾವಾಗಲೂ "ಸಂಯೋಜಿತ ಸ್ವಭಾವ" ಹೊಂದಿರುವ ದೇಶವಾಗಿದೆ ಮತ್ತು ಎಲ್ಲ ಧರ್ಮಗಳು, ಸಂಸ್ಕೃತಿಗಳು ಮತ್ತು ಜನಾಂಗಗಳನ್ನು ದೇಶ ಒಪ್ಪಿಕೊಂಡು ಜಾಗ ನೀಡಿದೆ. ತಮ್ಮ ದೇಶಗಳಲ್ಲಿ ಕಾನೂನು ಕ್ರಮಕ್ಕೆ ಒಳಗಾದ ಎಲ್ಲಾ ಜನರಿಗೆ ಭಾರತವು ಒಂದು ದೇಶವಾಗಿ ಹೊರಹೊಮ್ಮಿದೆ ಎಂದು ಅವರು ಅಫ್ಘನ್ನರು, ಬಂಗಾಳಿಗಳು, ಯಹೂದಿಗಳು ಮತ್ತು ಪಾರ್ಸಿಗಳನ್ನು ಉಲ್ಲೇಖಿಸಿ ಹೇಳಿದರು.

ಪ್ರಜಾಪ್ರಭುತ್ವ ಭಾರತದಲ್ಲಿ ಎಲ್ಲರಿಗೂ ಸ್ಥಳವಿದೆ. ಇಸ್ಲಾಂ ಭಾರತದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಹೊಂದಿದೆ, ವಿಶ್ವದ ಎರಡನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯ ನೆಲೆಯಾಗಿದೆ. ಸಮಾನತೆ ಮತ್ತು ವೈವಿಧ್ಯತೆಯ ಬಗ್ಗೆ ಮಾತನಾಡಿ, ಭಿನ್ನಾಭಿಪ್ರಾಯ ಎಂದರೆ "ವಿಘಟನೆ ಅಥವಾ ಮುಖಾಮುಖಿ" ಎಂದಲ್ಲ. ನಮ್ಮ ಸಂವಿಧಾನದಲ್ಲಿ ಸಮಾನತೆಯನ್ನು ಪ್ರತಿಪಾದಿಸಿರುವುದರಿಂದ ಭಾರತದಲ್ಲಿ ಭಿನ್ನಾಭಿಪ್ರಾಯದಿಂದಾಗಿ ಯಾರೂ ಬೆದರಿಕೆಗೆ ಒಳಗಾಗುವುದಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ:ಇಂಗ್ಲೆಂಡ್​ನ ಆಕ್ಸ್‌ಫರ್ಡ್ ನಗರದಲ್ಲಿ ಮೊದಲ ಹಿಂದೂ ದೇವಾಲಯಕ್ಕೆ ಅನುಮೋದನೆ

ABOUT THE AUTHOR

...view details