ಕರ್ನಾಟಕ

karnataka

ಐಪಿಎಲ್​ ಬೆಟ್ಟಿಂಗ್​ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ

By

Published : Nov 3, 2020, 8:48 PM IST

ಐಪಿಎಲ್​ನಲ್ಲಿ ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡಿರುವ ಯುವಕನೋರ್ವ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

IPL betting
IPL betting

ಹೈದರಾಬಾದ್​:ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಬೆಟ್ಟಿಂಗ್​ ಆಡಿ ಹಣ ಕಳೆದುಕೊಂಡಿರುವ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​​ನಲ್ಲಿ ನಡೆದಿದೆ.

ಎಳನೀರು ವ್ಯಾಪಾರ ಮಾಡುತ್ತಿದ್ದ ಸೋನು ಕುಮಾರ ಯಾದವ್​ ಆತ್ಮಹತ್ಯೆಗೆ ಶರಣಾಗಿದ್ದು, ಈತ ಮೂಲತಃ ಜಾರ್ಖಂಡ್​ನವನಾಗಿದ್ದಾನೆ. ಹೈದರಾಬಾದ್​ನ ದ್ವಾರಕಾಪುರಿ ಕಾಲೋನಿ, ಪಂಜಗುಟ್ಟದಲ್ಲಿ ಈತ ವ್ಯಾಪಾರ ನಡೆಸುತ್ತಿದ್ದ. ಇಂದು ತಾನು ವಾಸವಾಗಿದ್ದ ನಿವಾಸದ ವಾಶ್​ ರೂಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈತನೊಂದಿಗೆ ಸಂಜಯ್​ ಯಾದವ್​​ ಹಾಗೂ ಮನೋಜ್ ಎಂಬ ಇಬ್ಬರು ಸ್ನೇಹಿತರಿದ್ದರು. ಐಪಿಎಲ್​ನಲ್ಲಿ ವಿಪರೀತವಾಗಿ ಬೆಟ್ಟಿಂಗ್​ ಆಡಿ ಹಣ ಕಳೆದುಕೊಂಡ ನಂತರ ಅದರಿಂದ ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಆತನ ಸ್ನೇಹಿತರು ಕೆಲಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ABOUT THE AUTHOR

...view details